






ನಾಪೋಕ್ಲು ಏ.18 NEWS DESK : ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಸಂಭ್ರಮದಿಂದ ನಡೆಯಿತು. ಸಂಘದ ಕಛೇರಿಯಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ವಿಷು ಹಬ್ಬದ ಪ್ರಯುಕ್ತ ಆಯೋಜಿಸಿದ ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾದಂತಹ (ಕೊನ್ನ ಪೂ) ಹೊನ್ನೇ ಹೂ ವನ್ನು ಜನಾಂಗಬಾಂಧವರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷರು ಅನಿಲ್ ಮಹಿಳಾ ಅಧ್ಯಕ್ಷರಾದ ಸುಮಿತ್ರಾ, ಕಾರ್ಯದರ್ಶಿ ರಾಮು, ಉಪಾಧ್ಯಕ್ಷ ಅಭಿಲಾಷ್, ಖಜಂಚಿ ಮಣಿ, ಸಂಘಟನಾ ಕಾರ್ಯದರ್ಶಿ ಸತೀಶ್, ಚೇತನ್, ಮುಖ್ಯ ಅತಿಥಿಗಳಾಗಿ ಮುತ್ತಪ್ಪ ದೇವಾಲಯದ ಅಧ್ಯಕ್ಷರು ಚಂದ್ರ, ಮತ್ತು ವಿನಿಲ್, ಮನ್ಮದನ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮಲಯಾಳಿ ಬಾಂಧವರು ಪಾಲ್ಗೊಂಡಿದ್ದರು.