
ಸುಂಟಿಕೊಪ್ಪ ಫೆ.24 NEWS DESK : ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ 2026-27ನೇ ಸಾಲಿನ 3ನೇ ಬಾರಿಗೆ ಅಧ್ಯಕ್ಷರಾಗಿ ಪಟ್ಟೆಮನೆ ಉದಯಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಸಿ.ಮೋಹನ್ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಯಂಕನ ಶ್ರೀರಾಮ್, ಬಿ.ಡಿ.ರಾಜು ರೈ, ಖಜಾಂಚಿಯಾಗಿ ರಮೇಶ್ಪಿಳ್ಳೆ, ಸಂಘಟನಾ ಕಾರ್ಯದರ್ಶಿಯಾಗಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೆ.ಪಿ.ವಿನೋದ್, ಟಿ.ಕೆ.ಹರೀಶ್, ತಮಿಳ್ ಸಂಘದ ಅಧ್ಯಕ್ಷ ಅಯ್ಯಪ್ಪ, ಮಣಿಮುಖೇಶ್, ಚಂದು ಸುರೇಶ್, ಪವಿತ್ರಶೆಟ್ಟಿ, ನಳಿನಿ ಲೋಕೇಶ್, ಜಾನ್ ಭಾಸ್ಕರ, ವೀಣಾ ರೈ ಸೇರಿದಂತೆ 25 ಮಂದಿಯನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರುಗಳಾಗಿ ಕೆ.ಪಿ.ಜಗನ್ನಾಥ್, ಎಸ್.ಜಿ.ಶ್ರೀನಿವಾಸ್, ಶಶಿಕಾಂತ್ರೈ, ಜೆ.ಎನ್.ಚಂದ್ರಶೇಖರ್, ಕೆ.ಪಿ.ಜಗದೀಶ್ ರೈ ಅವರು ನೇಮಕಗೊಂಡರು. ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇದೇ ವಾರ್ಷಿಕ ಮಹಾಸಭೆಯು ಪಟ್ಟೆಮನೆ ಉದಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.









