ಮಡಿಕೇರಿ ನ.24 NEWS DESK : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ದಾವಣಗೆರೆಯ ಚನ್ನಗಿರಿ ವಿರುಪಾಕ್ಷ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಯ್ಯನೆರವಂಡ ಪ್ರಿತುನ್ ಪೂವಣ್ಣ ಅವರಿಗೆ ಕರ್ನಾಟಕ ಸಿರಿಗನ್ನಡಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ನಾಲಡಿ ಕಕ್ಕಬ್ಬೆ ಗ್ರಾಮದ ಅಯ್ಯನೆರವಂಡ ಪ್ರಭಾ ಪೂವಯ್ಯ ದಂಪತಿಯ ಪುತ್ರ.











