
ನಾಪೋಕ್ಲು ಅ.9 NEWS DESK : ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಹಾಗೂ ಸಂಪಾಜೆ ಪಯಸ್ವಿನಿ ಯುವಕ ಸಂಘದ ಆಶ್ರಯದಲ್ಲಿ ದ್ವಿತೀಯ ವರ್ಷದ (ಕೆಸರ್ದ ಪರ್ಬ) ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟವನ್ನು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎನ್.ಸಿ.ಅನಂತ ಉದ್ಘಾಟಿಸಿದರು. ಪಯಸ್ವಿನಿ ಯುವಕ ಸಂಘದ ಅಧ್ಯಕ್ಷ ದುಗ್ಗಳ ತೀರ್ಥಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ರಮಾದೇವಿ ಬಾಲಚಂದ್ರ ಕಳಗಿ, ಪಂಚಲಿಗೇಶ್ವರ ದೇವಸ್ಥಾನ ಸಂಪಾಜೆ ಅಧ್ಯಕ್ಷ ಜಯಕುಮಾರ್ ಚಿದ್ಕರ್, ಪಕೀರ ಅಂಬಟೆಕಜೆ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಹಾಗೂ ಡಾ.ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಯಸ್ವಿನಿ ಸಂಘದ ಎಲ್ಲಾ ಪದಾಧಿಕಾರಿಗಳು ಅನೇಕ ಕ್ರೀಡಾ ಪ್ರೇಮಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ವಿಕ್ರಂತ್ ಸಂಪಾಜೆ ಹಾಗೂ ಸುಂದರ ಸಂಪಾಜೆ ನಿರೂಪಿಸಿದರು. ಪಂದ್ಯಾಟ ಕೂಟದ ವೀಕ್ಷಕ ವಿವರಣೆ ಯನ್ನು ಖ್ಯಾತ ವೀಕ್ಷಕ ವಿವರಣೆಗಾರರಾದ ಸುರೇಶ್ ಪಡೀಪಂಡ ಮಾಡಿದರು. :: ವಿಜೇತರ ವಿವರ :: ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೂರ್ಗ್ ವರಿಯರ್ಸ್ ಪ್ರಥಮ, ಹಿಲ್ ಕ್ರಿಸ್ಟ್ ದ್ವಿತೀಯ, ಟೀಮ್ ಆದ್ಯ ಪಾಲೆಮಾಡು ತೃತೀಯ, ಟೀಮ್ ಉರ್ಕೋಲ್ಲಿಸ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ರೋಟರಿ ಸುಳ್ಯ ಪ್ರಥಮ, ಟೀಮ್ ಕುಕ್ಕುಜಡ್ಕ ದ್ವಿತೀಯ ಪಡೆದುಕೊಂಡಿತು. ಹಗ್ಗಜಗ್ಗಾಟದ ಕೊಡಗು ಭಾಗದ ತಂಡದಲ್ಲಿ ಪ್ರಥಮ ವಿಷ್ಣು ಬಳಗ ಸಂಪಾಜೆ, ಪಯಸ್ವಿನಿ ಸಂಪಾಜೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ನಂತರ ಮುಕ್ತ 525 ಕೆ.ಜಿ.ಹಗ್ಗಜಗ್ಗಾಟ ಪಂದ್ಯಾಟ ದಲ್ಲಿ ಪ್ರಥಮ ವಿಷ್ಣು ಬಳಗ ಸಂಪಾಜೆ ಪಡೆದುಕೊಂಡರೆ, ದ್ವಿತೀಯ ವಿನಾಯಕ ಕುಂಬ್ರ ತೃತೀಯ ಶಿವ ಕೃಪಾ ಆಡಿಟೋರಿಯಂ. ಚತುರ್ಥ ಮೊಗರು ಬಂದರು, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಮಹಾದೇವ ಸ್ಪೋಟ್ರ್ಸ್ ಕ್ಲಬ್ ಬಲಮುರಿ, ದ್ವಿತೀಯ ನಾಗಶ್ರೀ ಸುಳ್ಯ ಪಡೆದುಕೊಂಡಿತು. ಇನ್ನು ಅನೇಕ ವಿವಿಧ ಆಟೋಟ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ, ಪುರುಷ ಹಾಗೂ ಮಹಿಳೆಯರಿಗೆ ನಡೆಯಿತು. ವಿಜೇತರಾದ ಎಲ್ಲಾ ತಂಡಗಳಿಗೂ ವೇದಿಕೆಯಲ್ಲಿ ಗಣ್ಯರಿಂದ ಬಹುಮಾನ ವಿತರಣೆ ನಡೆಯಿತು..
ವರದಿ : ದುಗ್ಗಳ ಸದಾನಂದ.








