Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.6 ರ ಪಂದ್ಯಗಳು*
  • *ಗಾಂಧಿ ಭವನದಲ್ಲಿ ಡಾ. ಬಾಬು ಜಗಜೀವನ್‍ರಾಂ ಜಯಂತಿ ಮಡಿಕೇರಿಯಲ್ಲಿ‌ ಬಾಬೂಜಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಿ: ಡಾ.ಮಂತರ್ ಗೌಡ*
  • *ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*
  • *ಪಿಎಸ್‌ಐ ಆಗಿ ಕರಿಕೆಯ ನಿಧಿ ಗೌಡ ಮುರುಳ್ಯ ನೇಮಕ*
  • *ಕೊನೆಗೂ ಅರಣ್ಯದಲ್ಲಿ ಶರಣ್ಯ ಪತ್ತೆ : ಕುಡಿಯ ಸಮುದಾಯದ ಹರಕೆ ಫಲಿಸಿತು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.5 ರ ವಿಜೇತ ತಂಡಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು..*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು*
  • *ಗೋಪಾಲಪುರ ಶಿಲುಬೆ ಬೆಟ್ಟದಲ್ಲಿ ಗುಡ್ ಫ್ರೈಡೆ*
  • *ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ :  ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ* 
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*

ಏಪ್ರಿಲ್ 5, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಏ.5 : ಕೊಡಗಿನ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬದ 26ನೇ ವರ್ಷದ “ಚೇನಂಡ ಕಪ್ ಹಾಕಿ ಉತ್ಸವ”ಕ್ಕೆ ನಾಪೋಕ್ಲುವಿನಲ್ಲಿ ವರ್ಣರಂಜಿತ ಚಾಲನೆಯನ್ನು ನೀಡಲಾಯಿತು. ಕೊಡವ ಸಮುದಾಯದ ಒಟ್ಟು 383 ತಂಡಗಳ ನಡುವೆ 28 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಮೇ 2 ರಂದು ಅಂತಿಮ ಪಂದ್ಯವನ್ನು ಆಯೋಜಿಸಲಾಗಿದೆ. ಅತ್ಯಾಕರ್ಷಕವಾಗಿ ಸಜ್ಜುಗೊಂಡಿರುವ ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ “ಚೇನಂಡ ಕಪ್ ಹಾಕಿ ಉತ್ಸವ”ಕ್ಕೆ ಸಾಂಪ್ರದಾಯಿಕವಾಗಿ ಬೆಳ್ಳಿಯ ಚೆಂಡನ್ನು ಬೆಳ್ಳಿಯ ಸ್ಟಿಕ್‌ನಿಂದ ಹೊಡೆಯುವ ಮೂಲಕ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡoಡ ಬೋಪಣ್ಣ ಹಾಗೂ ಗಣ್ಯರು ವಿದ್ಯುಕ್ತ ಚಾಲನೆ ನೀಡಿದರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ದೇಶ ವಿದೇಶಗಳಲ್ಲಿ ಕೊಡವ ಕೌಟುಂಬಿಕ ಹಾಕಿ ಪ್ರಸಿದ್ಧಿಯನ್ನು ಪಡೆದಿದೆ, ಈ ಹಿಂದಿನ ಹಾಕಿ ಉತ್ಸವದ ಸಂದರ್ಭ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉತ್ಸವ ಸುಸೂತ್ರವಾಗಿ ನಡೆಯುವಂತಾಗಲೆAದು ಹಾರೈಸಿದರು.
ಕೊಡಗು ಜಿಲ್ಲೆ ಅದರಲ್ಲೂ ವಿಶೇಷವಾಗಿ ಕೊಡವ ಕುಟುಂಬದವರು ಸೇನೆ, ಕ್ರೀಡೆಯನ್ನು ಒಳಗೊಂಡoತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯ ಮೂಲಕ ತಮ್ಮ ಛಾಪನ್ನು ಮೂಡಿಸಿ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಈ ಕೌಟುಂಬಿಕ ಪಂದ್ಯಾವಳಿಯು ಜಗತ್ತಿಗೆ ಮತ್ತಷ್ಟು ಹಾಕಿ ಪ್ರತಿಭೆಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಚೇನಂಡ ಕುಟುಂಬದ ಪಟ್ಟೆದಾರರಾದ ಪೊನ್ನಪ್ಪ, ಚೇನಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷರಾದ ಚೇನಂಡ ಪಿ. ಕರುಂಬಯ್ಯ, ಕಾರ್ಯಧ್ಯಕ್ಷರಾದ ಡೀನಾ ಚೆಂಗಪ್ಪ, ವಕ್ತಾರ ಚೇನಂಡ ಸುರೇಶ್ ನಾಣಯ್ಯ, ಸದಸ್ಯರು, ನಿರ್ದೇಶಕರು ಹಾಗೂ ಆಡಳಿತ ಮಂಡಳಿ,ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡoಡ ಬೋಪಣ್ಣ, ಒಲಂಪಿಯನ್ ಪೂಣಚ್ಚ, ನಿರ್ದೇಶಕರಾದ ಕಲಿಯಂಡ ಸಂಪನ್ ಅಯ್ಯಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ಆಕರ್ಷಕ ಮೆರವಣಿಗೆ- ಸಾಂಪ್ರದಾಯಿಕ ಕುಪ್ಯಚಾಲೆ ತೊಟ್ಟ ಪುರುಷರು ಹಾಗೂ ಆಕರ್ಷಕ ಸಾಂಪ್ರದಾಯಿಕ ಸೀರೆಯನ್ನುಟ್ಟ ಮಹಿಳೆೆಯರು ಸೇರಿದಂತೆ, ಈ ಹಿಂದೆ ಕೊಡವ ಹಾಕಿ ಉತ್ಸವವನ್ನು ಆಯೋಜಿಸಿದ್ದ ಕುಟುಂಬಗಳ ಪ್ರಮುಖರು, ಕೊಡವ ಹಾಕಿ ಅಕಾಡೆಮಿಯ ಪ್ರಮುಖರು ಚೇನಂಡ ಹಾಕಿ ಉತ್ಸವದ ಧ್ವಜದೊಂದಿಗೆ, ಕೊಂಬ್ ಕೊಟ್ಟ್ ವಾಲಗದೊಂದಿಗೆ ನಾಪೋಕ್ಲುವಿನ ಪೊನ್ನಾಡ್ ಬಳಿಯಿಂದ ಚೆರಿಯಪರಂಬುವಿನ ಜ.ತಿಮ್ಮಯ್ಯ ಕ್ರೀಡಾಂಗಣದವರೆಗೆ ಅತ್ಯಾಕರ್ಷಕ ಮೆರವಣಿಗೆ ನಡೆಸಿ ಗಮನ ಸೆಳೆದರು.
ಹಿಂದಿನ ಉತ್ಸವ ಆಯೋಜಕರಿಗೆ ವಿಶೇಷ ಗೌರವ- ದಿ.ಪಾಂಡoಡ ಕುಟ್ಟಪ್ಪ ಅವರು 1997 ರಲ್ಲಿ ಪ್ರಥಮ ಬಾರಿಗೆ ಪಾಂಡoಡ ಕಪ್ ಹಾಕಿ ಉತ್ಸವನ್ನು ಆಯೋಜಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ವಿವಿಧ ಕೊಡವ ಕುಟುಂಬಗಳು ಹಾಕಿ ಉತ್ಸವದ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಹಾಕಿ ಹಬ್ಬವನ್ನು ಆಯೋಜಿಸಿವೆ. ಈ ಹಿನ್ನೆಲೆಯಲ್ಲಿ ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಈ ಹಿಂದೆ ಹಾಕಿ ಉತ್ಸವವನ್ನು ಆಯೋಜಿದ್ದ ಎಲ್ಲಾ ಕುಟುಂಬದ ಪ್ರಮುಖರನ್ನು ನಭಕ್ಕೆ ಗುಂಡಿಕ್ಕುವ ಮೂಲಕ ಗೌರವಿಸಿದ್ದು ವಿಶೇಷ.
ಪಾಂಡoಡ ಪುತ್ಥಳಿ ಅನಾವರಣ- ಕೊಡಗಿನ ಕೊಡವರ ಸಂಘಟನೆ, ಕ್ರೀಡಾ ಪ್ರತಿಭೆಗಳ ಉತ್ತೇಜನದ ಪ್ರಮುಖ ಉದ್ದೇಶದಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆರಂಭಿಸಿದ “ದಿ.ಪಾಂಡoಡ ಕುಟ್ಟಪ್ಪ” ಅವರ ಸ್ಮರಣೆಗಾಗಿ ಚೇನಂಡ ಕುಟುಂಬಸ್ಥರು ಕ್ರೀಡಾಂಗಣದ ಬಳಿಯಲ್ಲಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಪ್ರದರ್ಶನ ಪಂದ್ಯದ ಆಕರ್ಷಣೆ- ಅಧಿಕೃತ ಪಂದ್ಯಗಳ ಆರಂಭಕ್ಕೂ ಮುನ್ನ ನಡೆದ ಟೀಂ ಯುಎಇ ತಂಡ ಮತ್ತು ತಾಮನೆ ಇಲೆವೆನ್ ತಂಡಗಳ ನಡುವಿನ ಪಂದ್ಯ ಮತ್ತು ಬೆಂಗಳೂರು ಸಾಯಿ ಮತ್ತು ಎಂಇಜಿ ತಂಡಗಳ ನಡುವಿನ ಪ್ರದರ್ಶನ ಪಂದ್ಯ ಆಕರ್ಷಕವಾಗಿ ನಡೆಯುವ ಮೂಲಕ ಚೇನಂಡ ಕಪ್ ಹಾಕಿ ಉತ್ಸವದ ಆರಂಭಕ್ಕೆ ಮುನ್ನುಡಿಯನ್ನು ಬರೆಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.6 ರ ಪಂದ್ಯಗಳು*

ಏಪ್ರಿಲ್ 5, 2026

*ಗಾಂಧಿ ಭವನದಲ್ಲಿ ಡಾ. ಬಾಬು ಜಗಜೀವನ್‍ರಾಂ ಜಯಂತಿ ಮಡಿಕೇರಿಯಲ್ಲಿ‌ ಬಾಬೂಜಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಿ: ಡಾ.ಮಂತರ್ ಗೌಡ*

ಏಪ್ರಿಲ್ 5, 2026

*ಪಿಎಸ್‌ಐ ಆಗಿ ಕರಿಕೆಯ ನಿಧಿ ಗೌಡ ಮುರುಳ್ಯ ನೇಮಕ*

ಏಪ್ರಿಲ್ 5, 2026

*ಗಾಂಧಿ ಭವನದಲ್ಲಿ ಡಾ. ಬಾಬು ಜಗಜೀವನ್‍ರಾಂ ಜಯಂತಿ ಮಡಿಕೇರಿಯಲ್ಲಿ‌ ಬಾಬೂಜಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಿ: ಡಾ.ಮಂತರ್ ಗೌಡ*

ಏಪ್ರಿಲ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK  ಏ.05:- ರಾಷ್ಟ್ರದ‌ ಅಪರೂಪದ‌ ರಾಜಕೀಯ ಮುತ್ಸದ್ಧಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ…

*ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*

ಏಪ್ರಿಲ್ 5, 2026

*ಪಿಎಸ್‌ಐ ಆಗಿ ಕರಿಕೆಯ ನಿಧಿ ಗೌಡ ಮುರುಳ್ಯ ನೇಮಕ*

ಏಪ್ರಿಲ್ 5, 2026

*ಕೊನೆಗೂ ಅರಣ್ಯದಲ್ಲಿ ಶರಣ್ಯ ಪತ್ತೆ : ಕುಡಿಯ ಸಮುದಾಯದ ಹರಕೆ ಫಲಿಸಿತು*

ಏಪ್ರಿಲ್ 5, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.5 ರ ವಿಜೇತ ತಂಡಗಳು*

ಏಪ್ರಿಲ್ 5, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು..*

ಏಪ್ರಿಲ್ 4, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು*

ಏಪ್ರಿಲ್ 4, 2026

*ಗೋಪಾಲಪುರ ಶಿಲುಬೆ ಬೆಟ್ಟದಲ್ಲಿ ಗುಡ್ ಫ್ರೈಡೆ*

ಏಪ್ರಿಲ್ 4, 2026

*ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ :  ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ* 

ಏಪ್ರಿಲ್ 4, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.5ರ ಪಂದ್ಯಗಳು*

ಏಪ್ರಿಲ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.