
ಮಡಿಕೇರಿ ಜ.17 NEWS DESK : ನಗರದ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದ ಶಿವಲಿಂಗಕ್ಕೆ ಚೆನ್ನೈ ಮೂಲದ ರಮೇಶ್ ಪ್ರಕಾಶ್ ಹಾಗೂ ಕುಟುಂಬಸ್ಥರು ಬೆಳ್ಳಿಯ ನಾಗರೂಪವನ್ನು ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಇವರು ಶಿವಲಿಂಗಕ್ಕೆ ಬೆಳ್ಳಿಯ ಕವಚ ಅರ್ಪಿಸಿದ್ದರು. ಇದೀಗ ಮತ್ತೆ ಸಮಾರು 700 ಗ್ರಾಂ ತೂಕದ ಬೆಳ್ಳಿಯ ನಾಗರೂಪವನ್ನು ಸಮರ್ಪಣೆ ಮಾಡಿದ್ದಾರೆ. ನಾಗರೂಪವನ್ನು ಹಸ್ತಾಂತರಿಸುವ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯ ಅಂಬೆಕಲ್ ಕುಶಾಲಪ್ಪ, ಸಂತೋಷ್ ಭಟ್, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಸಿಬ್ಬಂದಿ ವರ್ಗ, ಭಕ್ತರು ಹಾಗೂ ಅರ್ಚಕ ವರ್ಗದವರು ಹಾಜರಿದ್ದರು.









