Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿಮಾನ ಪ್ರಯಾಣಿಕರೇ ಗಮನಿಸಿ: ಟಿಕೆಟ್ ರದ್ದು ಮಾಡಿದರೆ ಪೂರ್ಣ ಹಣ ವಾಪಸ್; ಜಾರಿಗೆ ಬಂತು ಹೊಸ ನಿಯಮ!*
  • *ಬೃಹತ್ ನೇಮಕಾತಿ ಪರ್ವ: 56,000 ಪೋಸ್ಟ್‌ಗಳಿಗೆ ಸಂಪುಟ ಅಸ್ತು; ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ!*
  • *ಪೆರಾಜೆ : ಕುಂದಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ*
  • *ವಿರಾಜಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*
  • *ಗೋಣಿಕೊಪ್ಪ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿಂದ ವೃದ್ಧಾಶ್ರಮಕ್ಕೆ ಭೇಟಿ*
  • *ಕಡಗದಾಳು : ಮಾ.1 ರಂದು ಹಿಂದೂ ಸಂಗಮ ಕಾರ್ಯಕ್ರಮ*
  • *ಅಗತ್ಯ ಔಷಧಿಯೂ ಇಲ್ಲ ವೈದ್ಯರುಗಳು ಇಲ್ಲ*
  • *ಮಾ.11 ರಿಂದ ಸರ್ಕಾರಿ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ*
  • *ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*
  • *ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಆರಂಭ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home»ಇತ್ತೀಚಿನ ಸುದ್ದಿಗಳು»*ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ವಿಶೇಷ ಕಾರ್ಯಕ್ರಮ : ಸಹಕಾರ ಸಂಘಗಳಲ್ಲಿ ಆಡಿಟಿಂಗ್ ಕಡ್ಡಾಯ : ಆಡಳಿತ ಪಾರದರ್ಶಕವಾಗಿರಬೇಕು : ಕೆ.ಪಿ.ಗಣಪತಿ ಸಲಹೆ*
ಇತ್ತೀಚಿನ ಸುದ್ದಿಗಳು

*ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ವಿಶೇಷ ಕಾರ್ಯಕ್ರಮ : ಸಹಕಾರ ಸಂಘಗಳಲ್ಲಿ ಆಡಿಟಿಂಗ್ ಕಡ್ಡಾಯ : ಆಡಳಿತ ಪಾರದರ್ಶಕವಾಗಿರಬೇಕು : ಕೆ.ಪಿ.ಗಣಪತಿ ಸಲಹೆ*

February 26, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ NEWS DESK ಫೆ.26 : ಸಹಕಾರ ಸಂಘಗಳು ಪ್ರತಿವರ್ಷ ಕಡ್ಡಾಯವಾಗಿ ಆಡಿಟಿಂಗ್ ಮಾಡಿಸುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಕೆ.ಪಿ.ಗಣಪತಿ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಆದಾಯ ತೆರಿಗೆ, ಜಿಎಸ್‌ಟಿ ಮಾಹಿತಿ ಹಾಗೂ ಪದಾಧಿಕಾರಿಗಳ ಕರ್ತವ್ಯ, ಜವಾಬ್ದಾರಿ ಕುರಿತು ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಕೊಡಗು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ 115 ವರ್ಷಗಳ ಇತಿಹಾಸವಿದೆ. ಉತ್ತಮ ಸಹಕಾರಿ ಸಂಘಗಳಿರುವ ಹೆಗ್ಗಳಿಕೆಯನ್ನು ಹೊಂದಿರುವ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಮತ್ತು ಮಾದರಿ ಎನಿಸಿದೆ. ಈ ಖ್ಯಾತಿ ಹೀಗೆ ಮುಂದುವರಿಯಬೇಕಾದರೆ ಪಾರದರ್ಶಕ ಆಡಳಿತ ನಡೆಸುವುದು ಮುಖ್ಯ ಎಂದರು. ಜಿಲ್ಲೆಯಲ್ಲಿರುವ ಒಟ್ಟು ಸಹಕಾರಿ ಸಂಘಗಳಲ್ಲಿ 103 ಮಾತ್ರ ಲಾಭದಲ್ಲಿದ್ದು, ಉಳಿದವು ನಷ್ಟದಲ್ಲಿವೆ. ಈ ಹಿಂದೆ ಇದ್ದ 115 ದವಸ ಭಂಡಾರಗಳಲ್ಲಿ ಪ್ರಸ್ತುತ 76 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಲವು ಸಹಕಾರ ಸಂಘಗಳು ಮತ್ತು ದವಸ ಭಂಡಾರಗಳು ಆಡಿಟ್ ವರದಿ ನೀಡುವಲ್ಲಿ ವಿಫಲವಾಗಿವೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಡಗಿನ ಸಹಕಾರಿ ರಂಗಕ್ಕೆ ಕೆಟ್ಟ ಹೆಸರು ಬರಬಹುದು, ಹಿರಿಯರ ಶ್ರಮಕ್ಕೆ ಕುಂದು ಬರಬಹುದು ಎಂದು ಕೆ.ಪಿ.ಗಣಪತಿ ಆತಂಕ ವ್ಯಕ್ತಪಡಿಸಿದರು. ಆಡಿಟ್ ವರದಿ ನೀಡದ ಆಡಳಿತ ಮಂಡಳಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಮತ್ತು ಸಮರ್ಥ ಆಡಳಿತ ನೀಡಲಾಗದೆ ಅಸಹಾಯಕರಾಗುವವರು ಸಹಕಾರಿ ರಂಗದಲ್ಲಿ ಇರಬಾರದು. ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ಕಾಲ ಕಾಲಕ್ಕೆ ಬದಲಾಗುವ ಕಾಯ್ದೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿಯ ಮಾಹಿತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಮಾಹಿತಿಯ ಕೊರತೆ ಎದುರಾದರೆ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಲು ಮತ್ತು ಆಡಿಟ್ ವರದಿಯ ನ್ಯೂನತೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಟ್ಟಣ ಸಹಕಾರ ಸಂಘ, ದವಸ ಭಂಡಾರ ಸೇರಿದಂತೆ ಸಹಕಾರಿ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಹಕಾರಿ ಕಾಯ್ದೆ ಮತ್ತು ತೆರಿಗೆ ಪದ್ದತಿಯ ಕುರಿತು ಸಹಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ನಾವೇ ಹಿರಿಯರು ಅಥವಾ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಮೈಮರೆಯಬಾರದು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಬದಲಾಗುವ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಕಾಯ್ದೆಯ ಅರಿವು ಇಲ್ಲದಿದ್ದರೆ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದ್ದನ್ನೇ ಕೇಳಿಕೊಂಡು ಆಡಳಿತ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು. ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವಿರಾಜಪೇಟೆಯ ಹಿರಿಯ ಸಹಕಾರಿ ಬಿ.ಬಿ.ನಾಣಯ್ಯ ಮಾತನಾಡಿ ಸರ್ವ ಸಹಕಾರಿಗಳು ಒಗ್ಗೂಡಿ ಕೊಡಗಿನ ಸಹಕಾರಿ ರಂಗವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು. ಸಹಕಾರಿ ರಂಗದ ಮೂಲಕವೇ ಸಮಾಜ ಸೇವೆ ಸಲ್ಲಿಸುವಂತೆ ನನ್ನ ತಂದೆಯವರು ನೀಡಿದ ಮಾರ್ಗದರ್ಶನದಂತೆ ನಾನು ಇಲ್ಲಿಯವರೆಗೆ ಸೇವೆ ಸಲ್ಲಿಸಿದ್ದೇನೆ. ‘ಪರರಿಗೆ ನಾವು, ನಮಗೆ ಪರರು’ ಎಂಬ ಆದರ್ಶದಡಿ ಮುನ್ನಡೆಯುತ್ತಿದ್ದು, ಸಹಕಾರಿ ರಂಗ ಜನಸೇವೆಗೆ ಉತ್ತಮ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಸನ್ನದು ಲೆಕ್ಕಿಗ ಸಿ.ಎ.ಅನಿಲ್ ಭಾರದ್ವಾಜ್ ಅವರು ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆಯ ಕುರಿತು ವಿವರಿಸಿದರು. ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಉಪಾಧ್ಯಕ್ಷ ಉಪಾಧ್ಯಕ್ಷ ಹೆಚ್.ಕೆ.ಮಾದಪ್ಪ, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ನಿರ್ದೇಶಕರುಗಳಾದ ಕೆ.ಟಿ.ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಟಿ.ಸುಬ್ಬಯ್ಯ, ಎಂ.ಎ0.ಶ್ಯಾಮಲ, ಅಮೃತ್ ವಿ.ಸಿ, ಎಸ್.ಆರ್.ಸುನಿಲ್ ರಾವ್, ಹೆಚ್.ಎಂ.ರಮೇಶ್, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ.ರವಿಕುಮಾರ್, ಕೆಐಸಿಎಂ ನ ಪ್ರಾಂಶುಪಾಲರು ಮತ್ತು ಸಮನ್ವಯಾಧಿಕಾರಿ ಪುಟ್ಟಸ್ವಾಮಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. *ಪ್ರಶಸ್ತಿ ಪ್ರದಾನ* ಇದೇ ಸಂದರ್ಭ ವಿರಾಜಪೇಟೆಯ ಹಿರಿಯ ಸಹಕಾರಿ ಬಿ.ಬಿ.ನಾಣಯ್ಯ ಅವರಿಗೆ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

Share. Facebook Twitter Pinterest LinkedIn Tumblr Email WhatsApp
Previous Article*ವಿದ್ಯುತ್ ಕಡಿತ : ಸೆಸ್ಕ್ ಅಧಿಕಾರಿಗಳ ವಿರುದ್ಧ ಎಂ.ಕೆ.ಆಶಿಕ್ ಅಸಮಾಧಾನ : ಪ್ರತಿಭಟನೆಯ ಎಚ್ಚರಿಕೆ*
Next Article *ಡಿ. ಚೆನ್ನಮ್ಮ ಕಾಲೇಜಿನಲ್ಲಿ ವೖತ್ತಿ ಮಾಗ೯ದಶ೯ನ ಕಾಯಾ೯ಗಾರ*

Website design development company services in Mangalore

Forex Trading Teacher in India

Related Posts

*ವಿಮಾನ ಪ್ರಯಾಣಿಕರೇ ಗಮನಿಸಿ: ಟಿಕೆಟ್ ರದ್ದು ಮಾಡಿದರೆ ಪೂರ್ಣ ಹಣ ವಾಪಸ್; ಜಾರಿಗೆ ಬಂತು ಹೊಸ ನಿಯಮ!*

February 26, 2026

*ಬೃಹತ್ ನೇಮಕಾತಿ ಪರ್ವ: 56,000 ಪೋಸ್ಟ್‌ಗಳಿಗೆ ಸಂಪುಟ ಅಸ್ತು; ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ!*

February 26, 2026

*ಪೆರಾಜೆ : ಕುಂದಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ*

February 26, 2026

*ಬೃಹತ್ ನೇಮಕಾತಿ ಪರ್ವ: 56,000 ಪೋಸ್ಟ್‌ಗಳಿಗೆ ಸಂಪುಟ ಅಸ್ತು; ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ!*

February 26, 2026

ಬೆಂಗಳೂರು, ಫೆಬ್ರವರಿ 26, 2026: ರಾಜ್ಯದ ಉದ್ಯೋಗಾಕಾಂಕ್ಷಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಧಾರಾವಾಡದಲ್ಲಿ ನಡೆದ ಭಾರಿ ಪ್ರತಿಭಟನೆಯ…

*ಪೆರಾಜೆ : ಕುಂದಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ*

February 26, 2026

*ವಿರಾಜಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*

February 26, 2026

*ಗೋಣಿಕೊಪ್ಪ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿಂದ ವೃದ್ಧಾಶ್ರಮಕ್ಕೆ ಭೇಟಿ*

February 26, 2026

*ಕಡಗದಾಳು : ಮಾ.1 ರಂದು ಹಿಂದೂ ಸಂಗಮ ಕಾರ್ಯಕ್ರಮ*

February 26, 2026

*ಅಗತ್ಯ ಔಷಧಿಯೂ ಇಲ್ಲ ವೈದ್ಯರುಗಳು ಇಲ್ಲ*

February 26, 2026

*ಮಾ.11 ರಿಂದ ಸರ್ಕಾರಿ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ*

February 26, 2026

*ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*

February 26, 2026

*ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಆರಂಭ*

February 26, 2026

*ಬೆಂಗಳೂರಿನಲ್ಲಿ ಅಮೆಜಾನ್ ಬೃಹತ್ ಹೆಜ್ಜೆ: ಏಷ್ಯಾದಲ್ಲೇ 2ನೇ ಅತಿದೊಡ್ಡ ಕಚೇರಿ ಉದ್ಘಾಟನೆ; 7,000 ಮಂದಿಗೆ ಉದ್ಯೋಗಾವಕಾಶ!*

February 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.