ಮಡಿಕೇರಿ ಅ.29 : ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದಿಂದ ಈ ಬಾರಿ 10 ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ತಿಳಿಸಿದ್ದಾರೆ.
ಮಡಿಕೇರಿಯ ಓಂಕಾರ ಸದನದಲ್ಲಿ ನ.5 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ 3 ಗಂಟೆಗೆ ಸಾಧಕರಿಗೆ ಸಮರ್ಥ ಕನ್ನಡಿಗರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
::: ಪ್ರಶಸ್ತಿ ವಿಜೇತರು :::
ಡಾ.ಕೆ.ಬಿ.ಸೂರ್ಯಕುಮಾರ್ (ವೈದ್ಯಕೀಯ), ಕುಂತಿಬೋಪಯ್ಯ (ಶಿಕ್ಷಣ), ಎಂ.ಎನ್.ಚಂದ್ರಮೋಹನ್(ಪರಿಸರ), ಎಚ್.ಎಸ್.ತಿಮ್ಮಪ್ಪಯ್ಯ (ಕೃಷಿ), ಸ್ಮಿತಾ ಅಮೃತರಾಜ್ (ಸಾಹಿತ್ಯ), ಬೊಳ್ಳಜಿರ ಅಯ್ಯಪ್ಪ (ಪ್ರಕಾಶನ), ಹೆಚ್ಎಸ್.ಲಕ್ಷ್ಮೀಶ್ (ಮಾಧ್ಯಮ ಛಾಯಾಗ್ರಹಣ), ಪ್ರೀತು ಕೃಷ್ಣ (ನೃತ್ಯ) ಲಕ್ಷ್ಮಿ ಬೆಂಗಳೂರು (ಸಮಾಜಸೇವೆ), ಧೃತಿ ಪೂಜಾರಿ (ಬಾಲ ಪ್ರತಿಭೆ) ಇವರುಗಳಿಗೆ ನ.5 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
::: ಗಾನ ಹೊನಲು ಹಾಗೂ ಕುಣಿಯೋಣು ಬಾರಾ ಸ್ಪರ್ಧೆಯ ವಿಜೇತರು :::
ಸಮರ್ಥ ಕನ್ನಡಿಗರು ಸಂಸ್ಥೆ ನಡೆಸಿದ ಆನ್ ಲೈನ್ ವೈಯುಕ್ತಿಕ ಗಾಯನ ಸ್ಪರ್ಧೆಯಲ್ಲಿ ಪುಟಾಣಿಗಳ ವಿಭಾಗದಲ್ಲಿ ಆದ್ಯ. ವಿ, ಶಾಖ್ಯ ಬಿ, ಚಿರಾಗ್ವಿ, ಮಿನುಗು, ಅಪೇಕ್ಷಾ ಭಾರದ್ವಾಜ್, ಬೌಶ್ವಿಕ್ ದರ್ಶ ಭೋಜಮ್ಮ, ಜನ್ಯ ಡಿ.ಎನ್ ಬಹುಮಾನ ವಿಜೇತರಾಗಿದ್ದಾರೆ. ಒಂದನೇ ವಿಭಾಗದಲ್ಲಿ ಸ್ಕಂದ ಮಧುಕರ್ ಪ್ರಥಮ, ಸುಮೇಧಾ ರಾವ್ ದ್ವಿತೀಯ, ಲೇಖನ ತೃತೀಯ ಸ್ಥಾನ ಪಡೆದಿದ್ದಾರೆ.
ಎರಡನೇ ವಿಭಾಗದಲ್ಲಿ ಗೌರಿ ಎಸ್.ಕಾಂಚನ್ ಉಡುಪಿ ಪ್ರಥಮ, ಸಪ್ನಾ ಮಧುಕರ್ ದ್ವಿತೀಯ, ಅನೂಷ ವಿರಾಜಪೇಟೆ ಹಾಗೂ ಬಾಳೆಯಡ ಬಿಷನ್ ಬಿದ್ದಪ್ಪ ತೃತೀಯ ಸ್ಥಾನ ಗಳಿಸಿದ್ದಾರೆ.
ಮೂರನೇ ವಿಭಾಗದಲ್ಲಿ ವಿ.ಟಿ.ಶ್ರೀನಿವಾಸ್ ಗೋಣಿಕೊಪ್ಪ ಪ್ರಥಮ, ಅರ್ಪಿತಾ ಎಸ್. ಭಟ್ ಬೆಂಗಳೂರು ದ್ವಿತೀಯ, ವಿದ್ಯಾ ಜಗದೀಶ್ ಕಿರುಗೂರು ಹಾಗೂ ತನ್ವಿತಾ ಶೆಟ್ಟಿ ಸೋಮವಾರಪೇಟೆ ತೃತೀಯ ಬಹುಮಾನ ಪಡೆದಿದ್ದಾರೆ.
ನೃತ್ಯ ಸ್ಪರ್ಧೆ ಒಂದನೇ ವಿಭಾಗದಲ್ಲಿ ಭವಿಷ್ಯ ಎಂ.ಆರ್. ಮದೆ ಪ್ರಥಮ, ಹಂಸಿಕಾ ಎನ್.ಜೆ ಮಡಿಕೇರಿ ದ್ವಿತೀಯ, ನಯನ ಮಡಿಕೇರಿ ತೃತೀಯ, ಎರಡನೇ ವಿಭಾಗದಲ್ಲಿ ಸುಮೇಧಾ ರಾವ್ ಪ್ರಥಮ, ನಿಹಾರಿಕ ಜ್ಞಾನ ಜ್ಯೋತಿ ದ್ವಿತೀಯ, ಕೀರ್ತನ ತೃತೀಯ ಬಹುಮಾನ ಗಳಿಸಿದ್ದಾರೆ.
ಮೂರನೇ ವಿಭಾಗದಲ್ಲಿ ಅನುಕ್ತಾ ಕೆ. ಮಂಗಳೂರು ಪ್ರಥಮ, ಭೂಮಿಕಾ ಯು.ಆರ್ ಭಟ್ ದ್ವಿತೀಯ, ದುಂಧುಭಿ ತೃತೀಯ ಬಹುಮಾನ ಗಳಿಸಿದ್ದಾರೆ ಎಂದು ಸಂಚಾಲಕಿ ಕೆ.ಜಯಲಕ್ಷ್ಮಿ ತಿಳಿಸಿದ್ದಾರೆ.
::: ನ.5 ರಂದು ಕನ್ನಡ ಹಬ್ಬ :::
ಮಡಿಕೇರಿಯ ಓಂಕಾರ ಸದನದಲ್ಲಿ ನ.5 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ಆಯೋಜಿತ ಕನ್ನಡ ಹಬ್ಬ – ನಿಮ್ಮ ಪ್ರತಿಭೆ ನಮ್ಮ ವೇದಿಕೆ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಉದ್ಘಾಟಿಸಲಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ಪ್ರಧಾನ ಸಂಚಾಲಕ ಆನಂದ ದಗ್ಗನಹಳ್ಳಿ, ಮುಂಬೈನ ಲೇಖಕಿ ಜಯಂತಿ ಸಿ.ರಾವ್, ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ನಡೆಯುವ ಸಾಧಕರಿಗೆ ಸನ್ಮಾನ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮಲ್ಲಿ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ, ಅಂಕಣಕಾರ ಆರ್.ಕೆ.ಬಾಲಚಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉದ್ಯಮಿ ಕೆ.ದಾಮೋದರ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸಮಾಜ ಸೇವಕಿ ಕಲ್ಮಾಡಂಡ ಶಶಿ ಮೊಣ್ಣಪ್ಪ, ಡಾ.ಅನುಶ್ರೀ ಅನಂಶಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.










