
ಕುಶಾಲನಗರ ಮಾ.26 NEWS DESK : ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದ ಮುನ್ನ ದಿನದಂದು ರಾಮಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಬ್ರಹ್ಮ ರಥೋತ್ಸವ ಅಂಗವಾಗಿ ಮೊದಲು ಸಂಧ್ಯಾಪೂಜೆ, ಕೂಡಿಗೆ, ಮತ್ತು ಶಿರಂಗಾಲ ಗ್ರಾಮಸ್ಥರಿಂದ ನಡೆದು ನಂತರ ಸಂಪ್ರದಾಯದಂತೆ ಶ್ರೀ ರಾಮ ಮತ್ತು ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ವೇ. ಬ್ರಹ್ಮ. ಶ್ರೀ .ಕರಣೀಕ ನರಹರಿಶರ್ಮಾ ಅವರ ನೇತೃತ್ವದ ತಂಡವು ವಿವಿಧ ಕಲ್ಯಾಣೋತ್ಸವದ ಪದ್ಧತಿಯಂತೆ ಆಚರಣೆ ಮಾಡಿ ಸೀತಾ ಕಲ್ಯಾಣೋತ್ಸವವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ ಉಪಾಧ್ಯಕ್ಷ ಕೆ.ಕೆ.ಮಂಜುನಾಥ ಸ್ವಾಮಿ, ಸಹ ಕಾರ್ಯದರ್ಶಿ ಕೆ.ಎಲ್. ಮಹೇಶ್ ಕುಮಾರ್ ಸೇರಿದಂತೆ ಸಮಿತಿ ನಿರ್ದೇಶಕರು ದೇವಾಲಯದ ಪ್ರಧಾನ ಆರ್ಚಕ ಹೆಚ್.ಆರ್. ರಾಘವೇಂದ್ರ ಚಾರ್ ಸೇರಿದಂತೆ ಕೂಡಿಗೆ, ಶಿರಂಗಾಲ ಗ್ರಾಮಸ್ಥರು ಹಾಜರಿದ್ದರು.









