



ಸೋಮವಾರಪೇಟೆ ಜೂ.20 NEWS DESK : ಪಟ್ಟಣದ ವಕ್ರ್ಸ್ಶಾಪ್ ಏರಿಯಾದಲ್ಲಿ ಪಂಚಾಯಿತಿ ಉದ್ದಿಮೆ ನಿಧಿಯಿಂದ 80ಲಕ್ಷ ರೂ.ಗಳ ವೆಚ್ಚದಲ್ಲಿ ಪೇ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಬಾಕಿಯಿದ್ದು, ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಜಯಂತಿ ಶಿವಕುಮಾರ್ ಹೇಳಿದರು. ಪ.ಪಂ.ಅಧ್ಯಕ್ಷರಾದ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಪಟ್ಟಣದ ಪೊಲೀಸರ ಠಾಣೆಯ ಕಾರ್ಯವೈಖರಿ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದಲ್ಲಿ ಪೊಲೀಸ್ ಠಾಣೆ ಇರುವುದರ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಸಂಶಯವಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರು ಬೇಸತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು. ಹಿಂದೆಲ್ಲಾ ಹೋಗಾಡ್ರ್ಸ್ಗಳು ಒಂದಷ್ಟು ಟ್ರಾಫಿಕ್ ಕಿರಿಯನ್ನು ಹೋಗಲಾಡಿಸಿದ್ದರು. ಈಗ ಠಾಣೆಯಲ್ಲಿ ಸಿಬ್ಬಂದಿಗಳ ಸಂಖ್ಯೆಯೂ ಹೆಚ್ಚಿದೆ. ಆದರೆ ಠಾಣೆ ಬಿಟ್ಟು ಹೊರಬರುತ್ತಿಲ್ಲ ಎಂದು ಬಿ.ಸಂಜೀವ ಹೇಳಿದರು. ಟ್ರಾಫಿಕ್ ಸಮಸ್ಯೆಗೆ ಪಂಚಾಯಿತಿ ಆಡಳಿತ ಮಂಡಳಿ ಕಾರಣ ಎಂದು ಚೇಂಬರ್ ಆಫ್ ಕಾಮರ್ಸ್ ಅವರು ಪಟ್ಟಣ ಬಂದ್ಗೆ ಕರೆ ನೀಡಲು ಚರ್ಚೆ ಮಾಡುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಎಸ್ಪಿ ಅವರು ಪಟ್ಟಣಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಬೇಕೆಂದು ಬಿ.ಸಿ.ವೆಂಕಟೇಶ್, ಶೀಲಾ ಡಿಸೋಜ ಮತ್ತಿತರ ಸದಸ್ಯರು ಆಗ್ರಹಿಸಿದರು. ಕೊಡಗು ಜಿಲ್ಲೆ ಸೇರಿದಂತೆ ಸೋಮವಾರಪೇಟೆ ತಾಲ್ಲೂಕಿನಲ್ಲೂ ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ದೊಡ್ಡಮಟ್ಟದ ಅನಾಹುತ ಸಂಭವಿಸಲೂ ಬಹುದು ಎಂದು ಎಂದು ಸದಸ್ಯ ಪಿ.ಕೆ.ಚಂದ್ರು ದೂರಿದರು.
ಸೋಮವಾರಪೇಟೆಯಲ್ಲಿ ಅಸ್ಸಾಮಿಗರ ಹಾವಳಿ :: ಎಲ್ಲಾ ಕಾಫಿ ತೋಟಗಳು ಅಂಗಡಿ, ಹೋಟೆಲ್, ವಸತಿ ಗೃಹಗಳು, ಹೋಂ ಸ್ಟೇಗಳಲ್ಲಿ ಹೊರರಾಜ್ಯದ ಕಾರ್ಮಿಕರು ತುಂಬಿದ್ದಾರೆ. ಈಗಾಗಲೇ ಖಾಸಗಿ ಕಟ್ಟಡದಲ್ಲಿ ಸೆಲೂನ್ ಪ್ರಾರಂಭಿಸಲು ಪಂಚಾಯಿತಿಗೆ ಎನ್ಒಸಿಗೆ ಅರ್ಜಿ ಸಲ್ಲಿದ್ದಾರೆ. ಪಂಚಾಯಿತಿ ಅಧಿಕಾರಿಗಳ ಎಚ್ಚರ ವಹಿಸಬೇಕು ಎಂದು ಸೂಚ್ಯವಾಗಿ ಹೇಳಿದರು. ಶನಿವಾರಸಂತೆ ವ್ಯಕ್ತಿಯೊಬ್ಬರು ಖಾಸಗಿ ಬಸ್ ನಿಲ್ದಾಣದ ಖಾಸಗಿ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಆಗ್ರಿಮೆಂಟ್ ಆಗಿದೆ. ಪಂಚಾಯಿತಿಗೆ ಎನ್ಒಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮುಖ್ಯಾಧಿಕಾರಿ ಸತೀಶ್ ಮಾಹಿತಿ ನೀಡಿದರು. ಹೊಟೇಲ್, ಹೋಸ್ಟೇಗಳ ಮಾಲೀಕರು, ಲೈನ್ಮನೆಗಳಲ್ಲಿ ಹೊರರಾಜ್ಯದ ಕಾರ್ಮಿಕರನ್ನು ಇಟ್ಟುಕೊಂಡಿರುವ ಮಾಲೀಕರ ಸಭೆ ಕರೆದು, ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಿವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಳ್ಳುವಂತೆ ಮೃತ್ಯುಂಜಯ ಹೇಳಿದರು. ಎಸ್ಪಿ ದೂರು ಸಲ್ಲಿಸುವಂತೆ ಸಭೆ ತೀರ್ಮಾನಿಸಿತು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್,ಮಹೇಶ್, ನಾಗರತ್ನ, ಶುಭಕರ್, ಎಚ್.ಎ.ನಾಗರಾಜ್, ಡಿ.ಯು.ಕಿರಣ್ ಇದ್ದರು.









