
ಮಡಿಕೇರಿ ಅ.8 NEWS DESK : ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಚೆಪ್ಪುಡಿರ ಅರುಣ್ ಮಾಚಯ್ಯ ಅವರನ್ನು ಕಾಂಗ್ರೆಸ್ ಮುಖಂಡ ಅಪ್ರು ರವೀಂದ್ರ ಹಾಗೂ ಬೆಂಬಲಿಗರು ಸನ್ಮಾನಿಸಿ ಗೌರವಿಸಿದರು. ಅರುಣ್ ಮಾಚಯ್ಯ ಅವರ ಸ್ವಗೃಹಕ್ಕೆ ಭೇಟಿ ನೀಡಿದ ಅಪ್ರು ರವೀಂದ್ರ ನೇತೃತ್ವದ ನಿಯೋಗ ಆತ್ಮೀಯವಾಗಿ ಸನ್ಮಾನಿಸಿ ಮುಂದಿನ ಸಾರ್ವಜನಿಕ ಜೀವನ ಮತ್ತಷ್ಟು ಯಶಸ್ಸಿನತ್ತ ಸಾಗಲಿ ಎಂದು ಶುಭ ಹಾರೈಸಿತು. ವಿನೋದ್ ಪೂಜಾರಿ, ಅರುಣ, ಸುಜಾತ, ವಿನೋದ್ ಬಿ.ಎಂ, ಪರಿಚನ ಪ್ರಬಿ, ಪರಿಚನ ಮಹೇಶ್, ಅಕ್ಷಿತ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.









