




ಮಡಿಕೇರಿ ಮಾ.27 NEWS DESK : ಚೆಟ್ಟಳ್ಳಿಯ ಕಾಫಿ ಬೋರ್ಡ್ ಜಾಗದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದ 25ನೇ ವರ್ಷದ ಬೆಳ್ಳಿ ಮಹೋತ್ಸವ ಮತ್ತು ದೇವಾಲಯ ನವೀಕರಣ, ಅಷ್ಟಬಂಧ, ಬ್ರಹ್ಮ ಕಲಶಾಭಿಷೇಕ ಮಾ.29 ಮತ್ತು 30 ರಂದು ನೆರವೇರಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀ ಶಕ್ತಿ ಗಣಪತಿ ದೇವಾಲಯ ಸಮಿತಿ ಕಾರ್ಯದರ್ಶಿ ಪಿ.ಅಪ್ಪುಕುಟ್ಟನ್, ಮಾ.29 ಮತ್ತು 30 ರಂದು ಎರಡು ದಿನಗಳ ಕಾಲ ಕೇರಳದ ಬ್ರಹ್ಮರ್ಷಿ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ಟ ಶುಳುವಾಲ ಮೂಲೆ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿದೆ. ಮಾ.29 ರಂದು ಬೆಳಗ್ಗೆ 9 ಗಂಟೆಗೆ ಸಪ್ತಶುದ್ಧಿ ಪುಣ್ಯಕ್ಷದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಸಾದ ಶುದ್ಧಿ ಅನುಜ್ಞಾ ಕಲಶ, ಕಲಶ ಪ್ರತಿಷ್ಠೆ, ವೇದಪಾರಾಯಾಣ ನಡೆಯಲಿದ್ದು, ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆಯೆಂದು ತಿಳಿಸಿದರು. ಅಂದು ಸಂಜೆ 5 ಗಂಟೆಗೆ ಶ್ರೀ ಲಕ್ಷೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ರಕ್ತೋಘ್ನ ಹವನ, ವಾಸ್ತು ಪೂಜೆ, ವಾಸ್ತು ಬಲಿ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಾ.30 ರಂದು ಬೆಳಗ್ಗೆ 6 ಗಂಟೆಯಿಂದ 48 ತೆಂಗಿನಕಾಯಿ ಅಷ್ಟ ದ್ರವ್ಯದಿಂದ ಗಣಪತಿ ಹವನ, ಗಣಪತಿ ಅಥರ್ವ ಶೀರ್ಷ ಹವನ, ಬಿಂಬ ಸಾನಿಧ್ಯ ಹವನ, ಬೆಳಗ್ಗೆ 9 ಗಂಟೆಗೆ ಪೂರ್ಣಾಹುತಿ, 9.40 ಗಂಟೆ ನಂತರ ವೃಷಭ ಲಗ್ನದಲ್ಲಿ ಗಣಪತಿಗೆ ಕಲಶಾಭಿಷೇಕ, ನಂತರ ನಾಗದೇವರಿಗೆ ಕಲಶಾಭಿಷೇಕ ಕಲ್ಪೋಕ್ತ ಪೂಜೆ, ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಅಪ್ಪುಕುಟ್ಟನ್ ಮಾಹಿತಿ ನೀಡಿದರು. ಕಾಫಿ ಬೋರ್ಡ್ ಜಾಗದಲ್ಲಿ ಕಳೆದ 25 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಶಕ್ತಿ ಗಣಪತಿ ದೇವಾಲಯದ ಬೆಳ್ಳಿ ಮಹೋತ್ಸವವು ಸರ್ವ ಧರ್ಮಗಳಿಗೆ ಸೇರಿದ ಭಕ್ತರ ಆಡಳಿತ ಮಂಡಳಿಯಿಂದ ನೆರವೇರುತ್ತಿರುವುದು ವಿಶೇಷವೆಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಎಸ್.ಮಹದೇವ, ಉಪಾಧ್ಯಕ್ಷ ಎಂ.ಎಸ್. ದಿಲೀಪ್ ಕುಮಾರ್ ಉಪಸ್ಥಿತರಿದ್ದರು.