ಮಡಿಕೇರಿ ಮಾ.1 NEWS DESK : ಮಡಿಕೇರಿ ನಗರಸಭೆಗೆ ಕಾಂಗ್ರೆಸ್ ಪ್ರಮುಖರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಶಾಸಕ ಡಾ.ಮಂತರ್ಗೌಡ ಅವರ ಶಿಫಾರಸ್ಸಿನ ಮೇರೆಗೆ ನಗರಾಭಿವೃದ್ಧಿ ಇಲಾಖೆ ಮಡಿಕೇರಿ ನಗರದ ಸದಾ ಮುದ್ದಪ್ಪ, ಬಿ.ಎನ್.ಮುದ್ದುರಾಜ್, ಮೊಹಮ್ಮದ್ ಯಾಕೂಬ್, ಬಿ.ಸಿ.ಜಗದೀಶ್ ಹಾಗೂ ಜುಲೈಕಾಬಿ ಅವರನ್ನು ನೇಮಕ ಮಾಡಿದೆ.









