ಕುಶಾಲನಗರ ಜ.23 : ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಟ್ಟದ ಕ್ರೀಡಾಕೂಟ ಫೆ.25 ರಂದು ಕುಶಾಲನಗರದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಘಟಕದ ಹೆಚ್.ವಿಶಿವಪ್ಪ ತಿಳಿಸಿದ್ದಾರೆ.
ಅವರು, ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಮಾಜ ಭಾಂಧವರ ಮಕ್ಕಳು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 2021-22 ನೇ ಸಾಲಿನಲ್ಲಿ ಶೇ.80 ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು, ಈ ಬಗ್ಗೆ ದಾಖಲೆಗಳೊಂದಿಗೆ ಅರ್ಜಿಗಳನ್ನು ಮಹಾ ಸಭಾ ಪ್ರಮುಖರಿಗೆ ಸಲ್ಲಿಸುವಂತೆ ಕೋರಿದರು.
ಅರ್ಜಿಜೊತೆ ವಿದ್ಯಾರ್ಥಿಗಳ 2 ಭಾವಚಿತ್ರಗಳು, ಅಂಕಪಟ್ಟಿ ಮತ್ತು ಆಧಾರ್ ಪ್ರತಿಗಳನ್ನು ಫೆಬ್ರವರಿ 10ರ ಒಳಗೆ ಈ ಕೆಳಕಂಡ ಮೊ.ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಶಾಂಭಶಿವಮೂರ್ತಿ – 9448336781, ಜಿ.ಎಂಕಾoತರಾಜು- 7483411601, ಸುರೇಶ್ ವಿರಾಜಪೇಟೆ- 9448108091, ಆದರ್ಶ್ ಸೋಮವಾರಪೇಟೆ- 6362059198.ಸಂಪರ್ಕಿಸುವoತೆಕೋರಿದ್ದಾರೆ.ಮಹಾಸಭಾದ ವೇದಿಕೆ ಕಾರ್ಯಕ್ರಮ ಮಾರ್ಚ್ 11 ರಂದುಏರ್ಪಡಿಸಲಾಗಿದೆ ಎoದು ಮಾಹಿತಿ ಒದಗಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್ ಶಾಂಭಶಿವಮೂರ್ತಿ, ಕೋಶಾಧ್ಯಕ್ಷ ಹೆಚ್.ಪಿ.ಶಿವಕುಮಾರ್ ಇದ್ದರು.









