
ಮಡಿಕೇರಿ ಫೆ.25 NEWS DESK : ತ್ರಿವೇಣಿ ಪೊಮ್ಮಕ್ಕಡ ಕೂಟದ ಪ್ರಮುಖರು ನಗರದ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಕೂಟದ ಅಧ್ಯಕ್ಷರಾದ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಉಪಾಧ್ಯಕ್ಷರಾದ ಬೊಪ್ಪoಡ ಸರಳ ಕರುಂಬಯ್ಯ, ಕಾರ್ಯದರ್ಶಿ ಮಲ್ಚೀರ ಯಶೋಧ ದೇವಯ್ಯ ಸದಸ್ಯರುಗಳಾದ ಕೂಪದಿರ ಜೂನಾ ವಿಜಯ್, ಉಡುವೇರ ರೇಖಾ ರಘು, ಅಮ್ಮoಡಿರ ರಾಣಿ ಮುತ್ತಮ್ಮ, ಮುಕ್ಕಾಟಿರ ಸವಿತಾ, ಕರವ0ಡ ಸೀಮಾ, ಚಿಂಡಮಾಡ ಸರಿತಾ ಮೊಣ್ಣಪ್ಪ, ಕೊಡಂದೇರ ಸ್ವಾತಿ ಲವ ಅವರು ಭೇಟಿ ನೀಡಿ ವಯೋವೃದ್ಧರ ಸಮಸ್ಯೆಗಳನ್ನು ಆಲಿಸಿದರು. ನಂತರ ವಿವಿಧ ಅಗತ್ಯತೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ವೃದ್ಧರಿಗೆ ರಾತ್ರಿಯ ಭೋಜನದ ವ್ಯವಸ್ಥೆ ಮಾಡಿದರು.









