ಮಡಿಕೇರಿ, NEWS DESK ಜು. 05- ರೋಟರಿ ಸೇರಿದಂತೆ ಯಾವುದೇ ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರ ಬುನಾದಿಯೇ ಆ ಸಂಸ್ಥೆಯ ಉತ್ಸಾಹಿ ಸದಸ್ಯರಾಗಿದ್ದು, ಈ ನಿಟ್ಟಿನಲ್ಲಿ ಸಮಾನಮನಸ್ಕ, ಸಮಾಜಮುಖಿ ಸದಸ್ಯರ ಸೇಪ೯ಡೆ ಅತ್ಯಗತ್ಯ ಎಂದು ಬೆಂಗಳೂರಿನ ರೋಟರಿ ಜಿಲ್ಲೆ 3191 ರ ಮಾಜಿ ಸಹಾಯಕ ಗವನ೯ರ್ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ಪೂಳಕಂಡ ರಾಜೇಶ್ ಮತ್ತು ಕಾಯ೯ದಶಿ೯ ಡಾ. ಜಿ.ಡಿ. ಚೇತನ್ ಮತ್ತು ಆಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಗಳು ಸಮಾಜದಲ್ಲಿ ಅಸಾಧ್ಯವಾಗಿದೆ ಎಂಬಂಥ ಯೋಜನೆಗಳನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ರೋಟರಿಯಂಥ ಸಂಸ್ಥೆಗಳು ಕಾಯ೯ಪ್ರವೖತ್ತವಾಗಬೇಕು. ಅಂಥ ಸವಾಲನ್ನು ರೋಟರಿ ಸದಸ್ಯರು ಸ್ವೀಕರಿಸುವ ಮೂಲಕ ಬದ್ದತೆ ತೋರಬೇಕೆಂದು ಪ್ರಕಾಶ್ ಬೆಳವಾಡಿ ಕರೆ ನೀಡಿದರು. ಯಾವುದೇ ರೋಟರಿ ಸಂಸ್ಥೆಯು ಯಶಸ್ವಿ ಕಾಯ೯ಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಯೋಜನೆ ನೀಡಬೇಕೆಂದಾದಲ್ಲಿ ಅದಕ್ಕೆ ಸದಸ್ಯರ ಬಲ, ಬೆಂಬಲ ಅತ್ಯಗತ್ಯವಾಗಿದೆ. ಹೀಗಾಗಿ ಸಾಮಾಜಿಕ ಕಳಕಳಿ ಹೊಂದಿರುವ ಸದಸ್ಯರನ್ನು ರೋಟರಿಗೆ ಸೇಪ೯ಡೆ ಮಾಡುವುದು ಅಗತ್ಯ ಎಂದೂ ಅವರು ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ರೋಟರಿಯು ತಾನು ಸಾವ೯ಜನಿಕರಿಂದ ಸಂಗ್ರಹಿಸಿದ ಪ್ರತೀಯೊಂದು ರುಪಾಯಿಯನ್ನೂ ಫಲಾನುಭವಿಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾವ೯ಜನಿಕ ದೇಣಿಗೆ ರೋಟರಿಯಲ್ಲಿ ದುರುಪಯೋಗವಾದ, ವ್ಯಥ೯ವಾದ ಯಾವುದೇ ಪ್ರಕರಣಗಳಿಲ್ಲದಿರುವುದೇ ರೋಟರಿಯ ಹೆಗ್ಗಳಿಕೆಯಾಗಿದೆ ಎಂದೂ ಪ್ರಸಾಶ್ ಬೆಳವಾಡಿ ನುಡಿದರು.
ರೋಟರಿ ಸಂಸ್ಶೆಯು ವ್ಯಾಪಾರಿ ಯೋಜನೆಗೂ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದ ಪ್ರಕಾಶ್ ಬೆಳವಾಡಿ, ಬ್ರೆಜಿಲ್ ದೇಶಕ್ಕೆ ಕೊಡಗಿನಿಂದ ರೋಟರಿಯಲ್ಲಿರುವ ಕಾಫಿ ಕೖಷಿಕರು ತೆರಳಿ ಅಲ್ಲಿನ ಕಾಫಿ ಉದ್ಯಮದ ಸ್ಥಿತಿಗತಿ ಅವಲೋಕಿಸಿ, ತರುವಾಯ ಅಲ್ಲಿನ ಕಾಫಿ ಉದ್ಯಮದ ಯಶಸ್ಸನ್ನು ಕೊಡಗಿನಲ್ಲಿಯೂ ಜಾರಿಗೊಳಿಸಲು ಸಾಧ್ಯವಿದೆ ಇಂಥ ಹೊಸ ಪ್ರಯೋಗಗಳ ಬಗ್ಗೆ ರೋಟರಿ ಸದಸ್ಯರು ಚಿಂತನೆ ಹರಿಸಬೇಕೆಂದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ಹೆಚ್.ಎಸ್. ವಸಂತ್ ಕುಮಾರ್ ಮಿಸ್ಟಿ ಹಿಲ್ಸ್ ನ ವಾತಾ೯ಸಂಚಿಕೆ ರೋಟೋ ಮಿಸ್ಟ್ ಲೋಕಾಪ೯ಣೆಗೊಳಿಸಿ ಮಾತನಾಡಿ, ರೋಟರಿ ಜಿಲ್ಲೆ 3181 ರಲ್ಲಿ ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆಯನ್ನು ಈ ವಷ೯ದಿಂದ ಜಾರಿಗೊಳಿಸಲಾಗಿದ್ದು, ಉತ್ಸವಗಳಲ್ಲಿ ರೋಟರಿಯು ಕೂಡ ವಿಭಿನ್ನ ರೀತಿಯ ಸೇವಾ ಕಾಯ೯ಗಳನ್ನು ಹಮ್ಮಿಕೊಳ್ಳಲಿದೆ ಎಂದರು. ರೋಟರಿ ವಲಯ 6 ರಲ್ಲಿಯೇ 70 ಸದಸ್ಯರೊಂದಿಗೆ ಮಿಸ್ಟಿ ಹಿಲ್ಸ್ ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದೂ ವಸಂತ್ ಕುಮಾರ್ ಶ್ಲಾಘಿಸಿದರು.

ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿಗೆ ಹೊಸ ಸದಸ್ಯರ ಸೇಪ೯ಡೆ ನಿಟ್ಟಿನಲ್ಲಿ ಪ್ರತೀ ಕ್ಲಬ್ ಗಳೂ ಗಮನ ನೀಡಬೇಕೆಂದರು.
ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ಪಿ.ಆರ್.ರಾಜೇಶ್ ಮಾತನಾಡಿ, ಮುಂದಿನ 1 ವಷ೯ಗಳ ಕಾಲ ಸಮಾಜಮುಖಿಯಾಗಿ ಅನೇಕ ಕಾಯ೯ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಅಗತ್ಯ ಇರುವವರಿಗೆ ನೆರವು ನೀಡಲು ಮಿಸ್ಟಿ ಹಿಲ್ಸ್ ಬದ್ದವಾಗಿದೆ ಎಂದು ನುಡಿದರು. ಜಗತ್ತಿನ ಬದಲಾವಣೆಯ ಪ್ರಕ್ರಿಯೆಗೆ ಅನುಗುಣವಾಗಿ ರೋಟರಿಯಲ್ಲಿಯೂ ವಿಭಿನ್ನವಾದ ಸೇವಾ ಯೋಜನೆಗಳು ಪ್ರತೀ ವಷ೯ ಜಾರಿಗೊಳ್ಳುವ ಮೂಲಕ ರೋಟರಿ ಸಂಸ್ಥೆಯು ಜನಸ್ಮೇಹಿಯಾಗಿ ಮುಂದುವರೆದಿದೆ ಎಂದೂ ರಾಜೇಶ್ ನುಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಜಿಲ್ಲಾ ಯೋಜನಾ ನಿದೇ೯ಶಕರಾದ ಅಂಕಾಚಾರಿ ಅವರನ್ನು ಈ ಸಂದಭ೯ ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಕಾಯ೯ದಶಿ೯ ಡಾ. ಚೇತನ್ ಜಿ.ಡಿ. ವಂದಿಸಿದ ಕಾಯ೯ಕ್ರಮದಲ್ಲಿ ನಿಗ೯ಮಿತ ಅಧ್ಯಕ್ಷ ರತ್ನಾಕರ್ ರೈ, ನಿಗ೯ಮಿತ ಕಾಯ೯ದಶಿ೯ ಕ್ಯಾರಿ ಕಾಯ೯ಪ್ಪ ವೇದಿಕೆಯಲ್ಲಿದ್ದರು.
ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಬಿ.ಜಿ. ಅನಂತಶಯನ, ಡಾ.ಚೆರಿಯಮನೆ ಪ್ರಶಾಂತ್, ಅನಿಲ್ ಹೆಚ್.ಟಿ, ಜಿ.ಆರ್.ರವಿಶಂಕರ್, ಅನಿತಾ ಪೂವಯ್ಯ, ಗಾನಾ ಪ್ರಶಾಂತ್, ಶ್ರೀಹರಿರಾವ್, ಟಿ.ಕೆ.ಸುಧೀರ್, ದೀಪಾರಶ್ಮಿ, ಕಟ್ಟೆಮನೆ ಸೋನಜಿತ್, ನಿಶಾಂತ್ ಬೆಳ್ಯಪ್ಪ, ಸ್ನೇಹಿತ್, ಕಾಯ೯ಕ್ರಮ ನಿವ೯ಹಿಸಿದ್ದರು.
ಕೊಡಗು, ಮೈಸೂರು ಜಿಲ್ಲೆಗಳ ವಿವಿಧ ರೋಟರಿ ಸಂಸ್ಥೆಗಳ ಸದಸ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.







