
ಮಡಿಕೇರಿ NEWS DESK ಮಾ.4 : ಮಡಿಕೇರಿ ಹಿಂದೂ ಮಲಯಾಳಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್.ರಮೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ನಾಯರ್ ಇ.ಬಿ, ಖಜಾಂಚಿಯಾಗಿ ದಿನೇಶ್ ಎಂ.ಎಸ್, ಉಪಾಧ್ಯಕ್ಷರಾಗಿ ಪ್ರಮೋದ್ ಟಿ.ಆರ್, ಗೌರವಾಧ್ಯಕ್ಷರಾಗಿ ಧರ್ಮೇಂದ್ರ ಕೆ.ವಿ, ಕಾರ್ಯದರ್ಶಿಯಾಗಿ ಸಂದೀಪ್ ಎಸ್., ಸಹ ಕಾರ್ಯದರ್ಶಿ ವಸಂತಕುಮಾರ್ (ಮನು), ಸಹ ಖಜಾಂಚಿ ಹರೀಶ್ ಸಿ.ಕೆ, ಸಂಘಟನಾ ಕಾರ್ಯದರ್ಶಿ ಮೋಹನ್ ಕೆ.ಕೆ, ಸಹ ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಸಿ.ಕೆ, ಕಚೇರಿ ಕಾರ್ಯದರ್ಶಿಯಾಗಿ ಶಿವನ್ ಕೆ.ಪಿ, ಪ್ರಚಾರ ಸಮಿತಿಗೆ ಸುಬ್ರಮಣಿ ಪಿ.ವಿ, ಗೋಪಿನಾಥ್ ಟಿ.ವಿ, ಮೀಡಿಯಾ ವಕ್ತಾರರಾಗಿ ಅಶೋಕ್ ಹೆಚ್.ಪಿ, ಯುವ ಘಟಕದ ಅಧ್ಯಕ್ಷರಾಗಿ ಅರವಿಂದ್ ಆರ್, ಉಪಾಧ್ಯಕ್ಷರಾಗಿ ಮುರಳಿ ಕೆ.ಆರ್, ಕಾರ್ಯದರ್ಶಿಯಾಗಿ ರದೀಶ್ ಕೆ.ಆರ್, ಶ್ರದ್ಧಾಂಜಲಿ ಸಮಿತಿ ಉಸ್ತುವಾರಿಗಳಾಗಿ ಪ್ರಕಾಶ್ (ಉಣ್ಣಿ), ವಿಜಯ್ ಕುಮಾರ್ ಪಿ, ರಮೇಶ್ ಎನ್, ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾಗಿ ರವಿ ಎಂ.ಪಿ, ಹರೀಶ್ ಕೆ.ಎ, ನಿರ್ದೇಶಕರುಗಳಾಗಿ ಅನಿಲ್ ಕೆ.ಕೆ, ಸುಕುಮಾರನ್ ನಾಯರ್, ವಿನೋದ್ ಕುಮಾರ್, ಆನಂದ್ ವಿ.ಜಿ, ಸುನಿಲ್ ಎನ್.ಸಿ, ರಾಜೇಶ್ ಎಸ್, ರವಿ ಅಪ್ಪುಕುಟ್ಟನ್, ಉತ್ತಮನ್ ಪಿ.ಟಿ, ಕಣ್ಣನ್ ಮೇಕೇರಿ, ಚಂದ್ರನ್, ಪ್ರಭಾಕರ್ ಟಿ.ಬಿ, ಹಿರಿಯ ಸಲಹೆಗಾರರಾಗಿ ವಾಸುದೇವ ಟಿ.ಆರ್, ಸುಧೀರ್ ಟಿ.ಕೆ, ಗೌರವ ಸಲಹೆಗಾರರಾಗಿ ಉಣ್ಣಿಕೃಷ್ಣನ್ ಪಿ.ಟಿ, ಕೆ.ವಿ.ಸುಬ್ರಮಣಿ, ಸಲಹೆಗಾರರಾಗಿ ಎನ್.ವಿ.ಉಣ್ಣಿಕೃಷ್ಣ, ಗಿರೀಶ್ ಆರಾಧನ, ಜಯನ್ ಭಾಗಮಂಡಲ, ಎ.ಎಂ.ಮೋಹನ್ ನಾಪೋಕ್ಲು ಹಾಗೂ ಟಿ.ಕೆ.ರಾಘವ(ರಘು)ನಾಪೋಕ್ಲು ಆಯ್ಕೆಯಾದರು.









