

ಸಂಪಾಜೆ NEWS DESK ಜ.6 : ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಕಲೇರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಶ್ರದ್ಧಾಭಕ್ತಿಯಿಂದ ಜರುಗಿತು. ಗುಳಿಗ ದೈವದ ಕೋಲ, ಅಗ್ನಿ ಪ್ರವೇಶ, ಮಾರಿಕ್ಕಳ ಪ್ರವೇಶ, ಶ್ರೀ ರಕ್ತೇಶ್ವರಿ ಅಮ್ಮ, ಪಂಜುರ್ಲಿ, ಪಾಷಾಣ ಮೂರ್ತಿ ದೈವಗಳ ತಂಬಿಲ, ಹರಿಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಹೆಚ್ಚಿನ ಸಂಖ್ಯೆಯ ಭಕ್ತರು ಒತ್ತೆಕೋಲಕ್ಕೆ ಸಾಕ್ಷಿಯಾದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನೃತ್ಯ ವೈಭವ ಪ್ರೇಕ್ಷಕರನ್ನು ಆಕರ್ಷಿಸಿತು. ಚಿತ್ರ ವರದಿ : ಶರತ್ ಕೀಲಾರು, ಸಂಪಾಜೆ








