ಸುಂಟಿಕೊಪ್ಪ NEWS DESK ನ.17 : ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳ ಆಯ್ಕೆಗೆ ಕೂಡ ಮೀಸಲಾಯಿತಿಯನ್ನು ಅಳವಡಿಸಿದಲ್ಲಿ ಅದು ಸಹಕಾರ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಸಹಕಾರಿ ಕ್ಷೇತ್ರ ಕುಂಠಿತಗೊಳ್ಳಲು ಕಾರಣವಾಗುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ.ಪಿ.ಬಾಂಡ್ ಗಣಪತಿ ಹೇಳಿದ್ದಾರೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯು ಸುಂಟಿಕೊಪ್ಪದ ಮಂಜುನಾಥಯ್ಯ ಸಹಕಾರ ಭವನದಲ್ಲಿ ಭಾನುವಾರದಂದು ನಡೆಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ ಸಹಕಾರ ಇಲಾಖೆ ಕೊಡಗು ಜಿಲ್ಲೆ ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಮತ್ತು ಸುಂಟಿಕೊಪ್ಪ ಮಹಿಳಾ ಸಹಕಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಸಹಕಾರ ಕ್ಷೇತ್ರ ಏಕಸೇವಾ ಕ್ಷೇತ್ರವಾಗಿ ಉಳಿಯದೆ ಬಹುಸೇವಾ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದರು. ಸಹಕಾರ ಕ್ಷೇತ್ರದ ಮಹತ್ವವನ್ನು ಆರಿತ ಕೇಂದ್ರ ಸರಕಾರ ನೂತನ ಸಹಕಾರ ಸಚಿವಾಲಯ ಪ್ರಾರಂಭಿಸಿದ ಮೇಲೆ ಏಕರೂಪದ ಗಣಕಿಕರಣದ ವ್ಯವಸ್ಥೆಯಿಂದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲಾಗುತ್ತಿದೆ. ವಿಶೇಷವಾಗಿ ಆಹಾರ ಜನಜೌಷಧ ಪಟ್ರೋಲ್ಪಂಪ್ ಅಡುಗೆ ಅನಿಲದ ವಿತರಣಾ ವ್ಯವಸ್ಥೆ ನಿರ್ಮಾಣದ ವ್ಯವಸ್ಥೆಯಲ್ಲಿಯೂ ಕೂಡ ಸಹಕಾರ ಸಚಿವಾಲಯ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗುಜರಾತ್ ,ಮಹಾರಾಷ್ಟç ಮತ್ತು ಕರ್ನಾಟಕಗಳಲ್ಲಿ ಪ್ರಯೋಗಿಕವಾಗಿ ಏಕರೂಪದ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಸೂಚಿಸಿದೆ ಆದರೆ ಕರ್ನಾಟಕದಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ 31-03-2024 ಅಂತಿಮ ಗಡವು ಎಂದು ಇದ್ದನ್ನು 31-03-2026 ಕ್ಕೆ ಮುಂದೂಡಲಾಗಿದೆ. ಅತ್ಯುತ್ತಮವಾಗಿರುವ ಕರ್ನಾಟಕ ಸಹಕಾರ ಕ್ಷೇತ್ರದ ಕಾಯ್ದೆಯನ್ನು ಚರ್ಚೆ ಇಲ್ಲದೆ ಪರವಿರೋಧ ಲೆಕ್ಕಿಸದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಷಾಧಿಸಿದ ಅವರು ಕರ್ನಾಟಕದಲ್ಲಿ ಕೊಡಗು ದಕ್ಷಿಣ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕೊಡಗಿನಲ್ಲಿ ಶೇ.60 ಪ್ರಾಥಮಿಕ ಕೃಷಿಪತ್ತಿನ ಸಂಘಗಳು ರೂ. 600 ಕೋಟಿಯವರೆಗೂ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯವೆಂದರು. ತಾವು ಪ್ರತಿನಿಧಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಗ್ಗೆ ಹೇಳಿದ ಅವರು ರೂ 10 ಲಕ್ಷ ಠೇವಣಿ ಮತ್ತು ರೂ. 4.25 ಕೋಟಿ ವಹಿವಾಟಿನಿಂದ ಈ ಸಾಲಿನಲ್ಲಿ ರೂ.232 ಕೋಟಿ ವ್ಯವಹಾರ ಮಾಡಿದನ್ನು ಉಲ್ಲೇಖೀಸಿದರು. ಸಮಾರಂಭವನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಸಹಕಾರ ಕ್ಷೇತ್ರ ಕೂಡ ರಾಜ್ಯ ಮತ್ತು ದೇಶಕ್ಕೆ ಕ್ರೀಡೆ ಹಾಗೂ ಸೇನೆಗೆ ನೀಡಿರುವ ಮಹತ್ತರ ಕೊಡುಗೆಯಾಷ್ಟೇ ಕೊಡುಗೆಯನ್ನು ನೀಡಿದೆ. ರಾಜ್ಯದಲ್ಲಿ ಮೊದಲ ಸಹಕಾರ ಸಂಘ ಗದಗ್ನಲ್ಲಿ 22-05-1905 ರಂದು ಅಸ್ತಿತ್ವಕ್ಕೆ ಬಂದ 15 ದಿನಗಳಲ್ಲಿ ಸೋಮವಾರಪೇಟೆ ತಾಲೂಕಿನ ತಲ್ತಾರೆಶೆಟ್ಟಳ್ಳಿಯಲ್ಲಿ ಕೆ.ದೊಡ್ಡಯ್ಯ ಮತ್ತು ಅವರ ತಂಡದಿಂದ ಅಸ್ವಿತ್ವಕ್ಕೆ ಬಂತು. ಆಗ ಹಣಕಾಸು ವ್ಯವಸ್ಥೆ ಇದ್ದರೂ ಸಹಕಾರ ಸಂಘಗಳು ವಸ್ತು ವಿನಿಮಯ ರೂಪದಲ್ಲಿ ಕಾರ್ಯ ನಿರ್ವಹಿಸಿ ಸಹಕಾಕ್ಷೇತ್ರವನ್ನು ಪ್ರಮಾಣಿಕತೆ ಪಾರದರ್ಶಕತೆಯಿಂದ ಕಟ್ಟಿದರು. ನಾವು ಯಾವ ಕ್ಷೇತ್ರವನ್ನು ಪ್ರತಿನಿಧಿಸುತ್ತೇವೆ ಯಾವ ಜವಾಬ್ಧಾರಿಯನ್ನು ಹೊಂದಿರುತ್ತೇವೆ ಅದರಲ್ಲಿ ಪ್ರಾಮಾಣಿಕತೆ ಪಾರದರ್ಶಕತೆಯನ್ನು ಹೊಂದಿ ವಿಷಯ ತಜ್ಞತೆಯನ್ನು ಹೊಂದಿ ನ್ಯಾಯ ಒದಗಿಸಬೇಕೆಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜೆರ್ಮಿಡಿಸೋಜ ವಹಿಸಿ ಮಾತನಾಡಿದರು. ದಿನದ ಮಹತ್ವದ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ.ಶಾಮಲ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸುಂಟಿಕೊಪ್ಪ ಮಹಿಳಾ ಸಂಘದ ಅಧ್ಯಕ್ಷೆ ಲೀಲಾಮೇದಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಪಟ್ಟೆಮನೆ ಗಿರಿಜ ಉದಯಕುಮಾರ್, ಅಪ್ಪಚಟ್ಟೊಳಂಡ ಸಾವಿತ್ರಿ ಕಾವೇರಪ್ಪ ಅತ್ತೂರು ನಲ್ಲೂರು ಗ್ರಾಮದ ಐ.ಎಸ್.ಬಾಲಕಿ ಉಲುಗುಲಿ ಗ್ರಾಮದ ಯಂಕನ ಎಂ.ಕರುಂಬಯ್ಯ, ಕಲ್ಲೂರಿನ ಕೆ.ಬಿ.ರಾಜಪ್ಪ, ಅಂದಗೋವೆ ಗ್ರಾಮದ ಚಿಕ್ಕಂಡ ಕೆ. ಸಾಬು ಉತ್ತಯ್ಯ ಅವರನ್ನು ಅತಿಥಿಗಳು ಸನ್ಮಾನಿಸಿದರು. ಸುಂಟಿಕೊಪ್ಪ ಪ್ರಾ.ಕೃ.ಪ.ಸ.ಸಂ. ಉಪಾಧ್ಯಕ್ಷ ಪಿ.ಪಿ.ಉದಯಕುಮಾರ್ ಪಾಲ್ಗೊಳ್ಳಲಿದ್ದು ಜಿಲ್ಲಾ ಸಹಕಾರ ಯೂನಿಯನ್ ಎಲ್ಲಾ ನಿರ್ದೇಶಕರುಗಳು ಮತ್ತು ಕೇಂದ್ರ ಸಹಕಾರ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು, ಕೊಡಗು ಜಿಲ್ಲೆಯ ಸಹಕಾರ ಸಂಘದ ಉಪ ನಿಬಂಧಕ ಹೆಚ್.ಡಿ.ಕುಮಾರ್ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮೊದಲಿಗೆ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ವ್ಯವಸ್ಥಾಪಕರಾದ ಆರ್.ಮಂಜುಳ ಪ್ರಾರ್ಥಿಸಿದರು. ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಾ.ಶಶಿಕಾಂತ್ ರೈ ಸ್ವಾಗತಿಸಿದರು, ಕೊಡಗು ಜಿಲ್ಲಾ ಸಹಕಾರಿ ಯೂನಿಯನ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಕುಶಾಲನಗರದ ಎ.ಪಿಎಂಎಸ್ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಎಂ.ಎಂ.ಕೊಮಾರಪ್ಪ, ನಿರ್ದೇಶಕರುಗಳಾಗಿ ಆಯ್ಕೆಗೊಂಡ ಎನ್.ಸಿ.ಕ್ಲೈವ ಪೊನ್ನಪ್ಪ, ಡಿ.ಕೆ.ಗಂಗಾಧರ, ಕೆ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.











