
ಮಡಿಕೇರಿ ಮಾ.17 NEWS DESK : ಮೂಲತಃ ಗೋಣಿಕೊಪ್ಪಲು ನಿವಾಸಿ, ಕುಶಾಲನಗರದ ಇಂದಿರಾ ಬಡಾವಣೆಯಲ್ಲಿ ನೆಲೆಸಿರುವ ದಿ.ಟಿ.ವಿ.ಲಕ್ಷ್ಮಣ ನಾಯ್ಡು ಅವರ ಪುತ್ರ, ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ.ಎಲ್.ನಾಗೇಂದ್ರ (76) ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಮಾ.17) ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಪತ್ರಕರ್ತ ಟಿ.ಎಲ್.ಶ್ರೀನಿವಾಸ್ ಅವರ ಹಿರಿಯ ಸಹೋದರ ಆಗಿದ್ದಾರೆ.









