ಸಿದ್ದಾಪುರ ಜೂ.10 NEWS DESK : ಮರಗಳ ಸಾಗಾಣಿಕೆಯನ್ನು ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶಿಸಿರುವ ಷರತ್ತಿಗೆ ಸಮಯಾವಕಾಶವನ್ನು ನೀಡುವಂತೆ ಕೊಡಗು ಜಿಲ್ಲೆಯ ಮರದ ವ್ಯಾಪಾರಿಗಳು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜೂ.6 ರಿಂದ ಜುಲೈ 5 ರವರೆಗೆ ಎಲ್ಲಾ ರೀತಿಯ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಇದರಿಂದಾಗಿ ಮರದ ವ್ಯಾಪಾರಿಗಳು ಹಾಗೂ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮರದ ವ್ಯಾಪಾರಿಗಳು ತೋಟದಲ್ಲಿ ಕಡಿದು ಮರಗಳು ಮೃದು ಆಗಿದ್ದು, ತಕ್ಷಣವೇ ಸಾಗಿಸದಿದ್ದಲ್ಲಿ ಉಪಯೋಗಕ್ಕೆ ಬರುವುದಿಲ್ಲ, ಇದರಿಂದ ವ್ಯಾಪಾರಿಗಳಿಗೆ ತುಂಬಾ ನಷ್ಟ ಉಂಟಾಗಲಿದೆ ಕಡಿದ ಮರದ ನಾಟಗಳನ್ನು ಸಾಗಿಸಲು ಮುಂದಿನ 20-06-2025 ರವರೆಗೆ ಸಮಯಾವಕಾಶವನ್ನು ನೀಡಬೇಕೆಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಸಮೀರ್, ಕಾರ್ಯದರ್ಶಿ ಹುರೈಸ್, ಸದಸ್ಯರಾದ ಮಹಮ್ಮದ್,ಹಂಸ,ಆಸೀಫ್, ಮುಸ್ತಫಾ, ಮುಂತಾದವರು ಪಾಲ್ಗೊಂಡಿದ್ದರು.











