
ಸುಂಟಿಕೊಪ್ಪ ಮೇ 20 NEWS DESK : ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ 5ನೇ ದಿನ ನಡೆದ ಪಂದ್ಯಾವಳಿಯಲ್ಲಿ ಸಿಟಿಜನ್ ಉಪ್ಪಳ ಹಾಗೂ ಅಶೋಕ ಎಫ್.ಸಿ ಮೈಸೂರು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಪುಟ್ಬಾಲ್ ಮೊದಲನೇ ಪಂದ್ಯಾವಳಿಯು ನೇತಾಜಿ ಎಫ್.ಸಿ ಮಂಡ್ಯ ಹಾಗೂ ಸಿಟಿಜನ್ ಉಪ್ಪಳ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ನೇತಾಜಿ ಎಫ್.ಸಿ ಮಂಡ್ಯ ತಂಡವು ಬಾರದ ವಾಕ್ಓವವರ್ ಹಿನ್ನಲೆಯಲಿಸಿಟಿಜನ್ ಉಪ್ಪಳ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ದ್ವಿತೀಯ ಪಂದ್ಯಾವಳಿಯು ಆಶೋಕಎಫ್.ಸಿ ಮೈಸೂರು ಹಾಗೂ ಪೈಟರ್ಸ್ ಎಫ್.ಸಿ. ಕುತೂಪರಂಬು ತಂಡಗಳ ನಡುವೆ ನಡೆದು ಪ್ರಥಮಾರ್ಧದಲ್ಲಿ ಪೈಟರ್ಸ್ ಎಫ್.ಸಿ. ಕುತೂಪರಂಬು ತಂಡದ ಆಟಗಾರ 2ನೇ ನಿಮೀಷದಲ್ಲಿ ಶಬೀಬ್ ಅವರು ಎಸಗಿದ ತಪ್ಪಿನಿಂದ ಸ್ವಯಂ ಗೋಲುಗಳಿಸುವುದರೊಂದಿಗೆದುರಾಳಿ ಮೈಸೂರು ತಂಡಕ್ಕೆ ಮುನ್ನಡೆ ಸುಲಭವಾಗಿ ದೊರೆಯಿತು. ದ್ವೀತಿಯಾರ್ಧದಲ್ಲಿ ಮೈಸೂರು ಆಶೋಕ ತಂಡದ ಮುನ್ನಡೆ ಭಗತ್ ಆಟಗಾರ 10 ನೇ ನಿಮೀಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಒದಗಿಸಿದರು. ಪೈಟರ್ಸ್ ಎಫ್.ಸಿ. ಕುತೂಪರಂಬು ತಂಡದ ಆಟಗಾರರು ಬಿರುಸಿನ ಆಟಕ್ಕೆ ಇಳಿದು 13ನೇ ನಿಮಿಷದಲ್ಲಿ ಸಿಯಾಬ್ 1 ಗೋಲುಗಳಿಸುವ ಮೂಲಕ ತಂಡದ ಮೇಲಿರುವ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ಎದುರಾಳಿ ತಂಡವು ಮತ್ತೊಂದು ಗೋಲು ಬಾರಿಸಿದಂತೆ ಉತ್ತಮವಾದ ಆಟವನ್ನು ಪ್ರದರ್ಶಿಸುವ ಮೂಲಕ ಪೈಟರ್ಸ್ ಎಫ್.ಸಿ. ಕುತೂಪರಂಬು ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಮೈಸೂರು ಆಶೋಕ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಇದೇ ಸಂದರ್ಭ ಸಿಟಿಜನ್ ಉಪ್ಪಳ ತಂಡದ ವ್ಯವಸ್ಥಾಪಕರಾದ ಆಶ್ರಫ್ ಅವರು ಕಳೆದ 27 ವರ್ಷಗಳಿಂದ ತಂಡವನ್ನು ಕರೆತರುತ್ತಿದ್ದು ಅವರ ಕ್ರೀಡಾ ಪ್ರೇಮವನ್ನು ಸ್ಮರಿಸಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಭ್ರಷ್ಟಚಾರ ನಿಗ್ರಹ ದಳದ ನಿರ್ದೇಶಕ ಶ್ರೀರಾಮ್, ಅಧ್ಯಕ್ಷ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ಯು.ಪ್ರಸನ್ನ, ಟಿ.ಯು.ಜಾನ್,ವಾಸು, ಶಶಿಕುಮಾರ್ ರೈ, ಪಂಚಾಯಿತಿ ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ರಪೀಕ್ಖಾನ್ ಸೇರಿದಂತೆ ಮತ್ತಿತರರು ಇದ್ದರು.
ಇಂದಿನ (ಮೇ 21) ಪಂದ್ಯಾವಳಿಗಳು
ಮೊದಲ ಪಂದ್ಯ 3 ಗಂಟೆಗೆ ಟಿಡಿಎಲ್ ಎಫ್.ಸಿ ಬೈಲುಕೊಪ್ಪ v/s ವಿಜಯನಗರ ಮೈಸೂರು, ದ್ವಿತೀಯ ಪಂದ್ಯಾವಳಿ 4.30 ಗಂಟೆಗೆ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ v/s ಸಿಟಿಜನ್ ಉಪ್ಪಳ










