
ಗೋಣಿಕೊಪ್ಪ ಸೆ.10 NEWS DESK : ಗೋಣಿಕೊಪ್ಪ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ (ಕೆ.ಎನ್.ಎಸ್.ಎಸ್) ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಮೆನೋನ್, ಕಾರ್ಯದರ್ಶಿಯಾಗಿ ಸರಳ ಮಣಿ ಲಾಲ್ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪ ಹೋಟೆಲ್ ಪ್ರಕಾಶ್ ಇಂಟನ್ರ್ಯಾಷನಲ್ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಸಿ.ಮೋಹನ್, ಜಂಟಿ ಕಾರ್ಯದರ್ಶಿ ಬಿ.ಎಸ್.ವಿಜಯಕುಮಾರ್, ಖಜಾಂಚಿಯಾಗಿ ಉತ್ತಮನ್, ನಿರ್ದೇಶಕರುಗಳಾಗಿ. ಪಿ.ಭಾಸ್ಕರ್, ಅಜಿತ್ ವೇಣುಕಣ್ಣನ್, ಉಣ್ಣಿ ಕೃಷ್ಣನ್, ಟಿ.ವಿ.ವಿಜಯಕುಮಾರ್, ಪಿ.ವಿ.ಚಂದ್ರ, ವಿನೋದ್ಕುಮಾರ್, ಸುರೇಶ್ ಬಾಬು, ರಾಧಾ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.








