
ಕುಶಾಲನಗರ ಅ.17 NEWS DESK : ಕುಶಾಲನಗರ ಬಾಡಿಗೆ ಕಾರು ಮಾಲೀಕರು ಮತ್ತು ಚಾಲಕರ ಸಂಘದ 2025-28 ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಎ.ಉದಯಕುಮಾರ್ ಪುನರ್ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ಗೌರವಾಧ್ಯಕ್ಷರಾಗಿ ಸೋಮೆಯಂಡ ವಿಜು, ಉಪಾಧ್ಯಕ್ಷರಾಗಿ ಡಿ.ಆರ್.ಸೋಮೇಶ್,ಪ್ರಧಾನ ಕಾರ್ಯದರ್ಶಿಯಾಗಿ ಮಾನ್ವಲ್ ಬಿ.ಫರ್ನಾಂಡೀಸ್,
ಸಹ ಕಾರ್ಯದರ್ಶಿ ಅಜಯ್, ಖಜಾಂಚಿಯಾಗಿ ಇ.ಪಿ.ಪ್ರೇಮ್ ಪ್ರಕಾಶ್ ,ಸಲಹೆಗಾರರಾಗಿ ಮನುನಂಜುಂಡ,ಕೆ.ಎನ್.ಅಶೋಕ್ ಹಾಗೂ ನಿದೇಶಕರಾಗಿ ಭಾಸ್ಕರ್, ಕೆ.ರಾಜು,ಸುರೇಶ್, ಉಮ್ಮರ್,ರವಿ,ಮನುಕುಮಾರ್,ರಿಯಾಜ್,ಶ್ರೀನಿವಾಸ್ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









