

ಮಡಿಕೇರಿ ಜ.12 NEWS DESK : ದಕ್ಷಿಣ ಕನಾ೯ಟಕದ ದಕ್ಷಿಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿ೯ಗಳು ಸೈನಿಕಶಾಲೆಗೆ ಸೇಪ೯ಡೆಯಾಗಲು ಈ ವ್ಯಾಪ್ತಿಯಲ್ಲಿ ಪರೀಕ್ಷಾ ಮಾಗ೯ದಶಿ೯ ಶಿಬಿರಗಳು ಹೆಚ್ಚಾಗಗಬೇಕೆಂದು ಸರಗೂರು ವಿನಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಹಾಯಕ ಮುಖ್ಯಕಾಯ೯ನಿವ೯ಹಣಾಧಿಕಾರಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ಮುಖ್ಯಸ್ಥ ಪ್ರವೀಣ್ ಕುಮಾರ್ ಎಸ್. ಅಭಿಪ್ರಾಯಪಟ್ಟಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸೈನಿಕ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರವೀಣ್ ಕುಮಾರ್ ಮಾತನಾಡಿದರು. ಸೈನಿಕ ಶಾಲೆಗೆ ಸೇಪ೯ಡೆಯಾಗಬೇಕೆಂಬುದು ಅನೇಕ ವಿದ್ಯಾಥಿ೯ಗಳು, ಪೋಷಕರ ಆಸೆಯಾಗಿರುತ್ತದೆ. ಆದರೆ ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷಾ ಮಾಗ೯ದಶ೯ನ ಮತ್ತು ತರಬೇತಿಯ ಕೊರತೆ ಈವರೆಗೂ ಕಾಡುತ್ತಿತ್ತು. ಸೈನಿಕಶಾಲೆಯ ಆಯ್ಕೆಗಾಗಿ ಬಹುಮುಖ್ಯವಾದ ಪರೀಕ್ಷೆಯ ಹಂತದಲ್ಲಿ ಬಹುತೇಕ ವಿದ್ಯಾಥಿ೯ಗಳು ಮಾಗ೯ದಶ೯ನದ ಕೊರತೆಯಿಂದ ಆಯ್ಕೆಯಾಗದೇ ಸೈನಿಕಶಾಲೆಗೆ ಸೇಪ೯ಡೆಯಾಗುವ ಕನಸು ನನಸಾಗದೇ ನಿರಾಶರಾಗುತ್ತಿದ್ದರು. ಇದನ್ನು ಗಮನಿಸಿಯೇ ಸರಗೂರಿನಲ್ಲಿ ಕಳೆದ ವಷ೯ಗಳಿಂದ ಕಾಯಾ೯ಚರಿಸುತ್ತಿರುವ ವಿವೇಕಾನಂದಯೂತ್ ಮೂವ್ ಮೆಂಟ್ ಆಶ್ರಯದ ಸೈನಿಕಶಾಲೆ ವತಿಯಿಂದ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಡಿಕೇರಿಯಲ್ಲಿ ಪರೀಕ್ಷಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ವಿದ್ಯಾಥಿ೯ಗಳಿಗೆ ಅತ್ಯಂತ ಸೂಕ್ತವಾದ ಮಾಗ೯ದಶ೯ನ ದೊರಕಿದೆ ಎಂದು ಹೆಮ್ಮೆಯಿಂದ ನುಡಿದರು. ಕೇವಲ ವಿದ್ಯಾಥಿ೯ಗಳು ಮಾತ್ರ ಸೈನಿಕ ಶಾಲಾ ಸೇಪ೯ಡೆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಸಾಲದು, ಪೋಷಕರು ಕೂಡ ಮಕ್ಕಳಿಗೆ ಅಗತ್ಯ ಸಿದ್ದತಾ ಸಲಹೆ, ಮಾಗ೯ದಶ೯ನ ನೀಡಿ ಪ್ರೇರಣೆಯಾಗುವುದು ಮುಖ್ಯ ಎಂದೂ ಪ್ರವೀಣ್ ಕಿವಿ ಮಾತು ಹೇಳಿದರು. ಕೂಡಿಗೆ ಮತ್ತು ಸರಗೂರಿನಲ್ಲಿ ಕಾಯಾ೯ಚರಿಸುತ್ತಿರುವ ಸೈನಿಕಶಾಲೆಗಳಿಗೆ ಮುಂದಿನ ವಷ೯ಗಳಲ್ಲಿ ಕೊಡಗಿನಿಂದಲೂ ಹೆಚ್ಚಿನ ವಿದ್ಯಾಥಿ೯ಗಳು ಸೇಪ೯ಡೆಯಾಗುವುದು ಖಂಡಿತಾ ಎಂದೂ ಅವರು ಆಶಾಭಾವನೆ ವ್ಯಕ್ತಪಡಿಸಿದರು. ಶಿಬಿರದ ಸಂಚಾರಕ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿದೇ೯ಶಕ ಡಾ.ಸಿ.ಆರ್. ಪ್ರಶಾಂತ್ ಮಾತನಾಡಿ, ಪೋಷಕರು ಕೂಡ ಅತ್ಯಂತ ಉತ್ಸುಕತೆಯಿಂದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಈ ರೀತಿ ಪೋಷಕರೂ ಸೈನಿಕಶಾಲೆಗೆ ತಮ್ಮ ಮಕ್ಕಳು ಸೇರಬೇಕೆಂಬ ಗುರಿ ಹೊಂದಿದಾಗ ಅಂಥ ವಿದ್ಯಾಥಿ೯, ಪೋಷಕರ ಉದ್ದೇಶ ಈಡೇರಲು ಸುಲಭಸಾಧ್ಯ ಎಂದರಲ್ಲದೇ, ಪ್ರತೀ ವಷ೯ವೂ ಈ ಶಿಬಿರವನ್ನು ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮಡಿಕೇರಿಯಲ್ಲಿ ಆಯೋಜಿಸಲಿದೆ ಎಂದು ಘೋಷಿಸಿದರು. ಪೋಷಕರ ಪರವಾಗಿ ಮಾತನಾಡಿದ ವಿರಾಜಪೇಟೆಯ ಎಂ.ಪಿ.ದೇಚಕ್ಕ, ಅತ್ಯುತ್ತಮ ಮಾಹಿತಿಯನ್ನು ಮಕ್ಕಳಿಗೆ ಶಿಬಿರ ನೀಡಿದೆ. ಸೈನಿಕಶಾಲಾ ಪರೀಕ್ಷೆಗೆ ಮಾನಸಿಕವಾಗಿ, ದೈಹಿಕವಾಗಿ ತಯಾರಾಗುವುದು ಹೇಗೆ ಎಂದು ಪರಿಪೂಣ೯ ಮಾಹಿತಿ ದೊರಕಿದಂತಾಗಿದೆ ಎಂದರು. ಪೋಷಕರಾದ ಚೆಟ್ಟಳ್ಳಿಯ ಕೆಚ್ಚೆಟೀರ ಶಿಲ್ಪ ಮುತ್ತಮ್ಮ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ಆಯೋಜಿತ ಶಿಬಿರದಲ್ಲಿ, ಸರಳ ರೀತಿಯಲ್ಲಿ ಪರೀಕ್ಷಾ ಸಿದ್ದತೆ ಕುರಿತಂತೆ ಮಕ್ಕಳು ತಿಳಿದುಕೊಂಡರು ಎಂದು ಶ್ಲಾಘಿಸಿದರು. ಚೇರಂಬಾಣೆಯ ಶಾಂಭವಿ ಪ್ರತಿಕ್ರಿಯಿಸಿ, ಉಚಿತವಾಗಿ ಈ ಶಿವಿರ ಆಯೋಜಿಸಿದ್ದು ಸಹಕಾರಿಯಾಗಿದೆ. ವಿದ್ಯಾಥಿ೯ಗಳಿಗೆ ಪ್ರೇರಣಾದಾಯಕವಾದ ರೀತಿಯಲಲಿ ತರಬೇತಿ ಪರಿಣಿತರಿಂದ ದೊರಕಿತು ಎಂದರು. ಪೋಷಕರಾದ ಸಿದ್ದಾಪುರದ ಭವಾನಿ ಮಾತನಾಡಿ, ಕೊಡಗಿನ ವಿದ್ಯಾಥಿ೯ಗಳಿಗೆ ಅತ್ಯಂತ ಅಗತ್ಯವಾಗಿದ್ದ ಇಂಥ ಶಿಬಿರ ಆಯೋಜಿಸಿ ಮಕ್ಕಳಿಗೆ ಸೈನಿಕಶಾಲೆಯ ಸೇಪ೯ಡೆಯನ್ನು ಸುಲಭಸಾಧ್ಯವಾಗಿಸಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರಾರಂಭಿಕ ವಷ೯ದಲ್ಲಿ 15 ವಿದ್ಯಾಥಿ೯ಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಮುಂದಿನ ವಷ೯ಗಳಲ್ಲಿ ಈ ವಿದ್ಯಾಥಿ೯ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದರು. ಸರಗೂರು ಸೈನಿಕಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಿವೖತ್ತ ಏರ್ ಕಮೋಡೋರ್ ಆರ್ ಎನ್. .ಜಯಸಿಂಹ, ಮೈಸೂರಿನ ಸ್ಟೇಲ್ಲರೀಸ್ ಟೆಕ್ನಾಲಜೀಸ್ ನ ವ್ಯವಸ್ಥಾಪಕ ನಿದೇ೯ಶಕ ಕುನಾಲ್ ಕಡ್ತಾರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ವಂದಿಸಿದರು. ಇದೇ ಸಂದಭ೯ ಶಿಬಿರಾಥಿ೯ಗಳಿಗೆ 10 ಬಾನುವಾರ ಪರೀಕ್ಷಾ ತರಬೇತಿ ನೀಡಿದ ಶಿಕ್ಷಕ ವಗ೯ದವರನ್ನು ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಬಿ.ಜಿ. ಅನಂತಶಯನ, ಅಂಬೆಕಲ್ ಜೀವನ್, ಅನಿಲ್ ಹೆಚ್.ಟಿ. ಬಿ.ಕೆ. ರವೀಂದ್ರ ರೈ, ಪ್ರಮೋದ್ ಕಮಾರ್ ರೈ, ರಾಜೇಶ್ ಪಿ.ಆರ್. ಶಂಕರ್ ಪೂಜಾರಿ, ಜಂಯತ್ ಪೂಜಾರಿ, ಪಿ.ವಿ. ಅಶೋಕ್, ಶ್ರೀಹರಿರಾವ್, ಪ್ರಕಾಶ್ ಪೂವಯ್ಯ, ಗಾನಾ ಪ್ರಶಾಂತ್, ನಮಿತಾ ರೈ, ಶಫಾಲಿ ರೈ ಹಾಜರಿದ್ದರು.









