
ಮಡಿಕೇರಿ ಮಾ.31 NEWS DESK : ನಾಪೋಕ್ಲುವಿನಲ್ಲಿ ಏ.1 ರಂದು ನಡೆಯಲಿರುವ ಹಿಂದೂ ಜನ ಜಾಗೃತಿ ಸಭೆಯ ಸಂಬಂಧ ಆಯೋಜಕರ ಮತ್ತು ಇತರೆ ಪ್ರಮುಖರನ್ನೊಳಗೊಂಡ ಶಾಂತಿ ಸಭೆಯನ್ನು ನಾಪೋಕ್ಲು ಠಾಣೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ, ಸಂಚಾರ ಮತ್ತು ರಸ್ತೆ ಸುರಕ್ಷತೆಯನ್ನು ಪಾಲಿಸುವುದು, ಆಯೋಜಕರ ಜವಾಬ್ದಾರಿಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.









