ವಿರಾಜಪೇಟೆ,NEWS DESK ಆ.25:ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ 18ನೇ ವರ್ಷದ ‘ಓಣಂ ಆಚರಣೆ’ಯನ್ನು ಸೆಪ್ಟೆಂಬರ್ 06 ರ ಭಾನುವಾರದಂದು ಚೈತನ್ಯ ಮಠಪುರ ಶ್ರೀ ಮುತ್ತಪ್ಪ ಕಲಾಮಂಟಪದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅಧ್ಯಕ್ಷ ಸುಮೇಶ್ ಅವರು, ಸೆ. 6ರಂದು ಬೆಳಿಗ್ಗೆ 08:30 ಗಂಟೆಗೆ ಮಹಾಬಲಿಯನ್ನು ಬರಮಾಡಿಕೊಂಡು, ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಬಳಿಕ ಮಹಾಬಲಿಯ (ಮಾವೇಲಿ) ಮೆರವಣಿಗೆ ಬೆಳಿಗ್ಗೆ 09:30ಕ್ಕೆ ಶ್ರೀ ಮುತ್ತಪ್ಪ ದೇವಾಲಯದಿಂದ ಪ್ರಾರಂಭವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಾದ್ಯಘೋಷಗಳೊಂದಿಗೆ ವೈಭವದ ಮೆರವಣಿಗೆ ಸಾಗಲಿದೆ.
ಇದೇ ವೇಳೆ ಹೂವಿನ ರಂಗೋಲಿ ಸ್ಪರ್ಧೆ ಪೂಕಳಂ’ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಂಪ್ರದಾಯಿಕ ಓಣಂ ಭೋಜನ (ಸದ್ಯ) ಉಣಬಡಿಸಲಾಗುತ್ತದೆ ಎಂದರು.
ಮಧ್ಯಾಹ್ನ 2 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ, ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷರಾದ ಪಿ.ಜಿ. ಸುಮೇಶ್, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರಾದ ವಿ.ಎಂ. ವಿಜಯನ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚೇರಿಯಪಂಡ ಸುರೇಶ್, ಎಸ್.ಎನ್.ಡಿ.ಪಿ ಶಾಖೆಯ ಅಧ್ಯಕ್ಷರಾದ ನಾರಾಯಣ ಟಿ.ಎ, ಪ್ರಾಂಶುಪಾಲರಾದ ಡಾ. ರಾಮಚಂದ್ರ, ಮಾಜಿ ಬ್ಯಾಂಕ್ ವ್ಯವಸ್ಥಾಪಕರಾದ ಅಮ್ಮಣಿಚಂಡ ಸಾಬು ಸುಬ್ಬಯ್ಯ ಹಾಗೂ ಲೇಖಕಿ ಕೃಪಾ ದೇವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 02:30ಕ್ಕೆ ‘ತಿರುವಾದಿರೆ’ನೃತ್ಯದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ಮಧ್ಯಾಹ್ನ 01ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ ಗಂಟೆಗೊಮ್ಮೆ ಉಚಿತ ಕೂಪನ್ ಡ್ರಾ ಹಾಗೂ ಸಂಜೆ 06 ಗಂಟೆಗೆ ಓಣಂ ಸಹಾಯಾರ್ಥ ಕೂಪನ್ ಡ್ರಾ ನೆರವೇರಲಿದೆ.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪುರುಷರು ಬಿಳಿ ಪಂಚೆ ಹಾಗೂ ಮಹಿಳೆಯರು ಸೆಟ್ ಸೀರೆಯನ್ನು ಧರಿಸಿ ಬೆಳಿಗ್ಗೆ 09:00 ಗಂಟೆಯೊಳಗೆ ತಲುಪುವಂತೆ, ಭಾಗವಹಿಸುವ ಎಲ್ಲರಿಗೂ ಗಡಿಯಾರ ಕಂಬದ ಬಳಿ ಉಚಿತ ಕೂಪನ್ ನೀಡಲಾಗುವುದು, ಅಲ್ಲದೆ ರಂಗೋಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಸುಮೇಶ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪಿ.ಜಿ. ಸುಮೇಶ್: 9035197151, ಸಿ.ಆರ್. ಬಾಬು: 9731258197, ಸಿ.ಆರ್. ಸಜೀವನ್: 9447211118, ಸತೀಶ್ ಎಂ.ಎಸ್: 9740013907 ಇವರನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ.
ಈ ಸಂದರ್ಭ ಸಮಾಜದ ಗೌರವಾಧ್ಯಕ್ಷರಾದ ಪದ್ಮನಾಭ ಟಿ.ಕೆ., ಸಲಹೆಗಾರರಾದ ಪಿ.ಜೆ. ವಿಶ್ವನಾಥ್, ಕಾರ್ಯದರ್ಶೀ ಸಿ.ಆರ್. ಬಾಬು, ಸಿ.ಆರ್. ಸಜೀವನ್, ಸತೀಶ್ ಎಂ.ಎಸ್ ಸೇರಿದಂತೆ ಇತರರು ಇದ್ದರು.








