
ವಿರಾಜಪೇಟೆ ಮೇ 1 NEWS DESK : ದಕ್ಷಿಣ ಕನ್ನಡದಲ್ಲಿ ಪ್ರಚಲಿತದಲ್ಲಿರುವ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಮೇ 5 ರಂದು ಕಡಂಗಮೂರೂರು ಗ್ರಾಮದ ನಾಲ್ಕನೇ ಮೈಲಿನಲ್ಲಿ ನಡೆಯಲಿದೆ. ವಿರಾಜಪೇಟೆ ತಾಲ್ಲೂಕಿನ ಕಡಂಗಮೂರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕನೇ ಮೈಲಿಯ ಪಿ.ಪಿ. ಲೋಕೇಶ್ ಅವರ ಮನೆಯಲ್ಲಿ 3ನೇ ವರ್ಷದ ದೈವಗಳ ನೇಮೋತ್ಸವ ನಡೆಯಲಿದೆ. ಮೇ 5 ರಂದು ಸಂಜೆ ದೈವಗಳಿಗೆ ಅಲಂಕಾರ ಸೇವೆ, ಮಹಾಪೂಜೆ, ಚಂಡೆವಾದ್ಯ ನಂತರ ಪಾಷಾಣಮೂರ್ತಿ ದೈವ ಮತ್ತು ಇತರ ದೈವಗಳ ದರ್ಶನ ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಅಣ್ಣಪ್ಪ ಪಂಜರ್ಲಿ ದೈವ ನೇಮ, ವರ್ಣ ಪಂಜುರ್ಲಿ ದೈವ ಮತ್ತು ಪಾಷಾಣಮೂರ್ತಿ ದೈವಗಳ ನೇಮ ನಡೆಯಲಿದೆ. ಮೇ 6 ರಂದು ಬೆಳಿಗ್ಗೆ ಗುಳಿಗ ಮತ್ತು ಕೊರಗಜ್ಹ ದೈವಗಳ ನೇಮ ನಡೆಯಲಿದೆ. ದೈವಗಳಿಗೆ ಪ್ರಸಾದ ಅರ್ಪಣೆ, ಅಗಮಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಿ.ಪಿ.ಲೋಕೇಶ್ 8105403505, ಪ್ರಮೀಳಾ 8867147501, ವಾಣಿ : 8147704308 ಮತ್ತು ಜಗದೀಶ್ : 9482332337 ಸಂಖ್ಯೆ ಗಳನ್ನು ಸಂಪರ್ಕಿಸುವುದು. ಎರಡು ದಿನಗಳು ನಡೆಯುವ ದೈವಗಳ ನೇಮೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕುಟುಂಬ ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ









