
ಸುಂಟಿಕೊಪ್ಪ ಆ.28 NEWS DESK : ಶಾಲಾ ಹಂತದಿಂದಲ್ಲೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಮನವರಿಕೆಗೊಳಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ ರಚನೆ ಮಾಡಲಾಗುತ್ತಿದೆ ಎಂದು ಸಂತ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ರೇ.ಫಾ.ವಿಜಯ್ಕುಮಾರ್ ಹೇಳಿದರು. ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ಗೆ ಆಯ್ಕೆಗೊಂಡ ನಾಯಕ ಮತ್ತು ನಾಯಕಿಯರಿಗೆ ಪ್ರಮಾಣ ವಚನವನ್ನು ರೇ.ಫಾ.ವಿಜಯ್ಕುಮಾರ್ ಬೋಧಿಸಿ ಮಾತನಾಡಿದರು. ನಾಯಕತ್ವ ಮತ್ತು ಅದರ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಇತರೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಬೇಕೆಂದು ಅವರು ಕರೆ ನೀಡಿದರು. ಸೋಮವಾರಪೇಟೆ ಸಂತ ಜೋಸೆಫರ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರೇ.ಫಾ.ಅವಿನಾಶ್ ಮಾತನಾಡಿ, ನಾಯಕತ್ವಕ್ಕೆ ಇರಬೇಕಾದ ಮೌಲ್ಯತೆಗಳ ಪಂಚ ಸೂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಶಾಲಾ ಸಂಸತ್ತಿನ ನಾಯಕ ನಾಯಕಿಯರಿಗೆ ಬಿಲ್ಲೆಗಳನ್ನು ಹಾಕುವುದರ ಮೂಲಕ ಅವರ ನಾಯಕತ್ವಕ್ಕೆ ಮೆರುಗನ್ನು ನೀಡಲಾಯಿತು. ಶಾಲಾ ನಾಯಕರಾಗಿ ಭರತೇಶ್, ನಾಯಕಿಯಾಗಿ ಪಲ್ಲವಿ, ಪದವಿ ಪೂರ್ವ ಕಾಲೇಜಿನ ನಾಯಕನಾಗಿ ಡಿಂಪಲ್ ತಿಮ್ಮಯ್ಯ, ನಾಯಕಿಯಾಗಿ ಡಿ.ಡಿ.ಸೃಜನ್ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಂತ ಅಂತೋಣಿ ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೋವಿಟಾ ವಾಜ್ó, ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯರಾದ ಸೇಲ್ವರಾಜ್, ಸೋಪಿಯಾ, ತನುಜ, ಸಹನ, ರೀಟಾ, ಬಿಜು ವರ್ಗಿಸ್ ಮತ್ತಿತರರು ಇದ್ದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಅತಿಥಿಗಳಿಗೆ ಗೌರವ ಸಮರ್ಪಣೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.








