
ಮಡಿಕೇರಿ ಅ.10 NEWS DESK : ಜಿಲ್ಲೆಯಾದ್ಯಂತ ನಡೆದ 90 ದಿನಗಳ ವಿಶೇಷ ಮಧ್ಯಸ್ಥಗಾರಿಕಾ ಅಭಿಯಾನ ‘ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮಧ್ಯಸ್ಥಿಕಾ ಕೇಂದ್ರದಲ್ಲಿ ಇತ್ಯರ್ಥವಾದ ಪ್ರಕರಣಗಳ ವಿವರ. 2025 ರ ಜುಲೈ, 01 ಕ್ಕೆ ಮಧ್ಯಸ್ಥಿಕೆಗೆ ಅರ್ಹವಾದ ಒಟ್ಟು ಪ್ರಕರಣಗಳು 12,054, ಮಧ್ಯಸ್ಥಿಕೆಗೆ ತೆಗೆದುಕೊಂಡ ಪ್ರಕರಣಗಳು 2779, ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾದ ಪ್ರಕರಣಗಳು 61. ಒಟ್ಟು ಇತ್ಯರ್ಥವಾದ ಪ್ರಕರಣಗಳು ವೈವಾಹಿಕ ಪ್ರಕರಣಗಳು 23, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು 3, ಚೆಕ್ ಅಮಾನ್ಯ ಪ್ರಕರಣಗಳು 20, ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಗಣಳು 1, ಪಾಲು ವಿಭಾಗ ಪ್ರಕರಣಗಳು(ಸಿವಿಲ್ ವ್ಯಾಜ್ಯ) 2, ಇತರೆ ಸಿವಿಲ್ ವ್ಯಾಜ್ಯಗಳು 12 ಆಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.








