ಮಡಿಕೇರಿ ಫೆ. 21 NEWS DESK : ಪತ್ರಕತ೯ ಅನಿಲ್ ಹೆಚ್.ಟಿ ಬರೆದಿರುವ ಅಯೋಧ್ಯೆ – ಪ್ರೀತಿಯ ಮಂದಿರ, ರಾಷ್ಟ್ರಮಂದಿರ ಹೆಸರಿನ ಹೊಸ ಪುಸ್ತಕ ಫೆಬ್ರವರಿ 23 ರಂದು ಶುಕ್ರವಾರ ಲೋಕಾಪ೯ಣೆಯಾಗಲಿದೆ. ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಫೆ.23 ರಂದು ಶುಕ್ರವಾರ ಸಂಜೆ 6 ಗಂಟೆಗೆ ಅಯೋಧ್ಯೆ ಪುಸ್ತಕವನ್ನು ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡು ಬರೆದ ಖ್ಯಾತ ಕವಿ ಡಾ. ಗಜಾನನ ಶಮ೯ಲೋಕಾಪ೯ಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆ ಹಿನ್ನಲೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣ, ಅಯೋಧ್ಯೆಯ ಪ್ರವಾಸಿ ತಾಣಗಳು, ಮಂದಿರ ನಿಮಾ೯ಣದ ಹಿಂದಿನ ಹೋರಾಟಗಳ ಮಾಹಿತಿಗಳೂ ಸೇರಿದಂತೆ ಅನೇಕ ಲೇಖನಗಳನ್ನು 130 ಪುಟದ, ವಣ೯ಮಯ ಪುಸ್ತಕದಲ್ಲಿ ದಾಖಲಿಸಲಾಗಿದೆ. ಅಯೋಧ್ಯೆ ಸಂಬಂಧಿತ ಹಲವು ವಣ೯ ಛಾಯಾಚಿತ್ರಗಳೂ ಪುಸ್ತಕದಲ್ಲಿದೆ ಎಂದು ಪ್ರಕಾಶನ ಸಂಸ್ಥೆಯಾದ ವಾತಾ೯ ಕಮ್ಯೂನಿಕೇಶನ್ಸ್ ಪ್ರಕಟಣೆ ತಿಳಿಸಿದೆ.










