
ಸಿದ್ದಾಪುರ ಏ.18 NEWS DESK : ನೈಮ ಎಜುಕೇಶನಲ್ ಆಂಡ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೂರು ದಿನಗಳ ಉಚಿತ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ತರಗತಿಯನ್ನು ನೆಲ್ಲಿಹುದಿಕೇರಿ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ
ಮುಖ್ಯ ಅಥಿತಿಗಳಾಗಿ ಸಿವಿಲ್ ನ್ಯಾಯಾಧೀಶರು ಎ.ಎಸ್.ಸಲ್ಮಾ ಮತ್ತು ಜೆ ಎಂ ಎಪ್ ಸಿ ಆನೇಕಲ್ ಭಾಗವಹಿಸಿ ಮಾತನಾಡಿ,
ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ಉನ್ನತ ಶಿಕ್ಷಣದೊಂದಿಗೆ
ವಿದ್ಯಾರ್ಥಿಗಳು ಕಾನೂನು ಪದವಿಯನ್ನು ಪಡೆದುಕೊಳ್ಳಬೇಕು. ಕಾನೂನಿನ ತಿಳುವಳಿಕೆಯಿಂದ ಸಮಾಜದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶಗಳಿರುತ್ತವೆ. ಅದರಲ್ಲೂ ವಿದ್ಯಾರ್ಥಿನಿಯರು ಕಾನೂನು ಪದವಿ ಪಡೆಯುವ ಮೂಲಕ ಗೌರವಯುತ ಬದುಕು ಸಾಗಿಸಲು ಸಹಾಯವಾಗುತ್ತದೆ.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಕಡ್ಡಾಯವಾಗಿ ಶಾಲಾ ಕಾಲೇಜಿಗೆ ಬರುವುದರ ಮೂಲಕ ಮುಂದಿನ ಶಿಕ್ಷಣದ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ನಿವೃತ ಹಿರಿಯ ನ್ಯಾಯಾಧೀಶರಾದ ಎ.ಎ.ಶಫೀರ್ ಮಾತನಾಡಿ ಕಾನೂನು ವೃತ್ತಿಯಲ್ಲಿರುವ ವಿವಿಧ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿ ಶಿಕ್ಷಣದೊಂದಿಗೆ ಕಾನೂನು ಅರಿವಿನ ಮೂಲಕ ಮುನ್ನಡದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಇರುವ ವಿವಿಧ ಅವಕಾಶಗಳ ಕುರಿತು ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಾಕಿರ್ ವಿ ಎಂ ಅವರು ಮಾಹಿತಿ ನೀಡಿದರು. ನಾಲ್ಕು ದಿನಗಳ ಕಾಲ ನಡೆದ ಶೈಕ್ಷಣಿಕ ಬೆಳವಣಿಗೆಯ ಮಾಹಿತಿ ಕಾರ್ಯಗಾರದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಹ ಪ್ರಾಧ್ಯಾಪಕ ಡಾ. ಸತೀಶ್ ಶಿವಮಲ್ಲಯ್ಯ,ಪ್ರಖ್ಯಾತ ಮೋಟಿವೇಷನಲ್ ಸ್ಪೀಕರ್ ರಫೀಕ್ ಮಾಸ್ಟರ್ ಮಂಗಳೂರು,
ಎಂ ಕೆ ಎಂ ಸಿ ಕಾಲೇಜಿನ ಉಪನ್ಯಾಸಕ ಅರ್ಷಕ್ ಹಬೀಬ್, ಸಿಐಡಿ ಡಿಟೆಕ್ಟಿವ್ ಇನ್ಸ್ಪೆಕ್ಟರ್ ರಫೀಕ್ ಕುಪ್ಪಂಡಂಡ ಸೇರಿದಂತೆ ಗಣ್ಯ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ಹೋಟೆಲ್ ಮೇನೇಜೆಂಟ್ ಹೋಟೆಲ್ ನಿರ್ವಹಣೆ ಸೇರಿದಂತೆ ಪ್ರವಾಸೋದ್ಯಮ ಉದ್ಯಮದಲ್ಲಿರುವ ಅವಕಾಶಗಳು, ಕಾನೂನು ವೃತ್ತಿಯಲ್ಲಿ ತೊಡಗಿಸಿ ಕೊಳ್ಳುವುದರಿಂದ ಇರುವ ಪ್ರಯೋಜನಗಳು, ಕಾರ್ಯ ವಿಧಾನಗಳು ಮತ್ತು ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವುದು, ಪೊಲೀಸ್ ಇಲಾಖೆಗೆ ಸೇರಲು ಇರುವ ವಿವಿಧ ಮಾರ್ಗಗಳ ಕುರಿತು ಸಂಪೂರ್ಣ ಮಾರ್ಗದರ್ಶನ, ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, NEETಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನಾ ಮತ್ತು ಆಯ್ಕೆಗಳು, ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾಥಿಗಳಿಗೆ ಮಾರ್ಗದರ್ಶನ, ಇತರ ಸರ್ಕಾರಿ ಉದ್ಯೋಗಗಳಿಗೆ ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, SSLC ಮತ್ತು PUಅ ನಂತರ ಇರುವ ಇತರೆ ಪರ್ಯಾಯ ವೃತ್ತಿ ಮಾರ್ಗಗಳ ಮಾಹಿತಿ, ಪಬ್ಲಿಕ್ ಸ್ಪೀಚ್ ತರಬೇತಿ ಪರಿಣಾಮಕಾರಿ ಸಾರ್ವಜನಿಕ ಭಾಷಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರ ಕುರಿತು.
ವ್ಯಕ್ತಿತ್ವ ವಿಕಸನ ತರಗತಿಗಳು : ವ್ಯಕ್ತಿತ್ವ ಮತ್ತು ಸಾಫ್ಟ್ ಸ್ಕಿಲ್ ಹೆಚ್ಚಿಸುವುದರ ಕುರಿತು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಡಾ. ಅಂಬೇಡ್ಕರ್ ಜಯಂತಿಯನ್ನ ಆಚರಿಸಲಾಯಿತು.
ಈ ಸಂದರ್ಭ ನೈಮಾ ಸಂಘಟನೆಯ ಅಧ್ಯಕ್ಷ ಒ ಎಂ ನೌಶಾದ್, ಮಾಜಿ ಗ್ರಾ ಪಂ ಅಧ್ಯಕ್ಷ ಎ ಕೆ ಹಕೀಂ,ಸಹಾಯಕ ಪ್ರಾಧ್ಯಾಪಕ ಹೆಚ್ ನೌಶಾದ್, ಪಿಡಿಓ ಅಬ್ದುಲ್ಲಾ, ಪ್ರಮುಖರಾದ ಕೆ.ಎಂ ಬಷೀರ್, ಎ ಕೆ ಅಬ್ದುಲ್ಲ, ಸಿ ಎಂ ಹಂಸ, ಪಿ ಎ ಅಬ್ದುಲ್ಲ, ಪಿ ಹೆಚ್ ಅಪ್ಸಲ್, ಮುಸ್ತಾಫಾ ಪಿ ಕೆ, ಜಂಶೀರ್, ಕೆ ಎಂ ಮುಸ್ತಫಾ, ಮುತ್ತಲಿಬ್, ಫಾಝಿಲ್, ಲಿಮ್ರಾ,ಸಲೀಂ, ಆರಿಫ್, ಮೊಯ್ನುದ್ದೀನ್, ಶಮೀರ್, ಶಂಸುದ್ದೀನ್ ಸೇರಿದಂತೆ ಮತ್ತಿತರರು ಹಾಜರಿದ್ದರು.









