ವಿರಾಜಪೇಟೆ ಏ.15 NEWS DESK : ಕಲಾವಿಧನ ಬದುಕು ಅನೇಕ ಏರು ಇಳಿತಗಳನ್ನು ಕಂಡು ಸಾಗುತ್ತದೆ. ಆದರೆ ಬದುಕಿನಲ್ಲಿ ಸಾಧಿಸಿರುವ ಸಾಧನೆಯು ಯುಗಯುಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಇದಕ್ಕೆ ಸಾಕ್ಷಿ ದಿ.ಆಪಾಡಂಡ ರಘು ಎಂದು ಕೊಡವ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು. ಕೊಡಗು ಜಿಲ್ಲಾ ಕಲಾವಿದರ ಸಂಘ ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕೆ.ಕೆ.ಗ್ರೂಪ್ ಖಾಸಾಗಿ ಕಟ್ಟಡ ಸಭಾಂಗಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ದಿ.ಆಪಾಡಂಡ ಟಿ. ರಘು ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಲವು ಕಲಾವಿದರಿಗೆ ಆಶ್ರಯ ಕರುಣಿಸಿ ಕೊಡವ ಧಿಮಂತ ಸಂಸ್ಕøತಿಯನ್ನು ವಿಶ್ವದ ಎಲ್ಲೆಡೆ ಧಾರವಾಹಿ ಮೂಲಕ ಭಿತ್ತರಿಸಿದ ಕೀರ್ತಿ ರಘು ಅವರಿಗೆ ಸಲ್ಲುತ್ತದೆ. ಮನುಜ ಸತ್ತರು ಕಲೆಯು ಎಂದಿಗೂ ಜೀವಂತವಾಗಿರುತ್ತದೆ. ಕೊಡಗಿನಲ್ಲಿ ಐನ್ ಮನೆಗಳು ಒಂದಾನೊಂದು ಕಾಲದಲ್ಲಿ ನಶೀಸಿ ಹೋಗುವ ಸ್ಥಿತಿಯಿತ್ತು. ಐನ್ ಮನೆಗಳ ಚಿತ್ರಣ ಐತಿಹಾಸಿಕ ಕ್ಷಣಗಳು ಹಿನ್ನಲೆಗಳನ್ನು ಧಾರವಾಹಿ ಮೂಲಕ ಜನತೆಗೆ ತೋರಿಸಿಕೊಟ್ಟು ಐನ್ ಮನೆಗಳ ಉಳಿವಿಗೆ ಕಾರಣಕರ್ತರಾದರು. ಎ.ಟಿ.ರಘು ಅವರು ಇತಂಹ ಮಾಹಾನ್ ವ್ಯಕ್ತಿಗಳ ಸಾಧನೆಯನ್ನು ಎಂದಿಗೂ ಜೀವಂತವಾಗಿರಿಸುವ ನಿಟ್ಟಿನಲ್ಲಿ ಶಾಶ್ವತವಾದ ಭವನ ನಿರ್ಮಾಣ ಮಾಡಬೇಕು. ಆ ಮೂಲಕ ಅವರನ್ನು ಸದಾ ಕಾಲವು ನೆನಪಿಸುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಹೇಳಿದರು. ಹಿರಿಯ ಕಲಾವಿದರಾದ ನೆರವಂಡ ಉಮೇಶ್ ಪ್ರಸ್ತಾವಿಕ ಮಾತನಾಡಿ, ಕೊಡಗು ಜಿಲ್ಲೆ ಪುಟ್ಟದಾದರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಹಲವು ಮಹನೀಯರ ದಂತಕತೆಗಳೇ ಸಾಕ್ಷಿ. ಕೊಡಗು ಜಿಲ್ಲೆಯಿಂದ ಒಂದು ನೂರು ರೂಪಾಯಿಗಳಿಂದ ಮದ್ರಾಸ್ ಗೆ ಪಯಣ ಬೆಳೆಸಿ ಸುಮಾರು 57 ಚಲನಚಿತ್ರಗಳನ್ನು ನಿರ್ದೇಶನ ಮಾಡಿ ಖ್ಯಾತ ನಾಮರ ಸಾಲಿನಲ್ಲಿ ನೆಲೆ ಕಂಡಿರುವ ಎ.ಟಿ.ರಘು ಧೀಮಂತರು. ನಟನೆ ಎಂಬುದು ಎನೆಂದು ತಿಳಿಯದಿದರುವ ವಯಸ್ಸಿನಲ್ಲಿ ನಟನೆ ಕಲಿಕೆಯೊಂದಿಗೆ ಹಲವು ಕಲಾವಿದರನ್ನು ಹುಟ್ಟುಹಾಕಿದ್ದಾರೆ. 17 ಕೊಡವ ಧಾರವಾಹಿಗಳನ್ನು ಕಿರುತೆರೆಯ ಮೇಲೆ ಬಿತ್ತರಿಸಿದ್ದಾರೆ. ಧಾರವಾಹಿಗಲ್ಲಿ ಬರುವ ಸಾಹಿತ್ಯ, ಹಾಡುಗಳು ಕ್ರಮಗಳು, ಸಂಸ್ಕøತಿಯು ಮುಂದಿನ ಪೀಳಿಗೆಗೆ ದಾರಿದೀಪದಂತೆ ಎಂದರು. ಜಿಲ್ಲಾ ಜನಪದ ಸಾಹಿತ್ಯ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಎ.ಟಿ. ರಘು ಅವರು ಆತ್ಮಜ್ಯೋತಿಯಂತೆ ಮನುಜನ ದೇಹಕ್ಕೆ ಸಾವು ಸಂಭವಿಸಿದರು. ಜ್ಯೋತಿಯು ಎಂದಿಗೂ ನಂದುವುದಿಲ್ಲಾ. ಟಿ.ಎ.ರಘು ಅವರ ಹೆಸರಿನಲ್ಲಿ ಶಾಶ್ವತವಾದ ಸ್ಮಾರಕ ನಿರ್ಮಾಣವಾಗಬೇಕು. ಕಳೆದುಕೊಂಡಿರುವ ದಿವ್ಯ ಚೇತನಕ್ಕೆ ಕಲಾವಿದರ ಆತ್ಮಪೂರ್ಣ ಕಲೆ ನಮನಗಳನ್ನು ಸಲ್ಲಿಸುವಂತಾಗಬೇಕು ಎಂದು ಹೇಳಿದರು. ಎ.ಟಿ. ರಘು ಅವರ ಪುತ್ರಿ ಬಯವಂಡ ಬಿನು ಸಚಿನ್ ಮಾತನಾಡಿ. ಜಿಲ್ಲೆ ಮತ್ತು ರಾಜ್ಯದ ಚಲನಚಿತ್ರ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ತಂದೆ. ಅವರು ನೀಡಿರುವ ಸ್ಪೂರ್ತಿದಾಯಕವಾದ ಮಾಹಿತಿಗಳು ಯುವ ಜನತೆಗೆ ಮಾರ್ಗದರ್ಶನವಾಗಬೇಕು. ಅವರ ಅಶೋತ್ತರಗಳು ಯುವ ಜನತೆಗೆ, ಕಲಾವಿದರಿಗೆ ದಾರಿದೀಪವಾಗಬೇಕು ಎಂದು ಹೇಳಿದರು. ಕೊಡವ ಸಮಾಜದ ವಿರಾಜಪೇಟೆ ಮಾಜಿ ಅಧ್ಯಕ್ಷರು, ಹಿರಿಯ ನಟರಾದ ವಾಂಚಿರ ನಾಣಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ..ಎ.ಟಿ ರಘು ಅವರು ನಮ್ಮನ್ನು ಬಿಟ್ಟು ಕಣ್ಮರೆಯಾಗಿದ್ದಾರೆ. ಅವರು ಕನ್ನಡ ಚಲನಚಿತ್ರ ಕ್ಷೇತ್ರ, ಕೊಡವ ಭಾಷೆ, ಸಂಸ್ಕøತಿ ಕಲೆಗೆ ಕಲಾವಿದರಿಗೆ ನೀಡಿರುವ ಸೇವೆ ಅನನ್ಯವಾಗಿದೆ. ಮನುಷ್ಯ ಜೀವನದಲ್ಲಿ ಸಾಧಿಸುವ ಅನೇಕ ಸಂಗತಿಗಳು ಕಣ್ಮರೆಯಾದರು ಗುಣಗಾಣ ಮಾಡುವಂತ್ತಿರಬೇಕು. ರಘು ಅವರ ಹೆಸರಿನಲ್ಲಿ ಕಲೆಗೆ ಸಂಭಂದಿಸಿದಂತೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಬ್ರಹ್ಮಗಿರಿ ವಾರ ಪತ್ರಿಕೆಯ ಸಂಪಾದಕರಾದ ಉಳ್ಳಿಯಡ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಮಾದಂಡ ಪೂವಯ್ಯ, ಕಾವೇರಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ.ಇಟ್ಟಿರ ಬಿದ್ದಪ್ಪ, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್, ನಿರ್ದೇಶಕರಾದ ಕೊಟ್ಟುಕತ್ತಿರ ಪ್ರಕಾಶ್, ಪೊನ್ನಚೆಟ್ಟಿರ ರಮೇಶ್, ಚೆರಿಯಪಂಡ ಸುರೇಶ್, ಕೋಟ್ರಮಾಡ ಲಾಲ ಪೂಣಚ್ಚ, ಚಲನಚಿತ್ರ ನಟಿ ತಾತಂಡ ಪ್ರಭಾ ನಾಣಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಎ.ಟಿ.ರಘು ಅವರ 45 ನಿಮಿಷಗಳ ಸಾಕ್ಷ್ಯ ಚಿತ್ರ ಪ್ರದರ್ಶನ ಕಂಡಿತು. ಜಿಲ್ಲೆಯ ಹೆಸರಾಂತ ಚಿತ್ರಕಲಾವಿದರಾದ ಬಿ.ಆರ್.ಸತೀಶ್ ಅವರ ಕುಂಚದಿಂದ ಎ.ಟಿ.ರಘು ಅವರ ಭಾವಚಿತ್ರ ಅನಾವರಣವಾಯಿತು. ಗಾಯಕರಾದ ಟಿ.ಡಿ.ಮೋಹನ್ ಮತ್ತು ಮಾಳೇಟಿರ ಅಜೀತ್ ಅವರಿಂದ ಶೋಕ ಗೀತೆ ಹಾಡಲಾಯಿತು. ಬಹುಭಾಷ ಸಾಹಿತಿಗಳಾದ ಉಳುವಂಗಡ ಕಾವೇರಿ ಅವರು ಎ.ಟಿ.ರಘು ಅವರ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡಿ ನುಡಿದರು. ಜಾದುಗಾರ್ ವಿಕ್ರಂ ಶೆಟ್ಟಿ ಅವರು ತಮ್ಮ ಜಾದು ಕಲೆಯ ಮೂಲಕ ಎ.ಟಿ.ರಘು ಅವರ ಭಾವಚಿತ್ರದೊಂದಿಗೆ ಹೂವಿನ ಮಾಲೆ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಲಾವಿದರ ಸಂಘ ದ ಪದಾಧಿಕಾರಿಗಳು, ಸದಸ್ಯರು, ಬಾಳೆಯಡ ಪ್ರತೀಶ್, ಪಟ್ಟಡ ಧನು, ಎ.ಟಿ. ರಘು ಅವರು ನಿರ್ಧೇಶಿಸಿದ ಚಲನಚಿತ್ರದಲ್ಲಿ ಅಭಿನಯಿಸಿದ ನಟರು ನಟಿಯರು, ಕಿರು ತೆರೆಯ ನಟನಟಿಯರು, ಗಾಯಕರು ಹಿತೈಷಿಗಳು, ಸ್ನೇಹಿತರು, ಹಾಜರಿದ್ದರು. ತಿರುವಲಂಡ ಸುಜಲ ನಾಣಯ್ಯ ಪ್ರಾರ್ಥಿಸಿದರೆ, ನೆಲ್ಲಚಂಡ ರೇಖಾ ಸ್ವಾಗತಿಸಿದರು. ಈರಮಂಡ ಹರಿಣಿ ಮತ್ತು ಮುಂಡಾಚಾಡಿರ ರಿನಿ ಕಾರ್ಯಕ್ರಮ ನಿರೂಪಿಸಿದರು. ಬಿದ್ದಂಡ ವಿಕ್ರಮ್ ಬಿದ್ದಪ್ಪ ವಂದಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ











