Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*
  • *ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*
  • *ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*
  • *ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*
  • *ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*
  • *ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*
  • *ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*
  • *ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*
  • *”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*7ನೇ ಹೊಸಕೋಟೆಯಲ್ಲಿ ವಿಸ್ತಾರ ರೋಟರಿ ಸದಸ್ಯತ್ವ ಸಮ್ಮೇಳನ : ರೋಟರಿ ಸೇಪ೯ಡೆಯಾಗುವವರ ಸಂಖ್ಯೆ ಭಾರತದಲ್ಲಿಯೇ ಅಧಿಕ : ಡಾ.ದೀಪಕ್ ಪುರೋಹಿತ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*7ನೇ ಹೊಸಕೋಟೆಯಲ್ಲಿ ವಿಸ್ತಾರ ರೋಟರಿ ಸದಸ್ಯತ್ವ ಸಮ್ಮೇಳನ : ರೋಟರಿ ಸೇಪ೯ಡೆಯಾಗುವವರ ಸಂಖ್ಯೆ ಭಾರತದಲ್ಲಿಯೇ ಅಧಿಕ : ಡಾ.ದೀಪಕ್ ಪುರೋಹಿತ್*

ಆಗಷ್ಟ್ 12, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.12 NEWS DESK : ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯನ್ನು ಅನುಸರಿಸಿ ಮುನ್ನುಗ್ಗುತ್ತಿರುವ ರೋಟರಿ ಇದೇ ಕಾರಣದಿಂದಾಗಿಯೇ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ 119 ವಷ೯ಗಳಿಂದಲೂ ಮುನ್ನಡೆದಿದೆ ಎಂದು ಮುಂಬೈನ ರೋಟರಿ ಪ್ರಮುಖ, ಡಾ, ದೀಪಕ್ ಪುರೋಹಿತ್ ಹೇಳಿದ್ದಾರೆ. 7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚಚ್೯ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿಂದ ಆಯೋಜಿತ ರೋಟರಿ ಸದಸ್ಯತ್ನ ಮತ್ತು ಪಬ್ಲಿಕ್ ಇಮೇಜ್ ಸಮಾವೇಶವಾದ ವಿಸ್ತಾರ ಉದ್ಘಾಟಿಸಿ ಮಾತನಾಡಿದ ಡಾ, ದೀಪಕ್ ಪುರೋಹಿತ್, ರೋಟರಿಯಲ್ಲಿ ಪ್ರಸ್ತುತ 11,34 ಲಕ್ಷ ಸದಸ್ಯರು ವಿಶ್ವವ್ಯಾಪಿ ಇದ್ದಾರೆ, ಕಳೆದ ವಷ೯ದ ದುಲೈ ನಿಂದ ಈವರೆಗೂ 19,400 ಹೊಸ ಸದಸ್ಯರನ್ನು ರೋಟರಿ ಹೊಂದಿದೆ, 36,860 ರೋಟರಿ ಕ್ಲಬ್ ಗಳು ಜಗತ್ತಿನಲ್ಲಿವೆ, ರೋಟರಿ ಸದಸ್ಯರ ಪೈಕಿ ಶೇ.26 ರಷ್ಟು ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆಯಾಗಿದೆ ಎಂದರು ಮಾಹಿತಿ ನೀಡಿದರು. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಹೊಸಬ್ಬರು ರೋಟರಿ ಸದಸ್ಯರಾಗಿ ಸೇಪ೯ಡೆಯಾಗುತ್ತಿರುವುದು ಸೇವಾ ಕಾಯ೯ಗಳಿಗೆ ಭಾರತೀಯರು ನೀಡಿದ ಮನ್ನಣೆಗೆ ಸಾಕ್ಷಿಯಾಗಿದೆ ಎಂದರು. ಕೊಡಗನ್ನೊಳಗೊಂಡ ನಾಲ್ಕು ಕಂದಾಯ ಜಿಲ್ಲೆಗಳಿರುವ ರೋಟರಿ ಜಿಲ್ಲೆ 3181 ನಲ್ಲಿ ಈ ವಷ೯ 3550 ಸದಸ್ಯರಿದ್ದು ಕಳೆದ 1 ವಷ೯ದಲ್ಲಿ 100 ಹೊಸ ಸದಸ್ಯರ ಸೇಪ೯ಡೆಯಾಗಿದೆ ಎಂದೂ ದೀಪಕ್ ಪುರೋಹಿತ್ ಮಾಹಿತಿ ನೀಡಿದರು, ನೂತನವಾಗಿ ರೋಟರಿ ಸಂಸ್ಥೆಗಳಿಗೆ ಸೇರುವ ಸದಸ್ಯರಿಗೆ ಮತ್ತಷ್ಟು ಮಾಹಿತಯ ಅಗತ್ಯವಿದ್ದು, ಹೀಗಾದಾಗ ಶಾಶ್ವತವಾಗಿ ಅಂಥವರು ಸದಸ್ಯರಾಗಿ ಮುಂದುವರೆಯರು ಸಾಧ್ಯ ಎಂದೂ ದೀಪಕ್ ಸಲಹೆ ನೀಡಿದರು. ರೋಟರಿ ಮಾಜಿ ಗವನ೯ರ್ ಹೊಸಪೇಟೆಯ ಗೋಪಿನಾಥ್ ಮಾತನಾಡಿ, ರೋಟರಿಯಲ್ಲಿ ಜನಸೇವೆಗಾಗಿನ ಅತ್ಯುತ್ತಮ ಯೋಜನೆಗಳಿಗೆ ಎಂದಿಗೂ ಅನುದಾನದ ಕೊರತೆ ಭಾದಿಸದು, ಜಗತ್ತಿನ ಎಲ್ಲಿಂದಲೇ ಆದರೂ ಯೋಜನೆಗಳಿಗೆ ಹಣದ ನೆರವು ದೊರಕುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ರೋಟರಿ ಮಾಜಿ ಗವನ೯ರ್ ಚೆನ್ನೈನ ಮುನಿ ಗಿರೀಶ್ ಪಬ್ಲಿಕ್ ಇಮೇಜ್ ರೋಟರಿಗೆ ಅತ್ಯಂತ ಅಗತ್ಯವಾಗಿದ್ದು ಸಾಮಾಜಿಕ ಸೇವಾ ವಲಯದಲ್ಲಿ ರೋಟರಿ ಯೋಜನೆಗಳನ್ನು ಕೇಂದ್ರೀಕರಿಸಿ ವಿನೂತನ ಕಾಯ೯ಯೋಜನೆ ಜಾರಿಗೊಳಿಸಿದರೆ ಸಾವ೯ಜನಿಕರ ಪ್ರಶಂಸೆ ಖಂಡಿತಾ ಎಂದು ಕಿವಿಮಾತು ಹೇಳಿದರು. ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗೆ ಸೇರಲು ಸಮಯ ಇಲ್ಲ ಎಂಬುದು ಸರಿಯಾದ ವಾದ ಅಲ್ಲ ಸಮಾಜಸೇವೆ ಮಾಡಲು ಪ್ರತೀಯೋವ೯ರೂ ಸಮಯ ಮಾಡಿಕೊಂಡಲ್ಲಿ ಖಂಡಿತಾ ಅಂಥವರಿಗೆ ರೋಟರಿ ಸೂಕ್ತ ಅವಕಾಶ ನೀಡುತ್ತದೆ ಎಂದರು. ಇದೇ ಸಂದಭ೯ ರೋಟರಿ ಸದಸ್ಯತ್ವ ಕುರಿತ ಸಂವಾದದಲ್ಲಿ ರೋಟರಿ ಪ್ರಮುಖರಾದ ಅನಿಲ್ ಹೆಚ್.ಟಿ., ಬಿ.ಜಿ. ಅನಂತಶಯನ, ಡಾ. ಸಿಆರ್.ಪ್ರಶಾಂತ್, ರಾಘವೇಂದ್ರ, ಜಗದೀಶ್, ರಚನಾ ನಾಗೇಶ್, ಪಿ.ಆರ್. ಭಟ್ ಪಾಲ್ಗೊಂಡಿದ್ದರು. ರೋಟರಿ ಜಿಲ್ಲೆ 3181 ನ ಮಾಜಿ ಗವನ೯ರ್ ಗಳಾದ ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ರವೀಂದ್ರ ಭಟ್, ಡಾ.ನಾಗಾಜು೯ನ, ದೇವದಾಸ್ ರೈ, ಪ್ರಕಾಶ್ ಕಾರಂತ್, ಕೃಷ್ಣ, ಮುಂದಿನ ಸಾಲಿನ ಗವನ೯ರ್ ರಾಮಕೖಷ್ಣ, ನಿಯೋಜಿತ ಗವನ೯ರ್ ಸತೀಶ್ ಬೋಳಾರ್, ಕುಶಾಲನಗರ ರೋಟರಿ ಅಧ್ಯಕ್ಷ ಸಿ.ಬಿ.ಹರೀಶ್, ವಲಯ 6 ರ ಸಹಾಯಕ ಗವನ೯ರ್ ಡಾ, ಹರಿಶೆಟ್ಟಿ, ಸಮ್ಮೇಳನ ಸಮಿತಿ ಅಧ್ಯಕ್ಷ ಪಿ.ಆರ್.ನವೀನ್ ಸಮ್ಮೇಳನದ ವೇದಿಕೆಯಲ್ಲಿದ್ದರು. ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ ರೋಟರಿ ಸಂಸ್ಥೆಗಳ 450 ಕ್ಕೂ ಅಧಿಕ ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು, ಅತ್ಯಧಿಕ ಸದಸ್ಯರ ನೋಂದಣಿಗಾಗಿ ಮಡಿಕೇರಿಯ ರೋಟರಿ ವುಡ್ಸ್ ಮತ್ತು ಸೋಮವಾರಪೇಟೆ ರೋಟರಿ ಹಿಲ್ಸ್, ಕೊಡ್ಲಿಪೇಟೆ ರೋಟರಿ ಸಂಸ್ಥೆಗಳಿಗೆ ಪ್ರಶಂಸನ ಪತ್ರ ನೀಡಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ…

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*

ಮಾರ್ಚ್ 30, 2026

*ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*

ಮಾರ್ಚ್ 30, 2026

*ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*

ಮಾರ್ಚ್ 30, 2026

*ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*

ಮಾರ್ಚ್ 30, 2026

*ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*

ಮಾರ್ಚ್ 30, 2026

*ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*

ಮಾರ್ಚ್ 30, 2026

*”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*

ಮಾರ್ಚ್ 30, 2026

*ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”*

ಮಾರ್ಚ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.