
ಮಡಿಕೇರಿ ಸೆ.20 NEWS DESK : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ಕರಗ ಉತ್ಸವ ಆರಂಭದ ದಿನದಂದು, ಆಯುಧಪೂಜೆ ಮತ್ತು ವಿಜಯದಶಮಿಯಂದು ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ಅಧ್ಯಕ್ಷರಾದ ಎಂ.ಎ.ಮುನೀರ್ ಮಾಚಾರ್, ಸೆ.22ರಂದು ಸಂಜೆ ನಗರದ ಬನ್ನಿಮಂಟಪದಿಂದ ಕರಗ ಉತ್ಸವ ಆರಂಭಗೊಳ್ಳಲಿದೆ. ಈ ಸಂದರ್ಭ ಕರಗ ಸಾಗುವ ಮಹದೇವಪೇಟೆ ರಸ್ತೆಯ ಮನೆಗಳ ಮುಂದೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆ ಚುಕ್ಕಿ, ಎಳೆ, ಬಣ್ಣ ಮತ್ತು ಹೂವಿನ ರಂಗೋಲಿ ಎಂಬ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಕರಗ ಸಾಗುವ ಸಂಜೆ 6 ಗಂಟೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮನೆಯ ಮುಂದೆ ರಂಗೋಲಿ ರಚಿಸಿರುವಂತೆ ವಿನಂತಿಸಿದರು. :: ದೀಪದ ಅಲಂಕಾರ ಸ್ಪರ್ಧೆ :: ಕರಗೋತ್ಸವ ಆರಂಭಗೊಳ್ಳುವ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸುವ ಸ್ಪರ್ಧೆಯನ್ನು ದಶಪಂಟಪ ಸಮಿತಿ ಆಯೋಜಿಸಿದೆಯೆಂದು ತಿಳಿಸಿದರು. ಸಾಂಪ್ರದಾಯಿಕ ಉಡುಪಿನ ಸೆಲ್ಫಿ ಸ್ಪಧೆರ್s-ರಂಗೋಲಿ ಸ್ಪರ್ಧೆಯ ಜೊತೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಉಡುಪಿನೊಂದಿಗೆ ಇಡೀ ಕುಟುಂಬ ಸೆಲ್ಫಿ ತೆಗೆದು ಕಳುಹಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಎವಿ ಶಾಲೆ, ಚೌಕಿ, ಸ್ಕೈ ಗೋಲ್ಡ್ ಮತ್ತು ಅರವಿಂದ್ ಜ್ಯುವೆಲ್ಲರಿ ಬಳಿ ಸೆಲ್ಫಿ ಪಾಯಿಂಟ್ಗಳನ್ನು ಮಾಡಲಾಗುತ್ತದೆ. ಸಾಂಪ್ರದಾಯಿಕ ಉಡುಪಿನಲ್ಲಿ ಕುಟುಂಬ ಸಹಿತರಾಗಿ ಸೆಲ್ಫಿ ತೆಗೆದುಕೊಂಡವರು ಅದನ್ನು ಮೊ.9480003811, 8310891269, 9590421191 ಗೆ ಕಳುಹಿಸಬೇಕೆಂದು ತಿಳಿಸಿದರು. ಆಯುಧ ಪೂಜೆಯಂದು ವಾಹನಗಳ ಅಲಂಕಾರ-ಅ.1 ರಂದು ಆಯುಧ ಪೂಜೆ ಅಂಗವಾಗಿ ಸಂಜೆ 7 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ನಡೆಯಲಿದ್ದು, ಲಾರಿ, ಬಸ್, ಕಾರ್, ಸೈಕಲ್, ಬೈಕ್, ಆಟೋ, ಟೆಂಪೊ, ಜೀಪ್, ಪಿಕ್ಅಪ್, ಜೆಸಿಬಿ, ಟ್ರ್ಯಾಕ್ಟರ್ಗಳು ಹಾಗೂ ಇನ್ನಿತರ ವಾಹನ ಅಲಂಕಾರ ಸ್ಪರ್ಧೆಗಳು ನಡೆಯಲಿದೆ. :: ನಗರಾಲಂಕಾರ :: ಅ.2ರಂದು ನವರಾತ್ರಿ ಪ್ರಯುಕ್ತ ಮಡಿಕೇರಿ ನಗರಾಲಂಕಾರ ಸ್ಪರ್ಧೆಯ ಅಂಗವಾಗಿ ನಗರದ ವಿವಿಧ ಕಟ್ಟಡಗಳ ಅಲಂಕಾರ ಮತ್ತು ದೇವಾಲಯಗಳ ಅಲಂಕಾರ ಸ್ಪರ್ಧೆ ನಡೆಯಲಿದ್ದು, ನವರಾತ್ರಿಯ 9 ದಿನವೂ ಮಡಿಕೇರಿ ನಗರದ ದಶ ದೇವಾಲಯಗಳು, ಸರ್ಕಾರಿ, ಸಹಕಾರಿ, ಅಲಂಕಾರ ಮಳಿಗೆ, ಸೆಲೂನ್, ಎಲೆಕ್ಟ್ರಾನಿಕ್ ಮಳಿಗೆ, ಕಚೇರಿಗಳು, ಬಟ್ಟೆ ಅಂಗಡಿ, ಬೇಕರಿ, ಹೋಟೆಲ್, ಬ್ಯಾಂಕ್, ಪಾನಿಪೂರಿ, ಲಾಡ್ಜ್, ಹೋಂಸ್ಟೇ, ಜೌಷಧಿ, ಬೀಡಾ ಸ್ಟಾಲ್, ವರ್ಕ್ಶಾಪ್, ಸ್ಟುಡಿಯೋ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದೆ.ಈ ಎಲ್ಲಾ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಕಟ್ಟು ನಿಟ್ಟಾಗಿ ಸಮಯ ಪಾಲನೆ ಮಾಡುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಲಂಕಾರ ಸಮಿತಿಯ ಗೌರವ ಸಲಹೆಗಾರ ಪಿ.ಜೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೋಚನ ಎಂ.ಚೇತನ್, ಖಜಾಂಚಿ ರಫೀಕ್(ದಾದ), ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್ ಹಾಗೂ ಸಂಚಾಲಕ ಖಲೀಲ್ ಬಾಷ ಉಪಸ್ಥಿತರಿದ್ದರು.









