






ನಾಪೋಕ್ಲು ಏ.7 NEWS DESK : ರಾಮನವಮಿಯ ಪ್ರಯುಕ್ತ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕದಲ್ಲಿ ಶ್ರೀರಾಮ ಭಕ್ತ ಸಮಿತಿ, ಶ್ರೀ ಗಜಾನನ ಯುವಕ ಭಕ್ತ ಮಂಡಳಿ, ಶ್ರೀ ಕೃಷ್ಣ, ಸಂಕ್ರಾಂತಿ, ಸಾಗರ ಸ್ವ ಸಹಾಯ ಸಂಘ, ಅಂಬಿಕಾ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ ಗಣಪತಿ ಹೋಮ, ಕಳಸ ಪೂಜೆ ಹಾಗೂ ಶ್ರೀರಾಮ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಈ ಸಂದರ್ಭ ಮಡಿಕೇರಿ ಸಾಮಾಜಿಕ ಕಾರ್ಯಕರ್ತ ಚೀ.ನಾ ಸೋಮೇಶ್ ಮಾತನಾಡಿ, ಜಗತ್ತಿನಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮಿಸುವಂತಹ ದೇವರು ಎಂದಿದ್ದರೆ ಅವರಲ್ಲಿ ಶ್ರೀರಾಮ ದೇವರು ಮೊದಲಿಗರು ಎಂದು ರಾಮೋತ್ಸವದ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕುಕ್ಕೇರ ಅಜಿತ್, ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಚಂದ್ರ ಉಡೋತ್ ಪಾಲ್ಗೊಂಡಿದು. ಕೈಕಾಡು ಭಗವತಿ ದೇವಸ್ಥಾನದ ಪ್ರಧಾನ ಅರ್ಚಕ ಅಖಿಲೇಶ್ ಅವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮವನ್ನು ಸೂದನ ಜಗತ್, ಲವ ಪೂಜಾರಿ ಮತ್ತು ಬಾಡನ ಸತೀಶ್ ಅವರು ನಾಯಕತ್ವ ವಹಿಸಿ ನಡೆಸಿದರು.
ವರದಿ : ದುಗ್ಗಳ ಸದಾನಂದ.