ಲೇಖಕ: admin

ಮಡಿಕೇರಿ ಜ.27 NEWS DESK : ಪುಟಾಣಿ ವಿಜ್ಞಾನ ಬಳಗ ದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆ ಯಲ್ಲಿ ಚೇರಂಬಾಣೆ ಕೊಟ್ಟೂರ್ ರಾಜರಾಜೇಶ್ವರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ಒಟ್ಟು 72 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಭವಿಷ್ಯ ಕೆ. ಬಿ ರಾಷ್ಟ್ರಮಟ್ಟದಲ್ಲಿ ಐದನೇ ಸ್ಥಾನ, 7ನೇ ತರಗತಿಯ ಜಿಶ್ಮಿತ ಬಿ. ಜಿ ಐದನೇ ಸ್ಥಾನ,ರಾಜ್ಯಮಟ್ಟದಲ್ಲಿ 6ನೇ ತರಗತಿಯ ತನ್ಮಯಿ ಕೆ. ಕೆ 5ನೇ ಸ್ಥಾನ,7ನೇ ತರಗತಿಯ ತಾನಿಯ ಕೆ. ಟಿ . 6ನೇ ಸ್ಥಾನ,ಜಿಲ್ಲಾ ಮಟ್ಟದಲ್ಲಿ 6ನೇ ತರಗತಿಯ ಶ್ರಿಹರಿ ಪೊನ್ನಪ್ಪ 6ನೇ ಸ್ಥಾನ, 7ನೇ ತರಗತಿಯ ವರುಣಿಕ ಪಿ. ಎಂ. 6ನೇ ಸ್ಥಾನ, ತಾಲ್ಲೂಕು ಮಟ್ಟದಲ್ಲಿ 6ನೇ ತರಗತಿಯ ವಾಸವಿ ಪಿ.ವಿ, 4ನೇ ಸ್ಥಾನ 7ನೇ ತರಗತಿಯ ದಕ್ಷ ಬೊಳ್ಳಮ್ಮ 4ನೇ ಸ್ಥಾನಪಡೆದು ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ವಿದ್ಯಾಸಂಸ್ಥೆಯ…

Read More

ಬೆಂಗಳೂರು ಜ.27 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಖ್ಯಾತ ನಟ ಶಿವರಾಜ್ ಕುಮಾರ್ ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆಯ ನಂತರ ಹಿಂತಿರುಗಿ ಬಂದ ನಂತರ ಅವರ ಆರೋಗ್ಯವನ್ನು ವಿಚಾರಿಸಲು ಇಂದು ಭೇಟಿ ಮಾಡಿದ್ದೇನೆ. ಅವರ ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆಯಾಡಿ ಆರೋಗ್ಯ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದರು. ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

Read More

ನಾಪೋಕ್ಲು ಜ.27 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಸಂಯುಕ್ತಾಶ್ರಯದಲ್ಲಿ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕದತ್ತಿ ಮತ್ತು ಎಸ್ ಎಸ್ ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಾಪೋಕ್ಲವಿನ ಎಕ್ಸೆಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಿ.ಕೆ.ತಿಮ್ಮಯ್ಯ ಮಾತನಾಡಿ, ಕೊಡಗಿನ ಸಾಹಿತಿಗಳು ಹಾಗೂ ವೀರಸೇನಾನಿಗಳಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾರ್ಯಪ್ಪ ಅವರ ಕುರಿತು ಉಪನ್ಯಾಸ ನೀಡಿದರು. ಅಲ್ಲದೇ ವಿದ್ಯಾರ್ಥಿಗಳಿಗೆ ವಿಭಿನ್ನ ಚಟುವಟಿಕೆಗಳ ಮೂಲಕ ರಸಪ್ರಶ್ನೆಯನ್ನು ಕೇಳಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ಇದೇ ಶಾಲೆಯಲ್ಲಿ ಕೋಟ್ಯಾಧಿಪತಿ ಎನ್ನುವ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ತಿಳಿಸಿದರು. ಶಿಕ್ಷಕಿ ಕೆ.ಡಿ.ಶೋಭಿತ ಮಾತನಾಡಿ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳ ಕೊಡುಗೆ ಕುರಿತು ವಿವರಿಸಿದರು. ಕನ್ನಡ ಸಾಹಿತ್ಯದ ಪ್ರಾಚೀನತೆ ಕ್ರಿಸ್ತಶಕ 8 ರಿಂದ 9ನೇ…

Read More

ವಿರಾಜಪೇಟೆ ಜ.27 NEWS DESK : ಕೇರಳದ ಬೈತೂರು ಉತ್ಸವ ಹಿನ್ನೆಲೆ ವಿರಾಜಪೇಟೆಯಿಂದ ಬೈತೂರಪ್ಪ ದೇವಸ್ಥಾನಕ್ಕೆ ಮೂವರು ಯುವಕರು ಮೂರನೇ ವರ್ಷವೂ ಪಾದಯಾತ್ರೆ ಮಾಡಿ ಗಮನ ಸೆಳೆದರು. ಭಕ್ತರಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ ಪಾದಯಾತ್ರೆ ನಡೆಸಿದ ಯುವಕರು. ಜ.22ರ ಮುಂಜಾನೆ ವಿರಾಜಪೇಟೆಯಿಂದ ಪಾದಯಾತ್ರೆ ಪ್ರಾರಂಭಿಸಿದ ಇವರು ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಹುಲಿಕಲ್ ಮೂಲಕ ಪಾದಯಾತ್ರೆ ಮಾಡಿ ಸುಮಾರು 40 ಕಿ.ಮಿ ಕ್ರಮಿಸಿ ದೇವಾಲಯ ತಲುಪಿದರು. ನಂತರ ನಾಲ್ಕುದಿನಅಲ್ಲೇ ಕೆಲಸ ಕಾರ್ಯ ನಿರ್ವಹಿಸಿ, ವಿರಾಜಪೇಟೆಗೆ ಹಿಂತಿರುಗಿ ಪ್ರಸಾದ ವಿತರಿಸಿದರು.  

Read More

ವಿರಾಜಪೇಟೆ ಜ.27 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಡೆಸ್ಕ್ ಬೆಂಚು ವಿತರಣಾ ಕಾರ್ಯಕ್ರಮದಡಿಯಲ್ಲಿ, ಮೂರ್ನಾಡು ಸರಕಾರಿ ಪ್ರೌಢಶಾಲೆಗೆ ಡೆಸ್ಕ್-ಬೆಂಚ್ ಮಂಜುರಾಗಿದ್ದು, ಮಡಿಕೇರಿ ತಾಲ್ಲೂಕಿನ ನಿವೃತ್ತ ಪೊಲೀಸ್ ಅಧಿಕಾರಿ (ಪಿಎಸ್‍ಐ)ಸದಾಶಿವ ಹಾಗೂ ಮೂರ್ನಾಡು ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಶಾಲೆಗೆ ಡೆಸ್ಕ್ ಬೆಂಚ್ ವಿತರಿಸಿದರು. ಈ ಸಂದರ್ಭ ಮಾತನಾಡಿದ ನಿವೃತ್ತ ಪಿಎಸ್‍ಐ ಸದಾಶಿವ, ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಹೆಚ್ಚಿನವರು ಮಧ್ಯಮ ವರ್ಗದವರಾಗಿರುತ್ತಾರೆ. ಶಾಲೆಗಳಿಗೆ ಪೀಠೋಪಕರಣ ನೀಡಿರುವುದರಿಂದ ಅವರ ಕಲಿಕಾ ವ್ಯವಸ್ಥೆಗೆ ಸಹಕಾರಿವಾಗಲಿದೆ ಎಂದರು. ಮನೆಯಲ್ಲಿ ಆರ್ಥಿಕವಾಗಿ ಬಡತನ ಇದ್ದರು ಕಲಿಕೆಯಲ್ಲಿ ಬಡತನ ಇರಬಾರದು, ಒಳ್ಳೆಯ ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಸರಕಾರಿ ಕೆಲಸಗಳನ್ನು ಅಲಂಕರಿಸಿ ದೇಶಕ್ಕೆ ಮಾದರಿಯಾಗಿ ಬಾಳಬೇಕೆಂದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಕೃಷಿ ಮೇಲ್ವಿಚಾರಕರಾದ ವಸಂತ, ಶಾಲೆಯ ಮುಖ್ಯ ಶಿಕ್ಷಕ ಗುರುರಾಜ್, ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರಮ್ಯ, ಸೇವಾ ಪ್ರತಿನಿಧಿ ಶಿವಾನಂದ,…

Read More

ಸುಂಟಿಕೊಪ್ಪ ಜ.27 NEWS DESK :  ಸೋಶಿಯಲ್ ಡೆಮೊಕ್ರೆಟಿಕ್ ಟ್ರೇಡ್‍ಯೂನಿಯನ್ (ಎಸ್‍ಡಿಟಿಯು) ಸುಂಟಿಕೊಪ್ಪ ನಗರ ಸಮಿತಿ ಅಧ್ಯಕ್ಷರಾಗಿ ಎಸ್.ಎಫ್.ಫಿರೋಜ್‍ಖಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎ.ನೌಶದ್ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪ ದ್ವಾರಕ ಸಭಾಂಗಣದಲ್ಲಿ ಎಸ್‍ಡಿಟಿಯು ಜಿಲ್ಲಾಧ್ಯಕ್ಷರ ಅಣ್ಣಾ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಂಟಿಕೊಪ್ಪ ನಗರ ಸಮಿತಿಯನ್ನು ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಆರ್.ಎನ್.ರಿಯಾಜ್, ಕಾರ್ಯದರ್ಶಿ ಎಸ್.ಸಲೀಂ, ಖಜಾಂಚಿಯಾಗಿ ಸಿಕಂದರ್ ಶರೀಫ್, ಸಮಿತಿ ಸದ್ಯರುಗಳಾಗಿ ಸಲಾಂ, ಆರ್.ರಫೀಕ್, ಆಸೀಫ್ ಮತ್ತಿತರನ್ನು ನೇಮಕಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಎ.ಲತೀಫ್ ಹಾಗೂ ಅಜೀಜ್ ಮತ್ತಿತರರು ಇದ್ದರು.

Read More

ಸುಂಟಿಕೊಪ್ಪ ಜ.27 NEWS DESK : ಸುಂಟಿಕೊಪ್ಪ ಗ್ರಾಮದೇವರ ನೂತನ ಸಮಿತಿ ಅಧ್ಯಕ್ಷರಾಗಿ ಎ.ಶ್ರೀಧರ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮದೇವರ ಸಮಿತಿಯ ಸಭೆಯನ್ನು ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಎ.ಲೋಕೇಶ್ ಕುಮಾರ್ ಅವರ ಸಮ್ಮುಖದಲ್ಲಿ ನಡೆಸಲಾಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿ ಉಪಾಧ್ಯಕ್ಷರಾಗಿ ಬಿ.ಡಿ.ರಾಜು ರೈ, ಜೆ.ಎನ್.ಚಂದ್ರಶೇಖರ್, ಕಾರ್ಯದರ್ಶಿಯಾಗಿ ಎ.ಶ್ರೀಧರನ್, ಖಜಾಂಚಿಯಾಗಿ ದಿನು ದೇವಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಧನು ಕಾವೇರಪ್ಪ, ಎಂ.ಎಸ್.ಸುನಿಲ್, ಪ್ರೀತಂ ಪ್ರಭಾಕರ್, ಸಮಿತಿ ಸದಸ್ಯರುಗಳಾಗಿ ಎಸ್.ರವಿ, ಬಸವರಾಜು, ಎಂ.ಆರ್.ಶಶಿಕುಮಾರ್, ಮಣಿಮುಖೇಶ್, ಬಿ.ಕೆ.ಪ್ರಶಾಂತ್, ಸಿ.ಸುನಿಲ್, ಬಿ.ವಿ.ಸುನಿಲ್ ಕುಮಾರ್, ಸುರೇಶ್ ಚಂದು, ಪ್ರಸಾದ್ ಕುಟ್ಟಪ್ಪ, ಪಿ.ಸಿ.ಮೋಹನ್, ಬಿ.ಎಂ.ಸುರೇಶ್, ಚಂದ್ರ, ಎಸ್.ವಿಘ್ನೇಶ್, ಎಂ.ಹೆಚ್.ನಿಖಿಲ್, ಪಿ.ಆರ್.ಸುಕುಮಾರ್, ಪಿ.ಆರ್.ಸುನಿಲ್ ಕುಮಾರ್, ಎಂ.ಮಂಜುನಾಥ್, ಅರುಣ, ಪಿ.ಸಿ.ಮೋಹನ, ಸಂದೀಪ್ ಬಾಳೆಕಾಡು, ಪ್ರಶಾಂತ್ (ಪ್ರಶು ಬಾಳೆಕಾಡು), ಅಯ್ಯಪ್ಪ, ಪಿ.ಕೆ.ಅನಿಲ್ ಕುಮಾರ್, ಮಾಗಲು ವಸಂತ, ರಮೇಶ್ ಚೌದರಿ, ಮೂರ್ತಿ, ಬಿ.ಕೆ.ಮೋಹನ್,ಆನಂದ,ಎ.ಎಂ. ರಘು, ಪಿ.ಲೋಕೇಶ್,ಪೃಥ್ವಿ ರಾಜ್, ಗೌರವ ಸಲಹೆಗಾರರಾಗಿ ಎ.ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್, ಎಸ್.ಜಿ.ಶ್ರೀನಿವಾಸ್,…

Read More

ಮಡಿಕೇರಿ ಜ.27 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್ ಧ್ವಜಾರೋಹಣ ಮಾಡಿದರು. ನಂತರ ಗಣ್ಯರು ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದಿನದ ಮಹತ್ವದ ಕುರಿತು. ಈ ಸಂದರ್ಭ ಸೇವಾದಳದ ಜಿಲ್ಲಾಧ್ಯಕ್ಷ ಹಾಗೂ ಮೂಡ ಸದಸ್ಯ ಕಾನೇಹಿತ್ಲು ಮೊಣ್ಣಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಗೌರವ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮೂಡ ಸದಸ್ಯರಾದ ಆರ್.ಪಿ.ಚಂದ್ರಶೇಖರ್, ನಗರಸಭೆ ನಾಮ ನಿರ್ದೇಶಕ ಸದಸ್ಯ ಸದಾಮುದ್ದಪ್ಪ, ಮಾಜಿ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ಮಾಜಿ ನಗರಸಭಾ ಸದಸ್ಯರಾದ ಶ್ರೀಮತಿ ಬಂಗೇರ, ಮಾಜಿ ನಗರಸಭೆ ಉಪಾಧ್ಯಕ್ಷರಾದ ಲೀಲಾಶೇಷಮ್ಮ, ಪ್ರಮುಖರಾದ ಕವನ್ ಕೊತೋಳಿ, ನಜೀರ್ ಅಹ್ಮದ್, ಹಬೀಬ್ ಅಹಮದ್, ಸುಬ್ರಮಣಿ, ಸುನಂದ, ಉಷಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Read More

ಸೋಮವಾರಪೇಟೆ NEWS DESK ಜ.27 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ  ವಾರ್ಡ್ ಸಂಖ್ಯೆ 9ರ ಮಹದೇಶ್ವರ ಬ್ಲಾಕ್ ಸದಸ್ಯರಾದ ನಾಗರತ್ನ (ರಾಣಿ) ಅವರ ಪತಿ ಪ್ರಕಾಶ್ ಅವರು ಇಂದು ಬೆಳಗ್ಗೆ  ನಿಧನರಾದರು.

Read More

ಕುಶಾಲನಗರ ಜ.27 NEWS DESK : ಶಾಲಾ- ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ಆದರ್ಶ ವ್ಯಕ್ತಿತ್ವ ಹಾಗೂ ರಾಷ್ಟಪ್ರೇಮ ಬೆಳೆಸಿಕೊಳ್ಳಲು ದೇಶದ ಐಕ್ಯತೆ, ಸಮಗ್ರತೆಗೆ ಪಣ ತೊಡಬೇಕು ಎಂದು 2004 ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಗಾಡ್ ಆಫ್ ಆನರ್ ( ಪಥ ಸಂಚಲನದಲ್ಲಿ ಅತಿಥಿಗಳಿಗೆ ಗೌರವ ಸಲ್ಲಿಸುವ ಪ್ರಕ್ರಿಯೆ) ನಲ್ಲಿ ಕರ್ನಾಟಕ – ಗೋವಾ ಎನ್.ಸಿ.ಸಿ.ವತಿಯಿಂದ ಎನ್.ಸಿ.ಸಿ.ಕೆಡೆಟ್ ಆಗಿ ಪಾಲ್ಗೊಂಡಿದ್ದ ಕುಶಾಲನಗರ ಜೆ.ಸಿ.ಐ.ಕಾವೇರಿ ಸಂಸ್ಥೆಯ ಅಧ್ಯಕ್ಷ ಹಾಗೂ ಜೇಸಿ ತಂಬಂಡ  ತೇಜ ದಿನೇಶ್  ಕರೆ ನೀಡಿದರು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ. ಎನ್.ಎಸ್.ಎಸ್.ಘಟಕದ ವತಿಯಿಂದ ಭಾನುವಾರ ( ಜ.26 ರಂದು ) ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಸಂಭ್ರಮ, ಸಾಗರದಿಂದ ಏರ್ಪಡಿಸಿದ್ದ 76 ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಪ್ರತಿಯೊಬ್ಬ ಪ್ರಜೆಯು ಸ್ವಾವಲಂಬಿ,…

Read More