ಮಡಿಕೇರಿ ಸೆ.10 : ಮಡಿಕೇರಿ ನಗರದ ಬ್ರಾಹ್ಮಣರ ಬೀದಿಯ ನಿವಾಸಿ, ವರ್ತಕ ಪಿ.ಕೆ.ಭಟ್ಟ(71) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಅನೇಕ ದಶಕಗಳಿಂದ ನಗರದಲ್ಲಿ ವರ್ತಕರಾಗಿದ್ದ ಪಿ.ಕೆ.ಭಟ್ ಅವರು ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನಲ್ಲಿ ಇದ್ದರು. ನಗರದ ವರ್ತಕ ವೃಂದ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.











