




ಮಡಿಕೇರಿ NEWS DESK ಏ.7 : ಮಂಗಳೂರು ವಿಶ್ವ ವಿದ್ಯಾನಿಲಯ 2024ರಲ್ಲಿ ನಡೆಸಿದ ಎಂ.ಎ ಕೊಡವ ಪರೀಕ್ಷೆಯಲ್ಲಿ ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿನಿ ಸಹನಾ ಸಿ.ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಹನಾಗೆ ರ್ಯಾಂಕ್ ಪ್ರದಾನ ಮಾಡಲಾಯಿತು. ಸಹನಾ ಸಿ.ಕೆ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ನಾಡಿನ ಮಂಕ್ಯ ಗ್ರಾಮದ ಚಾಮೇರ ಕುಟುಂಬದ ದಿ.ಕಾಳಪ್ಪ ಸಿ.ಟಿ ಹಾಗೂ ಚೋಂದಮ್ಮ ಪಿ.ಕೆ ದಂಪತಿಯ ತೃತೀಯ ಪುತ್ರಿ. ಫೀ.ಮಾ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಹಾಗೂ ಭೋದಕ, ಭೋದಕೇತರ ವರ್ಗ ಸಹನಾಗೆ ಅಭಿನಂದನೆ ಸಲ್ಲಿಸಿದ್ದಾರೆ.