ಮಡಿಕೇರಿ NEWS DESK ಜು.7 : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್)ಗೆ ಸಂಬAಧಿಸಿದ ಅಗತ್ಯ ದಾಖಲೆಗಳಿಲ್ಲದೆ ಆದಿವಾಸಿ, ದಲಿತ ಮತ್ತು ಬಡ ವರ್ಗದ ಸಮುದಾಯ ಮತದಾನದಿಂದ ವಂಚಿತವಾಗುವ ಸಾಧ್ಯತೆಗಳಿರುವುದರಿಂದ ಇವರುಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಆಗ್ರಹಿಸಿ ವಿವಿಧ ಶ್ರಮಿಕ ಹಾಗೂ ಆದಿವಾಸಿ ಸಂಘÀಟನೆಗಳಿAದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ರಾಜ್ಯ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಮತದಾನದ ಹಕ್ಕನ್ನು ಉಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಭರತ್ ಅವರು ಸ್ವಾತಂತ್ರಾö್ಯನAತರದ ಆರಂಭಿಕ ಕಾಲ ಘಟ್ಟದ ಚುನಾವಣಾ ಆಯೋಗ, ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ, ಅವರಿಗೆ ಮತದ ಹಕ್ಕನ್ನು ಒದಗಿಸಬೇಕೆನ್ನುವ ಚಿಂತನೆಯನ್ನು ಹೊಂದಿತ್ತು. ಪ್ರಸ್ತುತ ಆಯೋಗ ನಡೆಸುತ್ತಿರುವ ಎಸ್ಐಆರ್ನಿಂದ ಮತ ಪತ್ರದಿಂದ ಹೆಸರು ಬಿಟ್ಟು ಹೋದವರನ್ನು ಮತ್ತೆ ಪಟ್ಟಿಗೆ ಸೇರಿಸುವ ಚಿಂತನೆಯ ಬದಲಾಗಿ, ಮತದಾರರನ್ನು ಮತದಾನದಿಂದ ಹೊರಗಿಡುವ ಹುನ್ನಾರ ನಡೆದಿದೆಯೇ ಎನ್ನುವ ಸಂಶಯ ಕಾಡುತ್ತಿದೆ ಎಂದು ಆರೋಪಿಸಿದರು.
ಮತದಾರರ ಪೌರತ್ವ ತೆಗೆದು ಹಾಕುವ ಕೆಲಸ ಚುನಾವಣಾ ಅಧಿಕಾರಿಗಳದ್ದಲ್ಲ. ಜಿಲ್ಲೆಯಲ್ಲಿ ಆದಿವಾಸಿಗಳು, ದಲಿತ ಸಮೂಹದ ಸುಮಾರು 7 ಸಾವಿರ ಮಂದಿ ಈ ಎಸ್ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕವನ್ನು ವ್ಯಕ್ತಪಡಿಸಿದ ಭರತ್, ಇಲ್ಲಿಯವರೆಗೆ ದೇಶದ ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ನಡೆದ ಎಸ್ಐಆರ್ನಿಂದ ಲಕ್ಷಾಂತರ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ ಎಂದರು.
ರಾಜ್ಯ ಚುನಾವಣಾಧಿಕಾರಿಗಳು ಜೂ.30 ರಿಂದ ಜು.29ರವರೆಗೆ ಎಸ್ಐಆರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಅವಕಾಶ ಕಲ್ಪಿಸಿದ್ದಾರೆ. ಆದರೆ, ಆದಿವಾಸಿಗಳು, ದಲಿತ ಹಾಗೂ ಬಡ ಮಂದಿಗೆ ಎಸ್ಐಆರ್ನಲ್ಲಿ ಸೂಚಿಸಿರುವ ಆಧಾರ್, ಐಡಿ, ಪಡಿತರ, ಜನ್ಮದಿನಾಂಕ ದೃಢೀಕರಣ ಪತ್ರಗಳೇ ಇಲ್ಲವೆಂದು ಕಳವಳ ವ್ಯಕ್ತಪಡಿಸಿದ ಅವರು ಇಂತಹ ದಾಖಲೆಗಳನ್ನು ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

*ಮನವಿಯ ಸಾರಾಂಶ*
ಮನವಿಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಆದಿವಾಸಿ, ದಲಿತ ಕುಟುಂಬಗಳು ತೋಟದ ಮನೆಯಲ್ಲಿ ವಾಸವಿದ್ದು, ತೋಟದಿಂದ ತೋಟಕ್ಕೆ ದುಡಿಮೆಗಾಗಿ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಕಾರ್ಮಿಕರ ಮೂಲ ದಾಖಲಾತಿಗಳು ಕಾರ್ಮಿಕರ ಕೈಯಲ್ಲಿ ಇರುವುದಿಲ್ಲ. ಮಾಲೀಕರ ಕೈಯಲ್ಲಿ ನೀಡಿರುತ್ತಾರೆ. ಈ ರೀತಿಯಲ್ಲಿ ತೋಟ ಬಿಟ್ಟು ಹೋಗುವ ಸಂದರ್ಭದಲ್ಲಿ ಮಾಲೀಕರು ಹೇಳುವ ಸಾಲವನ್ನು ನೀಡಲು ಸಾಧ್ಯವಾಗದೆ ಕಾರ್ಮಿಕರು ಮತ್ತೊಂದು ತೋಟಕ್ಕೆ ವಲಸೆ ಹೋಗುತ್ತಾರೆ. ಈ ರೀತಿಯ ಸಾಲದ ಹೆಸರಿನಲ್ಲಿ ಜಿಲ್ಲೆಯ ಆದಿವಾಸಿ ದಲಿತ ಕುಟುಂಬಗಳು ತಮ್ಮ ಮೂಲ ದಾಖಲಾತಿಗಳನ್ನು ಕಳೆದುಕೊಂಡಿರುವವರ ಸಂಖ್ಯೆ ತುಂಬಾ ಇದ್ದು, ಇಂತಹವರು ಎಸ್ಐಆರ್ನಲ್ಲಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಆದಿವಾಸಿಗಳು, ದಲಿತರು ಇರುವ ಹಾಡಿ, ಲೈನ್ ಮನೆ ಮತ್ತು ಕಾಲೋನಿಗಳಲ್ಲಿ ವಾಸಿಸುವ ಈ ಕುಟುಂಬಗಳನ್ನು ಎಸ್ಐಆರ್ಗೆ ಸೇರ್ಪಡಿಸಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡ ಹೆಚ್.ಬಿ.ರಮೇಶ್, ಸಿಐಟಿಯು ಜಿಲ್ಲಾಧ್ಯಕ್ಷರಾದ ಎ.ಸಿ.ಸಾಬು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಅಧ್ಯಕರಾದ ಜೆ.ಆರ್. ಪ್ರೇಮ, ಕೃಷಿ ಕೂಲಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಕೆ.ರಮೇಶ್, ಪಾರ್ವತಿ ಸುರೇಶ್, ಪಿ.ವಿ.ರವಿ, ಅಮೀನ್, ಭಾಗ್ಯ ಚಂಗಪ್ಪ, ಸಾದಿಕ್, ಜೆ.ಆರ್.ಸೀತೆ, ವೈ.ಆರ್.ರಘು, ಜೆ.ಆರ್.ಸುರೇಶ್, ವೈ.ಆರ್.ಮುತ್ತ ಸೆÀರಿದಂತೆ ಹಲ ಪ್ರಮುಖರು, ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು. ಫೋಟೋ :: ಪ್ರೊಟೆಸ್ಟ್







