Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ತೋಳೂರುಶೆಟ್ಟಳ್ಳಿ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶೇ.100 ಫಲಿತಾಂಶ*
  • *ಕೊಡಗು ಜಿಲ್ಲಾ ಜಾಗೃತಿ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ರಂಜಿತ್ ಕವಲಪಾರ ಆಯ್ಕೆ*
  • *ಎಸ್‍ಎಸ್‍ಎಲ್‍ಸಿಯಲ್ಲಿ ವಿ.ಯು.ಮಿಸ್ಬಾಹ್ ಸಾಧನೆ*
  • *ತರ್ಮೆಮೊಟ್ಟೆ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ನೇಮೋತ್ಸವ*
  • *ವಿಕಾಸ್ ಜನತಾ ಸೇವಾ ಟ್ರಸ್ಟ್ : ಕಾನೂನು ಸಲಹೆಗಾರರಾಗಿ ರೋಷನ್ ಹೆಚ್.ಸಿ ಆಯ್ಕೆ*
  • *ವಿಮಾನ ನಿಲ್ದಾಣ ಅಭಿವೃದ್ಧಿ ಪರಿಶೀಲನಾ ಸಭೆ : ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ಕಾರ್ಯ ತ್ವರಿತಗೊಳಿಸಲು ಸಂಸದ ಯದುವೀರ್ ಒಡೆಯರ್ ಸೂಚನೆ*
  • *ಚೀಯಕಪೂವಂಡ ಕಪ್ ಗೆ 24 ತಂಡಗಳ ಸೆಣಸಾಟ : ಏ.26 ರಂದು ಸಮಾರೋಪ*
  • *ಕಾಡುಪ್ರಾಣಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ಕಾವೇರಿ ಸೇವಾ ಸಂಘ ಆಗ್ರಹ*
  • *ಏ.28 ರಂದು ಕೊಡಗು ಜಿಲ್ಲಾ “ಬ್ಯಾರಿ ಸಾಹಿತ್ಯ ಸಮ್ಮೇಳನ”*
  • *ಮಹಿಳೆಯರು ರಾಜಕೀಯ ಮೀಸಲಾತಿಯಿಂದ ವಂಚನೆಗೆ ಒಳಗಾಗಿದ್ದಾರೆ : ಸಂಸದ ಯದುವೀರ್ ಒಡೆಯರ್ ಬೇಸರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರಾಷ್ಟ್ರೀಯ ಗೋಲ್ ಕೀಪರ್ ಪೂಣಚ್ಚ : ಕ್ರೀಡಾ ವಿಶ್ಲೇಷಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಂತರಾಷ್ಟ್ರೀಯ ಗೋಲ್ ಕೀಪರ್ ಪೂಣಚ್ಚ : ಕ್ರೀಡಾ ವಿಶ್ಲೇಷಣೆ*

ಏಪ್ರಿಲ್ 16, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

NEWS DESK :: ಕೊಡಗಿನಿಂದ 6 ಅಂತರಾಷ್ಟ್ರೀಯ ಗೋಲ್ ಕೀಪರ್ ಗಳನ್ನು ಕೊಟ್ಟ ಪುಟ್ಟ ಜಿಲ್ಲೆ ಎಂಬ ಹೆಮ್ಮೆಯಿದೆ. ಸುಬ್ಬಯ್ಯ, ಪೂಣಚ್ಚ, ಜಗದೀಶ್, ಬೋಪಣ್ಣ, ಕುಟ್ಟಪ್ಪ, ನಿಲನ್, ಹಾಗೂ ಇತ್ತೀಚೆಗೆ ಕರ್ನಾಟಕದಲ್ಲಿ ಕೊಡಗಿನ ಗೋಲ್ ಕೀಪರ್ ಗಳು ಬಹಳಷ್ಟು ಹೆಸರು ಮಾಡಿದ್ದಾರೆ.
ಬಾಳೆಯಡ ಚರ್ಮಣ ಹಾಗೂ ಪಾಚಿ( ತಾಮನೆ ಮಚೆಟೀರ) ದಂಪತಿಯರ ತೃತೀಯ ಪುತ್ರನಾಗಿ ಪೂಣಚ್ಚನವರು ಮಡಿಕೇರಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣಕ್ಕೆ ಸಂತ ಮೈಕಲರ ಶಾಲೆಗೆ ದಾಖಲಾದರು, ನಂತರ ವಾಂಡರ್ಸ್ ಕ್ಲಬ್ ನ ಸದಸ್ಯರಾಗಿ, ತಮ್ಮ ಪ್ರತಿಭೆಯನ್ನು ಹಾಕಿಯಲ್ಲಿ ಪ್ರದರ್ಶಿಸಿದರು. ವಾಂಡರ್ಸ್ ಕ್ಲಬ್ ನಲ್ಲಿ ಇವರಿಗೆ ಹರಿಪಾಲ್, ಹಸ್ತಾ ಹಾಗೂ ಹರೀಶ್ ಇವರುಗಳು ಮಾರ್ಗದರ್ಶನ ನೀಡಿದರು. S.A.I ಗೆ ಪ್ರವೇಶಿಸಿ, ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದರು.
ಕ್ರೀಡೆಯ ಹಾದಿ :: 
1986 ರಿಂದ 88 ರ ವರೆಗೆ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗಿಯಾದರು. 1987ರಲ್ಲಿ ಕರ್ನಾಟಕ ತಂಡದ ಪರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಪಂದ್ಯಾವಳಿ ಭಾಗವಹಿಸಿದ್ದರು, ಈ ತಂಡ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿತ್ತು. 1980ರ ಹೈದರಾಬಾದ್, 1989 ಉತ್ತರ ಪ್ರದೇಶ, 1990 ಜೂನಿಯರ್ ನ್ಯಾಷನಲ್ಸ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು, ಈ ತಂಡ ಎರಡು ಬಾರಿ ಪ್ರಥಮ ಸ್ಥಾನವನ್ನು ಪಡೆದಿತ್ತು.
1991ರಲ್ಲಿ ನೆಹರು ಗೋಲ್ಡ್ ಕಪ್ ನಲ್ಲಿ ತಂಡವು ಜಯಶಾಲಿಯಾಯಿತು, ಇದರಲ್ಲಿ ಇವರಿಗೆ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ನೀಡಲಾಯಿತು. ಇದೇ ವರ್ಷ ಭಾರತೀಯ ರಾಷ್ಟ್ರೀಯ ಕಿರಿಯ ತಂಡಕ್ಕೆ ಆಯ್ಕೆಯಾದರು.
ಭಾರತ ತಂಡದ ನಾಯಕ ::
1994ರ ಭಾರತದ ಕಿರಿಯರ ಹಾಕಿ ತಂಡದ ನಾಯಕನಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು. 1992 ರಿಂದ 1994ರ ವರೆಗೆ ಇಂದಿರಾಗಾಂಧಿ ಗೋಲ್ಡ್ ಕಪ್ ನಲ್ಲಿ ಭಾರತವನ್ನು, 1994 ರ ವಿಶ್ವಕಪ್ 1996ರ ಅಟ್ಲಾಂಟಾ ಹಾಗೂ 2000 ಸಿಡ್ನಿ ಒಲಂಪಿಕ್ಸ್ ನಲ್ಲಿ, 1998 ಮತ್ತು 2002ರ ವಿಶ್ವಕಪ್ ನಲ್ಲಿ ಮೀಸಲು ಗೋಲ್ ಕೀಪರ್ ಆಗಿದ್ದರು. 1992-93ರ ಬಾಂಬೆ ಏರ್ ಇಂಡಿಯಾ, 1994 95ರ S.B.I ಹಾಕಿ ಪಂದ್ಯಾಟಗಳಲ್ಲಿ ಭಾಗವಹಿಸಿದ್ದಾರೆ. ತದನಂತರ ಭಾರತೀಯ ಅಬಕಾರಿ ಇಲಾಖೆಗೆ ಸೇರ್ಪಡೆಗೊಂಡರು.
1991 ರಿಂದ 2003 ವರೆಗೆ ಸುಮಾರು ವರ್ಷಗಳ ಕಾಲ ಭಾರತ್ ತಂಡದ ಪರ ಹಲವಾರು ದೇಶಗಳ ವಿರುದ್ಧ ಸೆಣಸಾಡಿದ್ದಾರೆ. 93 ಬಾರಿ ಭಾರತವನ್ನು ಹಾಕಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. 1986 ರಿಂದ ಸುಮಾರು 15 ವರ್ಷಗಳ ಕಾಲ ಕರ್ನಾಟಕ ತಂಡದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಆಟಗಾರನಾಗಿ ಹಾಗು ನಾಯಕನಾಗಿ ಆಡಿದ್ದಾರೆ.
ಇವರ ಕುಟುಂಬವೇ ಹಾಕಿ ಆಟಗಾರರು ::
ಇವರ ಅಣ್ಣ ಕಾಳಪ್ಪ ಕ್ರೀಡಾಶಾಲೆಯ ಅದ್ಭುತ ಆಟಗಾರ, ಭಾರತ ಆಡುವುದು ಖಚಿತವಾಗಿತ್ತು. ಆದರೆ ಒಂದು ಚುಚ್ಚುಮದ್ದಿನಿಂದ ಇವರ ಬಾಳಿಗೆ ಕಾರ್ಮೋಡ ಕವಿಯಿತು. ಇದು ಮರೆಯಲಾಗದ ದಂತಕತೆ. ಒಬ್ಬ ಕ್ರೀಡಾಪಟುವಿಗೆ ಆದ ಅನ್ಯಾಯ. ನ್ಯಾಯ ದೇವರ ಮೊರೆ ಹೋಗಬೇಕಿತ್ತು ಎಂಬ ಚಿಂತೆ ಸದಾ ನನ್ನನ್ನು ಕಾಡುತ್ತಿದೆ.
ಇವರ ಇನ್ನೊಬ್ಬ ಅಣ್ಣ ಪೂವಯ್ಯ ಅದ್ಭುತ ಆಟಗಾರ, ಅಂಕಣಕಾರ, ತರಬೇತಿದಾರ, ವಕೀಲ ಹಾಗೂ ನೋಟರಿ ಇವರ ಬಾಳಿನಲ್ಲಿಯೂ ಕೂಡ ವಿಧಿಯು ಮೇಲುಗೈ ಸಾಧಿಸಿತ್ತು. ಇದನ್ನೆಲ್ಲ ನೆನೆಯುವಾಗ ಜೀವನದಲ್ಲಿ ಇಂತಹ ಘಟನೆಗಳು ಸಂಭವಿಸಬಹುದು ಎಂದು ಆಟಗಾರರು ಎಚ್ಚರ ವಹಿಸಲೇಬೇಕು. ಭಗವಂತನಲ್ಲಿ ಅದೃಷ್ಟ ಹಾಗೂ ಕರುಣೆಯನ್ನು ಪ್ರಾಪ್ತಿಸುವಂತೆ ಬೇಡಿಕೊಳ್ಳಬೇಕು. ಇವರು ತನ್ನ ಎಲ್ಲಾ ಯಶಸ್ವಿಗೆ ಕಾರಣರಾದ ತನ್ನ ನೆಚ್ಚಿನ ಗುರು ಹಾಗೂ ಅಣ್ಣನಾದ ಕಾಳಪ್ಪ ಅವರನ್ನು ಸದಾ ನೆನೆಯುತ್ತಾರೆ.
ಯಶಸ್ಸಿನ ಹಾದಿ ::
K.S.H.A ಹಾಕಿ ಕ್ಲಬ್ ನ ಅಧ್ಯಕ್ಷ, K.S.H.A  ಸಂಸ್ಥೆಯ ಉಪಾಧ್ಯಕ್ಷ, ಸೆಂಟ್ರಲ್ ಆಕ್ಸಿಸ್ ನ ತರಬೇತಿದಾರ, 2010ರ ಅಖಿಲ ಭಾರತ ಅಬಕಾರಿ ಇಲಾಖೆಯ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡವರು.
2012ರ ಕೌಟುಂಬಿಕ ಹಾಕಿ ::
2012ರಲ್ಲಿ ಅಮ್ಮತ್ತಿಯಲ್ಲಿ ಐಚೆಟ್ಟೀರ ಹಾಕಿ ಹಬ್ಬ ನಡೆಯಿತು. ಅಲ್ಲಿ “Road to London” ಭಾರತ ಹಾಕಿ ತಂಡ ಪ್ರದರ್ಶನ ಪಂದ್ಯಾವಳಿಗೆ ಆಗಮಿಸಿತ್ತು. ಇದರಲ್ಲಿ ಪೂಣಚ್ಚನವರು coorg-11 ಗೆ ಆಡಿದರು. ಅಚ್ಚುಕಟ್ಟಾದ ಮೈಕಟ್ಟು, ಎತ್ತರ, ಚುರುಕಿನ ಗೋಲ್ ಕೀಪರ್ ಆಗಿ ಕ್ರೀಡಾಭಿಮಾನಿಗಳ ಮನಸೇಳೆದರು. ಅಂದಿನ ಭಾರತ ತಂಡದ ತರಬೇತುದಾರ ಮೈಕಲ್ ನಾಬ್ಸ್, ಇವರನ್ನು ಜರ್ಮನಿಯ ಗೋಲ್ ಕೀಪರ್ ಜಾಕೋಬಿಗೆ ಹೋಲಿಸಿದರು. ಮುಂದೆ ತಮ್ಮ ಕುಟುಂಬದ ಪರ ಕೌಟುಂಬಿಕ ಹಾಕಿಯಲ್ಲಿ ಕೂಡ ಆಡಿದರು.
ಪೂಣಚ್ಚನ ಛಲ ::
1983ರಲ್ಲಿ ಕ್ರೀಡಾ ಶಾಲೆಯು ಮಾನ್ಸ್ ಕಂಪೌಂಡ್ ಮಡಿಕೇರಿಯಲ್ಲಿ ಪಂದ್ಯಾವಳಿ ಆಡಲು ಬಂದಿದ್ದರು. ಆಗ ಚಿಕ್ಕ ಹುಡುಗನಾಗಿದ್ದ ಪೂಣಚ್ಚ, ಕ್ರಿಕೆಟ್ ಪ್ಯಾಡ್ ಅನ್ನು ತನ್ನ ಕಾಲಿಗೆ ಕಟ್ಟಿ ತಾನು ಮುಂದೊಂದು ದಿನ ಗೋಲ್ ಕೀಪರ್ ಆಗುತ್ತೇನೆ ಎಂದಿದ್ದರು, ಆಗ ಅಲ್ಲಿದ್ದ ಕೆಲವು ಆಟಗಾರರು ಇವರ ಮೇಲೆ ಹಾಸ್ಯ ಚಟಾಕಿ ಹಾರಿಸಿದರು. ಆದರೆ ದಿನಗಳು ಉರುಳಿದಂತೆ ಭಾರತ ಕಂಡ ಪ್ರತಿಭಾವಂತ ಗೋಲ್ ಕೀಪರ್ ಆಗಿ ಹೊರೊಮ್ಮಿದರು.
S.B.I ನ ಉದ್ಯೋಗಿಯಾಗಿದ್ದ ಇವರು, ಕೇಂದ್ರ ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇರಿ, ಪ್ರಸ್ತುತ ಬಡ್ತಿ ಹೊಂದಿ ಇದರ ವ್ಯವಸ್ಥಾಪಕರಾಗಿ (superintendent) ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಪತ್ನಿ ನೆಲ್ಲಪಟ್ಟೀರ ಅನುಪಮ ಹಾಗೂ ಮಕ್ಕಳಾದ ಧ್ಯಾನ್ ದೇವಯ್ಯ ಹಾಗೂ ತೇಜ್ ಗಣಪತಿ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪೂಣಚ್ಚನಿಂದ ಕೊಡಗಿಗೆ ಕೊಡುಗೆ ::
ಅಂತರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಪಡೆದರೂ ಕೂಡ, ತನ್ನ ಸ್ನೇಹಿತರೊಡನೆ ಸೇರಿ ಮಾನ್ಸ್ ಹಾಕಿ ಅಕಾಡೆಮಿ ಸ್ಥಾಪಿಸಿ, ಸಣ್ಣ ಮಕ್ಕಳಿಗೆ ಬೇಸಿಗೆ ತರಬೇತಿ ಶಿಬಿರವನ್ನು ಏರ್ಪಡಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು,ಆದರೆ ಅವರ ಈಗಿನ ಕೆಲಸದ ಒತ್ತಡದಿಂದಾಗಿ ಶಿಬಿರವನ್ನು ಹಮ್ಮಿಕೊಳ್ಳಲು ಆಗುತ್ತಿಲ್ಲ. ಇದು ಕೊಡಗಿನ ಅಂತರಾಷ್ಟ್ರೀಯ ಹಾಕಿ ಆಟಗಾರರು ಕೊಡಗಿಗೆ ಮಾಡಬೇಕಾದ ಕರ್ತವ್ಯ ಎಂಬುದು ಕೆಲವು ಹಿರಿಯ ಆಟಗಾರರ ಮನಸ್ಸಿಚ್ಛೆ. ಇವರ ಅಣ್ಣಂದಿರ ಕನಸುಗಳನ್ನು ನನಸು ಮಾಡಿದ ತೃಪ್ತಿ ಇವರಿಗೂ ಇವರ ಕುಟುಂಬದವರಿಗೂ ಇದೆ.ಇವರು ಹೀಗೆಯೇ ಹಾಕಿಯ ಸೇವೆಯಲ್ಲಿ ಮುಂದುವರೆಯಲಿ ಎಂಬುದು ಕ್ರೀಡಾಭಿಮಾನಿಗಳ ಆಸೆ.

ಕ್ರೀಡಾ ವಿಶ್ಲೇಷಣೆ :  ಚೆಪ್ಪುಡೀರ ಕಾರ್ಯಪ್ಪ 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ತೋಳೂರುಶೆಟ್ಟಳ್ಳಿ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶೇ.100 ಫಲಿತಾಂಶ*

ಏಪ್ರಿಲ್ 25, 2026

*ಕೊಡಗು ಜಿಲ್ಲಾ ಜಾಗೃತಿ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ರಂಜಿತ್ ಕವಲಪಾರ ಆಯ್ಕೆ*

ಏಪ್ರಿಲ್ 25, 2026

*ಎಸ್‍ಎಸ್‍ಎಲ್‍ಸಿಯಲ್ಲಿ ವಿ.ಯು.ಮಿಸ್ಬಾಹ್ ಸಾಧನೆ*

ಏಪ್ರಿಲ್ 25, 2026

*ಕೊಡಗು ಜಿಲ್ಲಾ ಜಾಗೃತಿ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ರಂಜಿತ್ ಕವಲಪಾರ ಆಯ್ಕೆ*

ಏಪ್ರಿಲ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.25 NEWS DESK : ಕರ್ನಾಟಕ ಸರಕಾರದ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದಿಂದ ರಚಿಸಲ್ಪಟ್ಟಿರುವ ಕೊಡಗು ಜಿಲ್ಲಾ ಜಾಗೃತಿ ಸಮಿತಿಯ…

*ಎಸ್‍ಎಸ್‍ಎಲ್‍ಸಿಯಲ್ಲಿ ವಿ.ಯು.ಮಿಸ್ಬಾಹ್ ಸಾಧನೆ*

ಏಪ್ರಿಲ್ 25, 2026

*ತರ್ಮೆಮೊಟ್ಟೆ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ನೇಮೋತ್ಸವ*

ಏಪ್ರಿಲ್ 25, 2026

*ವಿಕಾಸ್ ಜನತಾ ಸೇವಾ ಟ್ರಸ್ಟ್ : ಕಾನೂನು ಸಲಹೆಗಾರರಾಗಿ ರೋಷನ್ ಹೆಚ್.ಸಿ ಆಯ್ಕೆ*

ಏಪ್ರಿಲ್ 25, 2026

*ವಿಮಾನ ನಿಲ್ದಾಣ ಅಭಿವೃದ್ಧಿ ಪರಿಶೀಲನಾ ಸಭೆ : ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ಕಾರ್ಯ ತ್ವರಿತಗೊಳಿಸಲು ಸಂಸದ ಯದುವೀರ್ ಒಡೆಯರ್ ಸೂಚನೆ*

ಏಪ್ರಿಲ್ 25, 2026

*ಚೀಯಕಪೂವಂಡ ಕಪ್ ಗೆ 24 ತಂಡಗಳ ಸೆಣಸಾಟ : ಏ.26 ರಂದು ಸಮಾರೋಪ*

ಏಪ್ರಿಲ್ 25, 2026

*ಕಾಡುಪ್ರಾಣಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ಕಾವೇರಿ ಸೇವಾ ಸಂಘ ಆಗ್ರಹ*

ಏಪ್ರಿಲ್ 25, 2026

*ಏ.28 ರಂದು ಕೊಡಗು ಜಿಲ್ಲಾ “ಬ್ಯಾರಿ ಸಾಹಿತ್ಯ ಸಮ್ಮೇಳನ”*

ಏಪ್ರಿಲ್ 25, 2026

*ಮಹಿಳೆಯರು ರಾಜಕೀಯ ಮೀಸಲಾತಿಯಿಂದ ವಂಚನೆಗೆ ಒಳಗಾಗಿದ್ದಾರೆ : ಸಂಸದ ಯದುವೀರ್ ಒಡೆಯರ್ ಬೇಸರ*

ಏಪ್ರಿಲ್ 25, 2026

*ಅಖಿಲ ಭಾರತ ಅಂತರ್ ಗುಂಪು ಸೈನಿಕ ಶಾಲೆಗಳ (ಗುಂಪು-ಹೆಚ್) ಪುಟ್ಬಾಲ್ ಪಂದ್ಯಾವಳಿ : ಚಾಂಪಿಯನ್ ಪಟ್ಟ ಉಳಿಸಿಕೊಂಡ ಕೊಡಗು ಸೈನಿಕ ಶಾಲೆ*

ಏಪ್ರಿಲ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.