


ಮಡಿಕೇರಿ ಡಿ.24 NEWS DESK : ಕರ್ನಾಟಕ ರಾಜ್ಯ ಔಖಾಫ್ ಮಂಡಳಿ ಬೆಂಗಳೂರು ವತಿಯಿಂದ ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಡಿಕೇರಿ ಮೂಲಕ ಮೃತದೇಹವನ್ನು ತಾತ್ಕಾಲಿಕವಾಗಿ ಸಂರಕ್ಷಿಸಿಡಲು ಸಹಕಾರಿಯಾಗುವ 5 ಫ್ರೀಜರ್ಗಳನ್ನು ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳ ವಕ್ಫ್ ಸಂಸ್ಥೆಗಳಿಗೆ ಇಂದು ವಿತರಿಸಲಾಯಿತು. ವಕ್ಫ್ ಸಂಸ್ಥೆಗಳಾದ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದ ತಾಜುಲ್ ಇಸ್ಲಾಮ್ ಜುಮ ಮಸೀದಿ, ಸೋಮವಾರಪೇಟೆ ತಾಲ್ಲೂಕಿನ ದೊಡ್ಡಕುಂದ ಗ್ರಾಮದ ಜುಮ ಮಸೀದಿ, ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನ ಹನಫಿ ಜಾಮಿಯಾ ಮಸೀದಿ, ವಿರಾಜಪೇಟೆ ತಾಲ್ಲೂಕಿನ ಬಿಸ್ಮಿಲ್ಲಾ ಶಾವಲಿ ಮಕಾನ್ನ ಆಡಳಿತ ಮಂಡಳಿಯವರಿಗೆ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಜನಾಬ್ ಪಿ.ಎಂ.ಹಕೀಂ ಹಾಗೂ ಉಪಾಧ್ಯಕ್ಷ ಜೈನುಲ್ ಆಬಿದ್ ಮಡಿಕೇರಿ ಫ್ರೀಜರ್ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಜನಾಬ್ ಪಿ.ಎಂ.ಹಕೀಂ ಪ್ರತಿ ತಾಲ್ಲೂಕಿಗೆ ಒಂದೊಂದು ಫ್ರೀಜರ್ ನ್ನು ನೀಡಲಾಗಿದ್ದು, ಆಯಾ ತಾಲ್ಲೂಕಿನ ಎಲ್ಲಾ ಮಸೀದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು. ಸದಸ್ಯರಾದ ಇಮ್ರಾನ್ ಯು. ಮಡಿಕೇರಿ, ಆಲಿರ ಅಬ್ದುಲ್ಲ ಕಾಟ್ರಕೊಲ್ಲಿ ಪೊನ್ನಂಪೇಟೆ, ಎಂ.ಎಸ್.ಮಹಮ್ಮದ್ ಶಫಿ ವಿರಾಜಪೇಟೆ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಮೊಹಮ್ಮದ್ ಇರ್ಫಾನ್, ಕಚೇರಿ ಸಿಬ್ಬಂದಿಗಳಾದ ಸಮಿಯುಲ್ಲ, ಶಂವಿಲ್ ಅಲಿ, ನಾಝಿರ ಬಾನು ಮತ್ತಿತರರು ಉಪಸ್ಥಿತರಿದ್ದರು.









