
ಮಡಿಕೇರಿ ಜೂ.14 NEWS DESK : 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಹೋಬಳಿ ಮಟ್ಟದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅತೀರಾ, ತುಂಗಾ-13901, ಆರ್ಎನ್ಆರ್-15048, ಇಂಟಾನ್, ಬಿ.ಆರ್-2655, ತನು ಮತ್ತು ಐ.ಆರ್-64 ಭತ್ತದ ಬಿತ್ತನೆ ಬೀಜಗಳು ಲಭ್ಯವಿರುತ್ತದೆ. ಬಿತ್ತನೆ ಬೀಜಗಳನ್ನು ಪಡೆದುಕೊಳ್ಳುವ ರೈತ ಫಲಾನುಭವಿಗಳು ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳೊಂದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸರ್ಕಾರ ನಿಗಧಿಪಡಿಸಿದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳುವಂತೆ ವಿರಾಜಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುವ ಭತ್ತದ ಬಿತ್ತನೆ ಬೀಜಗಳ ವಿವರ: ಅತೀರಾ ವಿರಾಜಪೇಟೆ 90, ಅಮ್ಮತ್ತಿ 35, ಬಾಳೆಲೆ 100 ಪೊನ್ನಂಪೇಟೆ 162.50, ಹುದಿಕೇರಿ 80, ಶ್ರೀಮಂಗಲ 90 ಒಟ್ಟು 557.50 ಕ್ವಿಂಟಾಲ್, ತುಂಗಾ-13901 ವಿರಾಜಪೇಟೆ 20, ಅಮ್ಮತ್ತಿ 20, ಬಾಳೆಲೆ 10, ಪೊನ್ನಂಪೇಟೆ 25, ಹುದಿಕೇರಿ 45, ಶ್ರೀಮಂಗಲ 60, ಒಟ್ಟು 180 ಕ್ವಿಂಟಾಲ್. ಆರ್ಎನ್ಆರ್-15048 ವಿರಾಜಪೇಟೆ 28, ಅಮ್ಮತ್ತಿ 28, ಪೊನ್ನಂಪೇಟೆ 20, ಹುದಿಕೇರಿ 30, ಶ್ರೀಮಂಗಲ 30 ಒಟ್ಟು 136 ಕ್ವಿಂಟಾಲ್, ಇಂಟಾನ್ ಪೊನ್ನಂಪೇಟೆ 10, ಹುದಿಕೇರಿ 10, ಶ್ರೀಮಂಗಲ 10 ಒಟ್ಟು 30 ಕ್ವಿಂಟಾಲ್, ಬಿ.ಆರ್-2655 ಪೊನ್ನಂಪೇಟೆ 10, ಹುದಿಕೇರಿ 5, ಶ್ರೀಮಂಗಲ 5 ಒಟ್ಟು 20 ಕ್ವಿಂಟಾಲ್, ತನು ವಿರಾಜಪೇಟೆ 5, ಅಮ್ಮತ್ತಿ 5, ಬಾಳೆಲೆ 5, ಹುದಿಕೇರಿ 5, ಶ್ರೀಮಂಗಲ 5 ಒಟ್ಟು 25 ಕ್ವಿಂಟಾಲ್ ಹಾಗೂ ಐಆರ್-64 ಬಾಳೆಲೆ 5 ಒಟ್ಟು 5 ಕ್ವಿಂಟಾಲ್, ಒಟ್ಟು 953.50 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜಗಳು ಇವೆ ಎಂದು ವಿರಾಜಪೇಟೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.









