ಮಡಿಕೇರಿ ಮಾ.18 : ಈ ಬಾರಿಯ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಕುಟುಂಬದ ಹಿರಿಯರನ್ನು ಸ್ಮರಿಸಿ ದೇವಾಟ್ ಪರಂಬುವಿನಲ್ಲಿ ಮೀದಿ ಸಮರ್ಪಿಸಿದರು.
ಈ ಹಿಂದಿನ ಇತಿಹಾಸದಂತೆ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಅಯ್ಯಂಗೇರಿ ಮೂಲದವರಾಗಿದ್ದಾರೆ. ಈ ಸಂದರ್ಭ ಕುಟುಂಬದ ಹಿರಿಯರು ನರಮೇದಕ್ಕೆ ಬಲಿಯಾಗಿರುವ ಐತಿಹತ್ಯವಿದೆ.
ನಂತರದಲ್ಲಿ ಬಲ್ಲಮಾವಟಿಯಲ್ಲಿ ನೆಲೆಕಂಡು ಸಂತತಿ ವೃದ್ಧಿಯಾದ ಈ ಕುಟುಂಬ ಪ್ರಸ್ತುತ ಬಲ್ಲಮಾವಟಿ ಸೇರಿದಂತೆ ವಿವಿಧೆಡೆ ನೆಲೆಸಿದ್ದು, ಇದೀಗ 23ನೇ ವರ್ಷದ ಕೌಟುಂಬಿಕ ಹಾಕಿಯನ್ನು ಆಯೋಜಿಸುತ್ತಿದ್ದಾರೆ.
ಕುಟುಂಬದ ಪ್ರಮುಖರಾದ ಮನು ಮುತ್ತಪ್ಪ ಸೇರಿದಂತೆ ಹಲವರು ಮೀದಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.









