
ಮಡಿಕೇರಿ NEWS DESK ಮಾ.9 : ವನ್ಯಜೀವಿಗಳ ಚಲನವಲನ ಮತ್ತು ವನ್ಯಜೀವಿಗಳ ದಾಳಿಯಿಂದ ಆಗುತ್ತಿರುವ ಕಷ್ಟನಷ್ಟದ ಕುರಿತು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೊಡಗು ಅರಣ್ಯ ವೃತ್ತದ ಮಡಿಕೇರಿಯಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇರುವ ಕಂಟ್ರೋಲ್ ಅಂಡ್ ಕಮಾಂಡ್ ರೂಮ್ ನಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ವನ್ಯಜೀವಿಗಳಿಂದಾಗುತ್ತಿರುವ ಬೆಳೆಹಾನಿಯ ಬಗ್ಗೆ ಆನ್ ಲೈನ್ ನಲ್ಲಿರುವ ಮಾಹಿತಿ ಮತ್ತು ವನ್ಯಜೀವಿಗಳ ಚಲನವಲನದ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡುವ ಕುರಿತು ಇರುವ ಅಪ್ಲಿಕೇಶನ್ ನ ವಿವರವನ್ನು ಅರಣ್ಯ ಅಧಿಕಾರಿಗಳು ಸಮಗ್ರವಾಗಿ ವಿವರಿಸಿದರು.









