

ವಿರಾಜಪೇಟೆ ಸೆ.3 NEWS DESK : ಪ್ರತಿಯೊಬ್ಬ ಮಗುವಿಗೆ ಸಂಗೀತ ಸ್ಪರ್ಶವಾದಲ್ಲಿ ಒರಟುತನ ದೂರವಾಗಿ ಮೃದುವಂತಿಕೆ ದೊರೆಯಲಿದೆ ಎಂದು ಕರ್ನಾಟಕ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ವಿರಾಜಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ದಿ. ಎಂ.ವೆಂಕಟೇಶ ಕಾಮತ್ ಟ್ರಸ್ಟ್ ವತಿಯಿಂದ ವಾಯ್ಸ್ ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಲ್ಲಿ ಮಕ್ಕಳಿಗೆ ಒಳ್ಳೆಯ ಹಾಡು, ಸಂಸ್ಕøತಿ ಕಲಿಸುವುದರಿಂದ ಮನಸ್ಸು ಪರಿವರ್ತನೆಗೊಳ್ಳುತ್ತದೆ. ದಿ.ವೆಂಕಟೇಶ್ ಕಾಮತ್ ಅವರ ಕುರಿತು ಮಾತನಾಡಿ ವೆಂಕಟೇಶ್ ಕಾಮತ್ 1934ರಲ್ಲಿ ಜನಿಸಿ 2000 ದಲ್ಲಿ ಕಾಲವಾದರೂ 66 ವರ್ಷಗಳ ಕಾಲ ಅರ್ಥಪೂರ್ಣ ಬದುಕು ಸಾಗಿಸಿದ್ದರು. ಅವರು ರಾಜ್ಯದಲ್ಲಿಯೇ ಅತ್ಯುನ್ನತ ದಸ್ತಾವೇಜು ಬರಹಗಾರರಾಗಿ ಖ್ಯಾತಿ ಪಡೆದಿದ್ದರು. ಅವರು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರಮಾಣದ ಆಸಕ್ತಿ ಮತ್ತು ಒಲವನ್ನು ಹೊಂದಿದ್ದರು. ರಾಮಾಯಣ ಮತ್ತು ಮಹಾಭಾರತವನ್ನು ತಮ್ಮ ಮಾತಿನಲ್ಲಿ ವಿವರಿಸುತ್ತಿದ್ದ ಅವರಿಗೆ ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಅತ್ಯಂತ ಸರಳ ಜೀವಿಯಾಗಿ, ಸಜ್ಜನ ವ್ಯಕ್ತಿಯಾಗಿ ಬಾಳಿ ಬದುಕಿದ ವ್ಯಕ್ತಿಯ ಬಗ್ಗೆ ಯುವ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂದರು. ದಿ. ವೆಂಕಟೇಶ್ ಕಾಮತ್ ಅವರು ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಈ ಸಮಾಜದಲ್ಲಿ ಬಾಳಿ ಬದುಕಿದಂತವರು. ಅವರ ಮೇರು ವ್ಯಕ್ತಿತ್ವಕ್ಕೆ ಇನ್ನೊಂದು ಉದಾಹರಣೆ ಎಂದರೆ ಅವರೊಬ್ಬ ಗೋವು ಪ್ರೇಮಿಯಾಗಿದ್ದರು. ಮನೆಯಲ್ಲಿ ತಮ್ಮ ಮಕ್ಕಳಂತೆ ಗೋವುಗಳನ್ನು ಸಾಕಿ ಸಲಹಿದ್ದರು. ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದ ಅವರು ಕೊನೆತನಕ ಮಾರ್ಗದರ್ಶಕರಾಗಿ ತಮ್ಮ ಸಲಹೆ ಸೂಚನೆಗಳನ್ನು ದೇವಸ್ಥಾನ ಸಮಿತಿಯವರಿಗೆ ನೀಡುತ್ತಾ ಬಂದಿದ್ದರು. 1950- 60ರಲ್ಲಿ ಗೌರಿ ಗಣೇಶೋತ್ಸವ ಗೌರಿ ಗಣೇಶೋತ್ಸವ ಸರಳವಾಗಿ ಆಚರಣೆ ಆಗುತ್ತಿದ್ದಂತಹ ಸಂದರ್ಭದಲ್ಲಿ ಗಂಜಾಂ ಭಾಗದಿಂದ ಪಂಚ ವಾದ್ಯಗಳನ್ನು ಕರೆಸಲಾಗುತ್ತಿತ್ತು ವಿಸರ್ಜನೆ ವೇಳೆಯಲ್ಲಿ ಮೊರದಲ್ಲಿ ಗೌರಿ ಮತ್ತು ಗಣೇಶನನ್ನು ಕುಳ್ಳಿರಿಸಿ ಬಸವನಗುಡಿಯಿಂದ ಮಾರಿಗುಡಿ ದೇವಾಲಯದವರೆಗೆ ಮೆರವಣಿಗೆ ನಡೆಸಿ ನಂತರ ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಈ ಕಾಲಘಟ್ಟದಲ್ಲಿ ವಿರಾಜಪೇಟೆ ಭಾಗಕ್ಕೆ ಕಾಲಾರಾ ಮತ್ತು ಪ್ಲೇಗ್ ರೋಗ ಬಂದಿದ್ದಂತಹ ಸಂದರ್ಭದಲ್ಲಿ ಅದು ಅಂಟುರೋಗವೆಂದು ಒಬ್ಬರನ್ನೊಬ್ಬರು ಮುಟ್ಟಿಸಿಕೊಳ್ಳಲು ಕಷ್ಟ ಪಡುತ್ತಿದ್ದಂತಹ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆ ದಿವಂಗತ ವೆಂಕಟೇಶ್ ಕಾಮತ್ ಅವರು ಎತ್ತಿನಗಾಡಿಯಲ್ಲಿ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿ ಬರುತ್ತಿದ್ದರು. ಅಂತಹ ಒಬ್ಬ ಮಾನವೀಯ ವ್ಯಕ್ತಿ ಇವರಾಗಿದ್ದರು. 1960ರ ಆಸು ಪಾಸಿನಲ್ಲಿ ವಿರಾಜಪೇಟೆ, ಶ್ರೀಮಂಗಲ, ಕುಟ್ಟ ಭಾಗದಲ್ಲಿ ಹುಲಿ ಕಾಟದಿಂದ ಹಲವಾರು ಜನರು ಜೀವ ಕೂಡ ಕಳೆದುಕೊಂಡಿದ್ದಂತಹ ಸಂದರ್ಭದಲ್ಲಿ ಇದರ ಹಾವಳಿಯನ್ನು ತಪ್ಪಿಸಲು ಒಂದು ಟೀಮ್ ಮಾಡಲಾಗಿತ್ತು. ಸ್ಕೌಟ್ ಅಂಡ್ ಗೈಡ್ನಲ್ಲಿ ಇದ್ದಂತಹ ವೆಂಕಟೇಶ್ ಕಾಮತ್ ಅವರು ಅವರಿಗೆ ಸಹಕಾರ ನೀಡಿದ್ದರು. ಈ ವಿಚಾರ ಮೈಸೂರು ಮಹಾರಾಜರಿಗೂ ಮುಟ್ಟಿತ್ತು. ಆ ಸಂದರ್ಭದಲ್ಲಿ ಚಾಮರಾಜ ಒಡೆಯರ್ ಇವರನ್ನು ದಸರಾ ಸಂದರ್ಭದ ದರ್ಬಾರ್ಗೆ ಆಹ್ವಾನ ಕೊಟ್ಟು ಇವರಿಗೆ ಗೌರವ ಸೂಚಿಸಿದ್ದನ್ನು ನಾವು ಸ್ಮರಿಸಬೇಕು ಎಂದರು. ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಂಭ್ರಮಿಸಬೇಕು ಎನ್ನುವ ಪರಿಕಲ್ಪನೆ ಹೊಂದಿದ್ದ ವ್ಯಕ್ತಿ ಇವರಾಗಿದ್ದರು. ದುರಂತವೆಂದರೆ ಸರಕಾರ ಇವರನ್ನ ಗುರುತಿಸಲಿಲ್ಲ. ಈಗ ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವ ಕಾಲ ಬಂದಿದೆ ಆದರೆ ಇಂತಹ ವ್ಯಕ್ತಿಗಳನ್ನ ಗುರುತಿಸಲಿಲ್ಲ ಎನ್ನುವುದು ನಿಜವಾಗಿಯೂ ಬೇಸರದ ಸಂಗತಿ. ಅತ್ಯಂತ ಪ್ರಭಾವಿ ವ್ಯಕ್ತಿ ಇವರಾಗಿದ್ದರು ಕೂಡ ರಾಜಕೀಯಕ್ಕೆ ಬೆಳೆಯಲು ಇದನ್ನ ಬಂಡವಾಳ ಮಾಡಿಕೊಳ್ಳಲಿಲ್ಲ. ನಿಸ್ವಾರ್ಥ ಸೇವೆಯನ್ನ ಸಲ್ಲಿಸಿದಂತಹ ವ್ಯಕ್ತಿ ಇವರಾಗಿದ್ದು ಇಂತವರನ್ನು ಸರಕಾರ ಗುರುತಿಸದೆ ಇರುವುದು ನಿಜಕ್ಕೂ ದುಃಖಕರ ವಿಷಯ ಎಂದರು. ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಂತಹ ರವೀಂದ್ರನಾಥ ಕಾಮತ್ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿದ್ದರೂ ಬಸವೇಶ್ವರ ದೇವಾಲಯದಲ್ಲಿ ಗೌರಿ ಗಣೇಶೋತ್ಸವ ಆಚರಣೆ ಸಂದರ್ಭದಲಿÉೂಂದು ತಿಂಗಳ ಕಾಲ ತಮ್ಮನ್ನು ತೊಡಗಿಸಿಕೊಂಡು ಈ ಹಬ್ಬಕ್ಕೆ ನ್ಯಾಯ ಕೊಡುತ್ತಿರುವುದು ನಿಜವಾಗಲೂ ಮೆಚ್ಚುವಂತಹ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ವೆಂಕಟೇಶ್ ಕಾಮತ್ ಟ್ರಸ್ಟ್ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಿರುವುದರ ಜೊತೆಗೆ ಆವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ತುಳಸಿ ಫಾರ್ಮ್ನ ಮಣಿಕಾರ್ ಲಕ್ಷ್ಮಿ ನಾರಾಯಣ ಶಾನ್ಬೋಗ್ ಮಾತನಾಡಿ ಇಷ್ಟು ದೊಡ್ಡ ಕಾರ್ಯಕ್ರಮ ಮಾಡುವುದು ಸುಲಭದ ಮಾತೇನು ಅಲ್ಲ. ಸಂಪನ್ಮೂಲದ ಕ್ರೋಡೀಕರಣ ಬಹಳ ಕಷ್ಟವಿದೆ. ಸಮಿತಿ ವತಿಯಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವಂತಹದ್ದು ಶ್ಲಾಘನೀಯ. ಅತ್ಯುತ್ತಮವಾದ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತೀರ್ಪುಗಾರರಾಗಿ ಆಗಮಿಸಿದ್ದ ವಕೀಲರಾದ ಪ್ರಶಾಂತ್ ಬಾಳಿಗಾ ಮಾತನಾಡಿ ಪ್ರತಿಯೊಬ್ಬರಲ್ಲಿಯು ಒಳ್ಳೆಯ ಆಲೋಚನೆ ಇದ್ದಲ್ಲಿ ಉತ್ತಮ ದಾರಿಯತ್ತ ತೆರಳುತ್ತೇವೆ. ಯಾವುದೇ ವಿಷಯವನ್ನಾದರೂ ಶ್ರದ್ಧೆಯಿಂದ ಕಲಿಯಬೇಕು. ಯಶಸ್ಸಿನ ಶಿಖರ ಏರಬೇಕು. ಅದಕ್ಕೆ ನಿತ್ಯವು ಪರಿಶ್ರಮವಿರಬೇಕು. ಕಲಾವಿದರಿಗೆ ಇದೊಂದು ಉತ್ತಮ ಅವಕಾಶ. ಎಲ್ಲರೂ ಕೂಡ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಯ್ಸ್ ಆಫ್ ವಿರಾಜಪೇಟೆ ಕಾರ್ಯಕ್ರಮವನ್ನು ಕಳೆದ 15 ವರ್ಷಗಳಿಂದ ದಿ.ವೆಂಕಟೇಶ್ ಕಾಮತ್ ಜ್ಞಾಪಕಾರ್ಥವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ, ಎಲೆಮರೆಕಾಯಿಯಂತಿರುವ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಉದ್ದೇಶದಿಂದ ಗೌರಿ ಗಣೇಶೋತ್ಸವ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದೆ ಹೇಳಿದರು. ವೇದಿಕೆಯಲ್ಲಿ ಉತ್ಸವ ಸಮಿತಿಯ ಪದಾಧಿಕಾರಿ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.








