
ಸೋಮವಾರಪೇಟೆ NEWS DESK ಜು.27 : ಸೋಮವಾರಪೇಟೆ ಸಮೀಪದ ಶಾಂತಳ್ಳಿ ಜೇಡಿಗುಂಡಿ ಸಮೀಪ ರಸ್ತೆಯ ಮೇಲೆ ಬರೆ ಕುಸಿಯುವ ಸಂದರ್ಭ ಸುದ್ದಿ ಮಾಡುತ್ತಿದ್ದ ಪತ್ರಕರ್ತ ಹರಗ ಶರಣ್ ಎಂಬುವವರ ಓಮಿನಿ ವ್ಯಾನ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಬರೆ ಕುಸಿತದ ಫೋಟೋ ತೆಗೆಯುತ್ತಿದ್ದ ಸಂದರ್ಭ, ವಾಹನದ ಮೇಲೆ ಮರವೊಂದು ಬಿದ್ದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿದೆ. ಶರಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.








