Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » ಭಾವೈಕ್ಯತೆಯ ನೆಲೆ ಬೀಡು ಕೊಡಗಿನ ಎಮ್ಮೆಮಾಡು
ಇತ್ತೀಚಿನ ಸುದ್ದಿಗಳು

ಭಾವೈಕ್ಯತೆಯ ನೆಲೆ ಬೀಡು ಕೊಡಗಿನ ಎಮ್ಮೆಮಾಡು

February 24, 20232 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ನಾಪೋಕ್ಲು ಫೆ.24 : ಕೊಡಗು ಪ್ರಕೃತಿ ಸೌಂದರ್ಯದ ಜಿಲ್ಲೆ. ಅದರಲ್ಲೂ ಮಡಿಕೇರಿ ತಾಲೂಕು ನಾಲ್ಕು ನಾಡಿನ ಎಮ್ಮೆಮಾಡು ಗ್ರಾಮವು ಜೀವನದಿ ಕಾವೇರಿಯ ದಡದಲ್ಲಿದ್ದು, ದಕ್ಷಿಣ ಭಾರತ, ದಕ್ಷಿಣ ಕರ್ನಾಟಕದ ಮುಸ್ಲಿಂ ಪುಣ್ಯ ಕ್ಷೇತ್ರಗಳ ಪೈಕಿ ಎಮ್ಮೆಮಾಡು ಗ್ರಾಮಕ್ಕೆ ಅಗ್ರಸ್ಥಾನ ಇದೆ.
ಇಲ್ಲಿ ಸತ್ಯಸಂಧ0ದೈವ ಭಕ್ತ ಪವಾಡ ಪುರುಷ ಸೂಫಿ ಸಯ್ಯದ್ ವಲಿಯುಲ್ಲಾರವರು ಈ ಸ್ಥಳದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವುದೇ ಈ ಸ್ಥಳದ ಕೀರ್ತಿ, ಪ್ರಸಿದ್ಧಿಗೆ ಕಾರಣ.
ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲುವಿಗಾಗಿ ಸುಮಾರು 32 ಕಿ.ಮೀ. ಚಲಿಸಿದರೆ, ಈ ಗ್ರಾಮಕ್ಕೆ ತಲುಪಬಹುದು. ವಾರ್ಷಿಕವಾಗಿ ಇಲ್ಲಿ ಮಾರ್ಚ್ ತಿಂಗಳಲ್ಲಿ ಊರೂಸ್ ಜರುಗಲಿದ್ದು, ಇಂದು ಧ್ವಜಾರೋಣದ ಮೂಲಕ ಚಾಲನೆ ದೊರೆಯಿತು. ಫೆ. 27 ರಂದು ಸರ್ವಧರ್ಮ ಸಮ್ಮೇಳನ ಮತ್ತು ಅನ್ನದಾನ ನಡೆಯಲಿದ್ದು, ಮಾ.3 ರಂದು ಹಬ್ಬಕ್ಕೆ ತೆರೆ ಬಿಳಲಿದೆ.
ಇತಿಹಾಸ : ನೂರಾರು ವರ್ಷಗಳ ಹಿಂದೆ ಸೂಫಿ-ಸಯ್ಯದ್ ರವರು ಮರಣ ಸಯ್ಯೆಯಲ್ಲಿ ಬರಕೊಲ್ಲಿ ಎಂಬ ಜಾಗದಲ್ಲಿ ಬಂಡೆಯ ಮೇಲೆ ಜೀವನ್ ಮರಣ ಸ್ಥಿತಿಯಲ್ಲಿದ್ದ ಸಂದರ್ಭ ನೆಲಜಿ ಗ್ರಾಮದ ಕೊಡವ ಜನಾಂಗಕ್ಕೆ ಸೇರಿದ ಮಣವಟ್ಟೀರ ಕುಟುಂಬದ ಗದ್ದೆಯಲ್ಲಿ ಗೂಟಕ್ಕೆ ಕಟ್ಟಿ ಹಾಕಿದ ಹಸುವೊಂದು ಹಗ್ಗವನ್ನು ತುಂಡರಿಸಿಕೊ0ಡು ಬಂದು ಮರಣ ಸಯ್ಯೆಯಲ್ಲಿದ್ದ ಸೂಫಿ-ಸಯ್ಯದ್ಗೆ ತನ್ನ ಕೆಚ್ಚಲಿನಿಂದ ಹಾಲುಣಿಸಿದ ಚರಿತ್ರೆ ಇದೆ.
ಅದರಂತೆ ಇಂದೂ ಕೂಡ ಎಮ್ಮೆಮಾಡು ಬರಕೊಲ್ಲಿ ಎಂಬ ಜಾಗದಲ್ಲಿ ಕಲ್ಲು ಬಂಡೆಯ ಮೇಲೆ ಹಸು ಹಾಲುಣಿಸಿದ ಕುರುಹು ಆಗಿ ಹಸುವಿನ ಹೆಜ್ಜೆ ಮತ್ತು ಹಗ್ಗದ ಗುರುತನ್ನು ಕಲ್ಲಿನ ಮೇಲೆ ಕಾಣಬಹುದಾಗಿದೆ. ಇದು ಸಹ ಒಂದು ಪ್ರಸಿದ್ಧ ತಾಣವಾಗಿದೆ. ಇಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿದ್ದು, ಗೋಹತ್ಯೆ ಮಾಡಿದವರಿಗೆ ಮಾರಕ ರೋಗ ಬಂದಿರುವ ನಿದರ್ಶಗಳಿವೆ. ಜಾನುವಾರುಗಳಿಗೆ ರೋಗ ಬಂದರೆ ಇಲ್ಲಿಗೆ ಹರಕೆ ಮಾಡಿಕೊಂಡರೆ ಕೂಡಲೇ ರೋಗ ವಾಸಿಯಾಗುತ್ತದೆ ಎಂಬ ಪ್ರತೀತಿ ಇದೆ.
ಅಹ್ಲ್ಬೈತ್-ಆದೂರ್-ತಂಞಳ್ : ನೂರಾರು ವರ್ಷಗಳ ಹಿಂದೆ ಮಹಮ್ಮದ್ ಪೈಗಂಬರ್ರವರ ವಂಶಸ್ಥರಾದ ಆದೂರಿನ ಸಯ್ಯದ್-ಹಸನ್-ಸಖಾಫಿಲ್ಲ್-ಅಲ್ಲರಮ್ಮಿ-ತಂಞಳ್ರವವರು ಸೂಫಿ ಸಯ್ಯದ್ ಅವರ ದರ್ಗಾ ಶರೀಫ್ಗೆ ಸಂದರ್ಶಕರಾಗಿ ಬಂದಿದ್ದ ಸಂದರ್ಭ, ವೃದ್ಧರಾದ ಇವರು ನನಗೆ ನಿಮ್ಮೊಂದಿಗೆ ಅಂತಿಮ ವಿಶ್ರಾಂತಿಗೆ ಸ್ಥಳವಕಾಶ ಕಲ್ಪಿಸಿ ಎಂದು ಸೂಫಿ-ಸಯ್ಯದ್-ವಲಿಯುಲ್ಲಾ ಕೋರಿಕೊಂಡರ0ತೆ. ತಂಞಳ್ ಅವರ ಕೋರಿಕೆಯನ್ನು ಮನ್ನಿಸಿದ ಸೂಫಿ-ಸಯ್ಯದ್ ಅಲ್ಲರಮ್ಮಿ ತಂಞಳ್ಗೆ ಎತ್ತರದ ದೇವಸ್ಥಾನ ನೀಡಿ ಗೌರವಿಸಿದ್ದಾರೆ. ಇಂದು ಕೂಡ ದರ್ಗಾ ಶರೀಫ್ಗೆ ಮೆಟ್ಟಿಲಿಳಿದು ಸಾಗುವಾಗ ಮೊದಲು ದೊರಕುವ ಕಟ್ಟಡವೇ ಅಲ್ಲರಮ್ಮಿ ತಂಞಳ್ ಅವರ ದರ್ಗಾ ಶರೀಫ್.
ವರ್ಷದ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ವಾರ್ಷಿಕ ಊರೂಸ್ ಸಮಾರಂಭ ನಡೆಯಲಿದ್ದು, ಈ ಭಾರಿ ಪೆಬ್ರವರಿ ತಿಂಗಳಲ್ಲಿ ಉರೂಸ್ ನಡೆಯಲಿದೆ. ಇಲ್ಲಿಗೆ ದೇಶ ವಿದೇಶಗಳಿಂದ, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಜನರು ಜಾತಿ, ಬೇಧ ಮರೆತು ಆಗಮಿಸಿ ತಮ್ಮ ಸಂಕಷ್ಟಗಳನ್ನು ಪರಿಹರಿಸಲು ದರ್ಗಾ ಶರೀಫ್ ಬಳಿ ಬಂದು ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡು ಹರಕೆ ಕಾಣಿಕೆಯನ್ನು ಸಹ ಒಪ್ಪಿಸುತ್ತಾರೆ.
ಎಮ್ಮೆಮಾಡು ತಾಜುಲ್-ಇಸ್ಲಾಂ-ಮುಸ್ಲಿ0 ಜಮಾಯತ್ ದರ್ಗಾ ಶರೀಫ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸ, ಅರಬ್ಬಿ ಶಾಲೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯವಾಗಿದೆ. ಇಲ್ಲಿ ಬಡ ಮಕ್ಕಳ ಅನಾಥಾಲಯ ಸಹ ಇದ್ದು, ಅವರಿಗೆ ಉಚಿತ ವಸತಿ, ಊಟ, ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ.

ವರದಿ : ದುಗ್ಗಳ ಸದಾನಂದ 

Share. Facebook Twitter Pinterest LinkedIn Tumblr Email WhatsApp
Previous Articleದೆಹಲಿಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ : ಮಡಿಕೇರಿ ಬ್ರಹ್ಮಕುಮಾರಿ ಶಾಖೆಯ 10 ಜನರ ತಂಡ ಭಾಗಿ
Next Article ಕನ್ನಡ ಚಲನಚಿತ್ರ ಕಪ್- 2023 ಕ್ರಿಕೆಟ್ ಪಂದ್ಯಾವಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

Related Posts

*ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*

February 12, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ದರದಲ್ಲಿ ಇಂದು ಕೊಂಚ…

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.