Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗೌಡ ಯುವ ವೇದಿಕೆಯಿಂದ ಸೌಹಾರ್ದ ಸಹಕಾರ ಸಂಘ ರಚನೆ  : ಸಭೆಯಲ್ಲಿ ತೀರ್ಮಾನ*
  • *ಸುಂಟಿಕೊಪ್ಪ : ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಅನುದಾನ ಘೋಷಣೆ*
  • *ಜು.9 ರಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಿಪ್ರ ಸಭಾ ಭವನ ಉದ್ಘಾಟನೆ*
  • *ಕೊಡಗಿನಲ್ಲಿ ಮಳೆ ಬಿರುಸು : ವಿವಿಧೆಡೆ ಹಾನಿ : ಜು.8ರಂದು ಶಾಲೆಗಳಿಗೆ ರಜೆ*
  • *ಎಸ್‌ಐಆರ್ ಪ್ರಕ್ರಿಯೆ: ದಾಖಲೆಗಳಿಲ್ಲದೆ ಮತದಾನದಿಂದ ವಂಚಿತರಾಗುವ ಆತಂಕ : ಮಡಿಕೇರಿಯಲ್ಲಿ ಪ್ರತಿಭಟನೆ*
  • *ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಆರಂಭ*
  • *ಕೊಡಗು : ಜಲಪಾತಗಳು, ಝರಿ, ನದಿ, ತೊರೆಗಳಲ್ಲಿ ನಿರ್ಬಂಧ*
  • **ಕಿಕ್ ಬಾಕ್ಸಿಂಗ್ ನಲ್ಲಿ ಬೆಳ್ಳಿ ಗೆದ್ದ ಸೋಮವಾರಪೇಟೆಯ ವಿದ್ಯಾರ್ಥಿಗಳು**
  • *ಕಿಕ್ ಬಾಕ್ಸಿಂಗ್ ನಲ್ಲಿ ಬೆಳ್ಳಿ ಗೆದ್ದ ಸೋಮವಾರಪೇಟೆಯ ವಿದ್ಯಾರ್ಥಿಗಳು*
  • *ಕೊಡಗಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಲಿ : ಸಂಸದ ಯದುವೀರ್ ಒತ್ತಾಯ : ಕೇಂದ್ರದಿoದ ಸಹಕಾರ ಕೊಡಿಸುವ ಭರವಸೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಎಸ್‌ಐಆರ್ ಪ್ರಕ್ರಿಯೆ: ದಾಖಲೆಗಳಿಲ್ಲದೆ ಮತದಾನದಿಂದ ವಂಚಿತರಾಗುವ ಆತಂಕ : ಮಡಿಕೇರಿಯಲ್ಲಿ ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಎಸ್‌ಐಆರ್ ಪ್ರಕ್ರಿಯೆ: ದಾಖಲೆಗಳಿಲ್ಲದೆ ಮತದಾನದಿಂದ ವಂಚಿತರಾಗುವ ಆತಂಕ : ಮಡಿಕೇರಿಯಲ್ಲಿ ಪ್ರತಿಭಟನೆ*

ಜುಲೈ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜು.7 : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್)ಗೆ ಸಂಬAಧಿಸಿದ ಅಗತ್ಯ ದಾಖಲೆಗಳಿಲ್ಲದೆ ಆದಿವಾಸಿ, ದಲಿತ ಮತ್ತು ಬಡ ವರ್ಗದ ಸಮುದಾಯ ಮತದಾನದಿಂದ ವಂಚಿತವಾಗುವ ಸಾಧ್ಯತೆಗಳಿರುವುದರಿಂದ ಇವರುಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಆಗ್ರಹಿಸಿ ವಿವಿಧ ಶ್ರಮಿಕ ಹಾಗೂ ಆದಿವಾಸಿ ಸಂಘÀಟನೆಗಳಿAದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ರಾಜ್ಯ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಮತದಾನದ ಹಕ್ಕನ್ನು ಉಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಭರತ್ ಅವರು ಸ್ವಾತಂತ್ರಾö್ಯನAತರದ ಆರಂಭಿಕ ಕಾಲ ಘಟ್ಟದ ಚುನಾವಣಾ ಆಯೋಗ, ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ, ಅವರಿಗೆ ಮತದ ಹಕ್ಕನ್ನು ಒದಗಿಸಬೇಕೆನ್ನುವ ಚಿಂತನೆಯನ್ನು ಹೊಂದಿತ್ತು. ಪ್ರಸ್ತುತ ಆಯೋಗ ನಡೆಸುತ್ತಿರುವ ಎಸ್‌ಐಆರ್‌ನಿಂದ ಮತ ಪತ್ರದಿಂದ ಹೆಸರು ಬಿಟ್ಟು ಹೋದವರನ್ನು ಮತ್ತೆ ಪಟ್ಟಿಗೆ ಸೇರಿಸುವ ಚಿಂತನೆಯ ಬದಲಾಗಿ, ಮತದಾರರನ್ನು ಮತದಾನದಿಂದ ಹೊರಗಿಡುವ ಹುನ್ನಾರ ನಡೆದಿದೆಯೇ ಎನ್ನುವ ಸಂಶಯ ಕಾಡುತ್ತಿದೆ ಎಂದು ಆರೋಪಿಸಿದರು.
ಮತದಾರರ ಪೌರತ್ವ ತೆಗೆದು ಹಾಕುವ ಕೆಲಸ ಚುನಾವಣಾ ಅಧಿಕಾರಿಗಳದ್ದಲ್ಲ. ಜಿಲ್ಲೆಯಲ್ಲಿ ಆದಿವಾಸಿಗಳು, ದಲಿತ ಸಮೂಹದ ಸುಮಾರು 7 ಸಾವಿರ ಮಂದಿ ಈ ಎಸ್‌ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕವನ್ನು ವ್ಯಕ್ತಪಡಿಸಿದ ಭರತ್, ಇಲ್ಲಿಯವರೆಗೆ ದೇಶದ ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ನಡೆದ ಎಸ್‌ಐಆರ್‌ನಿಂದ ಲಕ್ಷಾಂತರ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ ಎಂದರು.
ರಾಜ್ಯ ಚುನಾವಣಾಧಿಕಾರಿಗಳು ಜೂ.30 ರಿಂದ ಜು.29ರವರೆಗೆ ಎಸ್‌ಐಆರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಅವಕಾಶ ಕಲ್ಪಿಸಿದ್ದಾರೆ. ಆದರೆ, ಆದಿವಾಸಿಗಳು, ದಲಿತ ಹಾಗೂ ಬಡ ಮಂದಿಗೆ ಎಸ್‌ಐಆರ್‌ನಲ್ಲಿ ಸೂಚಿಸಿರುವ ಆಧಾರ್, ಐಡಿ, ಪಡಿತರ, ಜನ್ಮದಿನಾಂಕ ದೃಢೀಕರಣ ಪತ್ರಗಳೇ ಇಲ್ಲವೆಂದು ಕಳವಳ ವ್ಯಕ್ತಪಡಿಸಿದ ಅವರು ಇಂತಹ ದಾಖಲೆಗಳನ್ನು ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.


*ಮನವಿಯ ಸಾರಾಂಶ*
ಮನವಿಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಆದಿವಾಸಿ, ದಲಿತ ಕುಟುಂಬಗಳು ತೋಟದ ಮನೆಯಲ್ಲಿ ವಾಸವಿದ್ದು, ತೋಟದಿಂದ ತೋಟಕ್ಕೆ ದುಡಿಮೆಗಾಗಿ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಕಾರ್ಮಿಕರ ಮೂಲ ದಾಖಲಾತಿಗಳು ಕಾರ್ಮಿಕರ ಕೈಯಲ್ಲಿ ಇರುವುದಿಲ್ಲ. ಮಾಲೀಕರ ಕೈಯಲ್ಲಿ ನೀಡಿರುತ್ತಾರೆ. ಈ ರೀತಿಯಲ್ಲಿ ತೋಟ ಬಿಟ್ಟು ಹೋಗುವ ಸಂದರ್ಭದಲ್ಲಿ ಮಾಲೀಕರು ಹೇಳುವ ಸಾಲವನ್ನು ನೀಡಲು ಸಾಧ್ಯವಾಗದೆ ಕಾರ್ಮಿಕರು ಮತ್ತೊಂದು ತೋಟಕ್ಕೆ ವಲಸೆ ಹೋಗುತ್ತಾರೆ. ಈ ರೀತಿಯ ಸಾಲದ ಹೆಸರಿನಲ್ಲಿ ಜಿಲ್ಲೆಯ ಆದಿವಾಸಿ ದಲಿತ ಕುಟುಂಬಗಳು ತಮ್ಮ ಮೂಲ ದಾಖಲಾತಿಗಳನ್ನು ಕಳೆದುಕೊಂಡಿರುವವರ ಸಂಖ್ಯೆ ತುಂಬಾ ಇದ್ದು, ಇಂತಹವರು ಎಸ್‌ಐಆರ್‌ನಲ್ಲಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಆದಿವಾಸಿಗಳು, ದಲಿತರು ಇರುವ ಹಾಡಿ, ಲೈನ್ ಮನೆ ಮತ್ತು ಕಾಲೋನಿಗಳಲ್ಲಿ ವಾಸಿಸುವ ಈ ಕುಟುಂಬಗಳನ್ನು ಎಸ್‌ಐಆರ್‌ಗೆ ಸೇರ್ಪಡಿಸಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡ ಹೆಚ್.ಬಿ.ರಮೇಶ್, ಸಿಐಟಿಯು ಜಿಲ್ಲಾಧ್ಯಕ್ಷರಾದ ಎ.ಸಿ.ಸಾಬು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಅಧ್ಯಕರಾದ ಜೆ.ಆರ್. ಪ್ರೇಮ, ಕೃಷಿ ಕೂಲಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಕೆ.ರಮೇಶ್, ಪಾರ್ವತಿ ಸುರೇಶ್, ಪಿ.ವಿ.ರವಿ, ಅಮೀನ್, ಭಾಗ್ಯ ಚಂಗಪ್ಪ, ಸಾದಿಕ್, ಜೆ.ಆರ್.ಸೀತೆ, ವೈ.ಆರ್.ರಘು, ಜೆ.ಆರ್.ಸುರೇಶ್, ವೈ.ಆರ್.ಮುತ್ತ ಸೆÀರಿದಂತೆ ಹಲ ಪ್ರಮುಖರು, ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು. ಫೋಟೋ :: ಪ್ರೊಟೆಸ್ಟ್

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗೌಡ ಯುವ ವೇದಿಕೆಯಿಂದ ಸೌಹಾರ್ದ ಸಹಕಾರ ಸಂಘ ರಚನೆ  : ಸಭೆಯಲ್ಲಿ ತೀರ್ಮಾನ*

ಜುಲೈ 7, 2026

*ಸುಂಟಿಕೊಪ್ಪ : ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಅನುದಾನ ಘೋಷಣೆ*

ಜುಲೈ 7, 2026

*ಜು.9 ರಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಿಪ್ರ ಸಭಾ ಭವನ ಉದ್ಘಾಟನೆ*

ಜುಲೈ 7, 2026

*ಸುಂಟಿಕೊಪ್ಪ : ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಅನುದಾನ ಘೋಷಣೆ*

ಜುಲೈ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಜು.8 NEWS DESK : ಸಹಕಾರ ಕ್ಷೇತ್ರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರಶ್ನಿಸುವ ಗುಣಗಳನ್ನು ಪ್ರತಿಯೊಬ್ಬ ಸದಸ್ಯರು ಬೆಳೆಸಿಕೊಂಡಾಗ ಮಾತ್ರ…

*ಜು.9 ರಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಿಪ್ರ ಸಭಾ ಭವನ ಉದ್ಘಾಟನೆ*

ಜುಲೈ 7, 2026

*ಕೊಡಗಿನಲ್ಲಿ ಮಳೆ ಬಿರುಸು : ವಿವಿಧೆಡೆ ಹಾನಿ : ಜು.8ರಂದು ಶಾಲೆಗಳಿಗೆ ರಜೆ*

ಜುಲೈ 7, 2026

*ಎಸ್‌ಐಆರ್ ಪ್ರಕ್ರಿಯೆ: ದಾಖಲೆಗಳಿಲ್ಲದೆ ಮತದಾನದಿಂದ ವಂಚಿತರಾಗುವ ಆತಂಕ : ಮಡಿಕೇರಿಯಲ್ಲಿ ಪ್ರತಿಭಟನೆ*

ಜುಲೈ 7, 2026

*ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಆರಂಭ*

ಜುಲೈ 7, 2026

*ಕೊಡಗು : ಜಲಪಾತಗಳು, ಝರಿ, ನದಿ, ತೊರೆಗಳಲ್ಲಿ ನಿರ್ಬಂಧ*

ಜುಲೈ 7, 2026

**ಕಿಕ್ ಬಾಕ್ಸಿಂಗ್ ನಲ್ಲಿ ಬೆಳ್ಳಿ ಗೆದ್ದ ಸೋಮವಾರಪೇಟೆಯ ವಿದ್ಯಾರ್ಥಿಗಳು**

ಜುಲೈ 7, 2026

*ಕಿಕ್ ಬಾಕ್ಸಿಂಗ್ ನಲ್ಲಿ ಬೆಳ್ಳಿ ಗೆದ್ದ ಸೋಮವಾರಪೇಟೆಯ ವಿದ್ಯಾರ್ಥಿಗಳು*

ಜುಲೈ 7, 2026

*ಕೊಡಗಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಲಿ : ಸಂಸದ ಯದುವೀರ್ ಒತ್ತಾಯ : ಕೇಂದ್ರದಿoದ ಸಹಕಾರ ಕೊಡಿಸುವ ಭರವಸೆ*

ಜುಲೈ 7, 2026

*ಸುಂಟಿಕೊಪ್ಪ : ಮನೆಯ ಗೋಡೆ ಕುಸಿತ*

ಜುಲೈ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.