ಪರಸ್ಪರ ಕಾರುಣ್ಯ ಸಹನೆ, ಮತ್ತು ಪ್ರೀತಿಯ ಸಂಕೇತವಾದ ಈದುಲ್ ಫಿತರ್ ಹಬ್ಬವು ವಿಶ್ವಾಸಿಗಳು ಸಂಭ್ರಮಿಸುವ ಕ್ಷಣವಾಗಿದೆ ..ಕಳೆದ
ಮೂವತ್ತು ದಿನಗಳಿಂದ ಹಸಿವು, ದಾಹದೊಂದಿಗೆ ವಿಶ್ವಾಸಿಗಳು ನಿರ್ವಹಿಸಿದ ಉಪವಾಸದಿಂದ ನಮ್ಮಲ್ಲಿರುವ ಎಲ್ಲಾ ರೀತಿಯ ಕೆಡುಕುಗಳನ್ನು ದೂರಿಕರಿಸುವುದರೊಂದಿಗೆ ನಮ್ಮನ್ನು ಒಳಿತಿನಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ
ಇಸ್ಲಾಮಿನ ಅತ್ಯುತ್ತಮ ಸಂದೇಶವನ್ನು ಸರ್ವರಿಗೂ ತಲುಪಿಸುವ ಹೊಣೆಗಾರಿಕೆಯು ಮುಸ್ಲಿಮರಿಗಿದೆ..ಇಂದು ಲೋಕಾದ್ಯಂತ ಜನಸಾಮಾನ್ಯರು ಯುಧ್ದದ ಪರಿಣಾಮದಿಂದ ನಲುತ್ತಿರುವುದು ದುಃಖಕರ ಸಂಗತಿ .ಯಾರದ್ದೋ ಸ್ವಾರ್ಥಕ್ಕಾಗಿ ಇನ್ಯಾರದ್ದೋ ಅಧಿಕಾರಕ್ಕಾಗಿ ಬಾಂಬುಗಳು ಮಿಸೈಲುಗಳಿಂದ ಮಕ್ಕಳು ಮಹಿಳೆಯರು ನಿರಪರಾಧಿಗಳ ಜೀವ ಬಲಿ ಪಡೆಯುತ್ತಿರುವುದು ಬಹು ದೊಡ್ಡ ದುರಂತ
ನೀವು ಭೂಮಿಯಲ್ಲಿರವವರ ಮೇಲೆ ಕರುಣೆ ತೋರಿದರೆ ಆಕಾಶದಲದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುತ್ತಾನೆ ಎಂದು ತಿಳಿಸಿದ ಪ್ರವಾದಿ (ಸ)ರವರ ಅನುಯಾಯಿಗಳು ಎಂದಿಗೂ ಹಿಂಸಾತ್ಮಕ ಕೃತ್ಯವನ್ನು ಮಾಡಲಾರರು.

ಪರಸ್ಪರ ಬಿಕ್ಕಟ್ಟು ಬಿನ್ನಾಭಿಪ್ರಾಯ, ಅನಕ್ಯತೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ಮುಸ್ಲಿಮರು ಬಳಲುತ್ತಿದ್ದಾರೆ , ಆದ್ದರಿಂದ ಪರಸ್ಪರ ,ಸಮಾಲೋಚನೆ , ಸಹಕಾರ ಮತ್ತು ಒಗ್ಗಟ್ಟಿಂನಿಂದ ಮುಂದೆ ಸಾಗಬೇಕಾಗಿದೆ ಎಂದು ಮಸ್ಜಿದ್ ಉರ್ ರಹ್ಮಾ ಧರ್ಮಗುರುಗಳಾದ ಉಮ್ಮರ್ ಮೌಲವಿಯವರು ಹೇಳಿದರು. ಈದುಲ್ ಫಿತರ್ ಅಂಗವಾಗಿ ಮಡಿಕೇರಿಯ ಕಾಲೇಜು ರಸ್ತೆಯ ಮಸೀದಿಯಲ್ಲಿ ಈದ್ ಬಮಾಝ್ ನಂತರ ,ವಿಶೇಷ ಉಪನ್ಯಾಸವನ್ನು ನೀಡಿದರು
ಈದ್ ಪ್ರಾರ್ಥನೆಯಲ್ಲಿ ಮಹಿಳೆಯರು ಪುಟ್ಟ ಮಕ್ಕಳು ಬಾಗ ಮವಹಿಸಿದ್ದರು ಪ್ರಮುಖರಾದ
ಅಧ್ಯಕ್ಷ ಮೊಹಮ್ಮದ್ ಹನೀಫ್ ತೌಸೀಫ್ ಮಡಿಕೇರಿ ಮೊಹಮ್ಮದ್ ಮುಸ್ತಫ ಮುನೀರ್ ಅಹಮದ್ ಕಾರ್ಯದರ್ಶಿ ಎಂ ಎ ಮುಸ್ತಫ ,ಇಬ್ರಾಹೀಮ್ ಮೈಸ್ ಪತ್ರಕರ್ತ ಅಬ್ದುಲ್ಲಾ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು
ಮಡಿಕೇರಿ ಬದ್ರಿಯಾ ಮಸೀದಿ ಭಟ್ಕಲ್ ಮಸೀದಿ, ಮಲಬಾರ್ ಹಾಗೂ ಸಲಫಿ ಮಸೀದಿಗಳಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.








