ಮಡಿಕೇರಿ ಸೆ.11 : ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 12 ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದರು.
ಕಾಂಗ್ರೆಸ್ ಬೆಂಬಲಿತ ಬಿ.ಡಿ.ದೇವರಾಜ್, ಕೆ.ಕೆ.ಜಗದೀಶ್, ಕೆ.ಪಿ.ಸುಬ್ರಹ್ಮಣ್ಯ, ಎಂ.ಎಂ.ರೆಲ್ಸನ್, ಎ.ಯು.ಹಕ್ಕಿಂ, ಬಿ.ಕೆ.ಪುರುಷೋತ್ತಮ, ಪಿ.ಟಿ.ವಿನೋದ್, ಟಿ.ಆರ್.ಶ್ರೀನಿವಾಸ್, ಎ.ಪಿ.ಜೀವನ್ ಕುಮಾರ್, ಧನ್ಯಶ್ರೀ ಕುಮಾರ್, ಕೆ.ಪಿ.ಸರಸ್ವತಿ ಹಾಗೂ ಜಯಂತ್ ಸೋಣಂಗೇರಿ ನಿರ್ದೇಶಕರುಗಳಾಗಿ ಆಯ್ಕೆಯಾದರು.
ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಕೆಪಿಸಿಸಿ ಸದಸ್ಯ ಬಿ.ಎಸ್.ರಮನಾಥ್, ಕಾಂಗ್ರೆಸ್ ವಲಯಾಧ್ಯಕ್ಷ ಬಿ.ಡಿ.ದೇವರಾಜ್ ಹಾಗೂ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ.ಶರಣ್ ಕುಮಾರ್ ಅವರುಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.









